ರವಿ ದೀಕ್ಷಿತ್ 
ಕ್ರೀಡೆ

ಪ್ರಾಯೋಜಕರು ಸಿಗದೇ ಇರುವ ಕಾರಣ ಕಿಡ್ನಿ ಮಾರಲು ಮುಂದಾದ ಸ್ಕ್ವಾಶ್ ಆಟಗಾರ

ಭಾರತದ ಯುವ ಸ್ಕ್ವಾಶ್ ಆಟಗಾರ ರವಿ ದೀಕ್ಷಿತ್ ತನಗೆ ಪ್ರಾಯೋಜಕರು ಸಿಗುತ್ತಿಲ್ಲ, ಆದ್ದರಿಂದ ಕಿಡ್ನಿ ಮಾರಲು ತೀರ್ಮಾನಿಸಿದ್ದೀನಿ ಎಂದು ಸಾಮಾಜಿಕ ತಾಣದಲ್ಲಿ...

ನವದೆಹಲಿ:  ಭಾರತದ ಯುವ ಸ್ಕ್ವಾಶ್ ಆಟಗಾರ ರವಿ ದೀಕ್ಷಿತ್ ತನಗೆ ಪ್ರಾಯೋಜಕರು ಸಿಗುತ್ತಿಲ್ಲ, ಆದ್ದರಿಂದ ಕಿಡ್ನಿ ಮಾರಲು ತೀರ್ಮಾನಿಸಿದ್ದೀನಿ ಎಂದು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದರು. ಸ್ಕ್ವಾಶ್ ಆಟಗಾರನೊಬ್ಬನಿಗೆ ಒದಗಿ ಬಂದಿರುವ ಈ ಅವಸ್ಥೆ ಬಗ್ಗೆ ಮಾಧ್ಯಮಗಳು ಸುದ್ದಿ ಮಾಡುತ್ತಿದ್ದಂತೆ ರವಿ, ತಮ್ಮ ಸೋಷ್ಯಲ್ ಮೀಡಿಯಾ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಲು ಮುಂದೆ ಬಂದಿದ್ದಾರೆ.
ಫೇಸ್‌ಬುಕ್ ನಲ್ಲಿ ಹಾಕಿದ ಸ್ಟೇಟಸ್ ಈ ಮಟ್ಟದಲ್ಲಿ ಸುದ್ದಿಯಾಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ವರದಿಗಾರರೊಬ್ಬರು ಫೋನ್ ಮಾಡಿದ ನಂತರವೇ ಆ ಪೋಸ್ಟ್ ಇಷ್ಟೊಂದು ಸುದ್ದಿ ಮಾಡುತ್ತಿದೆ ಎಂಬುದು ಗೊತ್ತಾಗಿದ್ದು ಎಂದು ಮಾಜಿ ಏಷ್ಯನ್ ಜೂನಿಯರ್ ಚಾಂಪಿಯನ್ ರವಿ ಹೇಳಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಸೌತ್ ಏಷ್ಯನ್ ಗೇಮ್ಸ್ ನಲ್ಲಿ ರವಿ ಪಾಲ್ಗೊಳ್ಳಲಿದ್ದಾರೆ.
ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಸೌತ್ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ತರಬೇತಿ ಪಡೆಯುವುದಕ್ಕೆ ಮತ್ತು ಪ್ರಚಾರಕ್ಕಾಗಿ ಹಣ ಬೇಕಾಗಿದೆ. ಆ ಹಣ ಹೊಂದಿಸಲು ತಾನು ಕಿಡ್ನಿಯನ್ನು ಹರಾಜಿಗಿಡುವುದಾಗಿ ರವಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ರವಿ ತಾನು ಆ ಕ್ಷಣದಲ್ಲಿ ತೋಚಿದ್ದನ್ನು ಬರೆದಿದ್ದೆ. ಸ್ಕ್ವಾಶ್ ಎಂಬುದು ನನ್ನ ಬದುಕು, ನಾನು ಅದನ್ನು ಮುಂದುವರಿಸಲು ಬಯಸುತ್ತನೆ. ನಾನು ನನ್ನ ಕಿಡ್ನಿಯನ್ನು ಮಾರಲು ಬಯಸಿಲ್ಲ, ಎಲ್ಲವೂ ಆ ಕ್ಷಣಕ್ಕೆ ತೋಚಿದ್ದು. ನನಗೆ ಪ್ರಾಯೋಜಕರು ಬೇಕಾಗಿದ್ದಾರೆ. ನಾನು ಹಾಗೆ ಬರೆದದ್ದಕ್ಕೆ ಕ್ಷಮಿಸಿ. ನನಗೆ ಪ್ರೋತ್ಸಾಹ ನೀಡಿದ್ದ ನನ್ನ ಕುಟುಂಬ ಮತ್ತು ಜನರಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಎಂದು ರವಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT