ಟಾಮಿ ಸುಗಿಯಾರ್ತೊ 
ಕ್ರೀಡೆ

ಪಿಬಿಎಲ್: ಫೈನಲ್‍ಗೆ ಕಾಲಿಟ್ಟ ಡೆಲ್ಲಿ ಏಸರ್ಸ್

ವಿಶ್ವ ಬ್ಯಾಡ್ಮಿಂಟನ್ನಲ್ಲಿ 11ನೇ ಶ್ರೇಯಾಂಕದಲ್ಲಿರುವ ಟಾಮಿ ಸುಗಿಯಾರ್ತೊ ಅವರ ಪ್ರಚಂಡ ಪ್ರದರ್ಶನದ ಸಹಾಯದಿಂದ ಡೆಲ್ಲಿ ಏಸರ್ಸ್ ತಂಡ, ಬುಧವಾರ ನಡೆದ...

ಬೆಂಗಳೂರು: ವಿಶ್ವ ಬ್ಯಾಡ್ಮಿಂಟನ್ನಲ್ಲಿ 11ನೇ ಶ್ರೇಯಾಂಕದಲ್ಲಿರುವ ಟಾಮಿ ಸುಗಿಯಾರ್ತೊ ಅವರ ಪ್ರಚಂಡ ಪ್ರದರ್ಶನದ ಸಹಾಯದಿಂದ ಡೆಲ್ಲಿ ಏಸರ್ಸ್ ತಂಡ, ಬುಧವಾರ ನಡೆದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಪಂದ್ಯಾವಳಿಯಲ್ಲಿ ಚೆನ್ನೈ ಸ್ಮಾಷರ್ಸ್ ತಂಡವನ್ನು 4-3 ಅಂತರದಿಂದ ಸೋಲಿಸಿ,

ಈ ಬಾರಿಯ ಟೂರ್ನಿಯ ಪ್ರಶಸ್ತಿ ಸುತ್ತು ಪ್ರವೇಶಿಸಿತು. ಡೆಲ್ಲಿಗೆ ಆರಂಭಿಕ ಮುನ್ನಡೆ: ಇತ್ತಂಡಗಳು ನಡುವೆ ಮೊದಲು ಪುರುಷರ ಡಬಲ್ಸ್ ಪಂದ್ಯ ನಡೆಯಿತು. ಏಸರ್ಸ್ ಪರ ಕಣಕ್ಕಿಳಿದ ಮಲೇಷ್ಯಾ ಮೂಲದ ಕೂ ಕೇಟ್ ಕೀನ್ ಹಾಗೂ ಟ್ಯಾನ್ ಬೂನ್ ಹೆವೊಂಗ್ ಜೋಡಿ, ಸ್ಮಾಷರ್ಸ್ ತಂಡದ ಪ್ರಣವ್ ಚೋಪ್ರಾ ಕ್ರಿಸ್ ಅಡೋಕ್ ಜೋಡಿ ವಿರುದ್ಧ 15-10, 15-14 ಸೆಟ್ಗಳ ಅಂತರದಲ್ಲಿ ಜಯಿಸಿದರು. ಈ ಮೂಲಕ ಏಸರ್ಸ್ 1-0 ಅಂತರದ ಮುನ್ನಡೆ ಸಾಧಿಸಿತು. ಎರಡನೇ ಮುಖಾಮುಖಿಯಾದ ಪುರುಷರ ಸಿಂಗಲ್ಸ್ನಲ್ಲಿ ಏಸರ್ಸ್ ತಂಡದ ಅಜಯï ಜಯರಾಮï, ಡೆಲ್ಲಿ ತಂಡದ ಸೋನಿ ಡ್ವಿ ಕುಂಕೊರೊ ವಿರುದ್ಧ 14-15, 15-10, 15-7 ಅಂತರದಲ್ಲಿ ಜಯಿಸಿ, ಡೆಲ್ಲಿಗೆ 2-0 ಅಂತರ ಮುನ್ನಡೆ ತಂದರು.

ಖಾತೆ ತೆರೆದ ಚೆನ್ನೈ: ಮೂರನೇ ಮುಖಾಮುಖಿಯಾದ ಮಿಶ್ರ ಡಬಲ್ಸ್ನಲ್ಲಿ, ಏಸಸ್ ತಂಡದ ಗ್ಯಾಬ್ರಿಯಲ್ ಅವರು, ಕೀನ್ ಅವರ ಜೊತೆಗೂಡಿ ತಮ್ಮ ಪತಿ ಕ್ರಿಸ್ ವಿರುದ್ಧವೇ ಕಣಕ್ಕಿಳಿದಿದ್ದು ವಿಶೇಷವಾಗಿತ್ತು. ಈ ಪಂದ್ಯದಲ್ಲಿ ಕ್ರಿಸ್ಪಿಯಾ ಜೆಬಾಡಿ ಜೋಡಿ ಜಯ ಸಾಧಿಸುವ ಮೂಲಕ ಚೆನ್ನೈ ಸ್ಮಾಷರ್ಸ್ ಅಂಕಗಳ ಖಾತೆ ತೆರೆಯಿತು. ಈ ಪಂದ್ಯ ಮುಗಿದಾಗ, ಡೆಲ್ಲಿ ತಂಡ, ಚೆನ್ನೈಗಿಂತ 2-1ರ ಮುನ್ನಡೆ ಹೊಂದಿತ್ತು. ಆನಂತರ, 4ನೇ ಮುಖಾಮುಖಿಯಾದ ಮಹಿಳೆಯರ ಸಿಂಗಲ್ಸ್ ಪಂದ್ಯವನ್ನು ಚೆನ್ನೈ ಸ್ಮಾಷರ್ಸ್ ಟ್ರಂಪ್ ಪಂದ್ಯವೆಂದು ಪರಿಗಣಿಸಿತು. ಈ ಪಂದ್ಯದಲ್ಲಿ ಚೆನ್ನೈ ಪರ ಕಣಕ್ಕಿಳಿದ ಪಿ.ವಿ. ಸಿಂಧು, ಡೆಲ್ಲಿ ತಂಡದ ಪಿ.ಸಿ. ತುಳಸಿ ವಿರುದ್ಧ 15-6, 15-7 ಸೆಟ್ಗಳ ಅಂತರದಲ್ಲಿ ಗೆದ್ದು, ತಮ್ಮ ತಂಡಕ್ಕೆಕ 2 ಅಂಕ ತಂದುಕೊಟ್ಟರು. ಅಲ್ಲಿಗೆ, ಚೆನ್ನೈ ತಂಡ, ಡೆಲ್ಲಿ ಏಸರ್ಸ್ ತಂಡವನ್ನು 32 ಅಂಕಗಳಿಂದ ಹಿಂದಿಕ್ಕಿತು.

ನೆರವಾದ ಸುಗಿಯಾರ್ತೋ: ಇದಾದ ಮೇಲೆ ನಡೆದ ಐದನೇ ಮುಖಾಮುಖಿಯಾದ ಪುರುಷರ ಸಿಂಗಲ್ಸ್ ಪಂದ್ಯವನ್ನು ಏಸಸ್ ತಂಡ, ಟ್ರಂಪ್ ಪಂದ್ಯವೆಂದು ಘೋಷಿಸಿತು. ಈ ಪಂದ್ಯದಲ್ಲಿ ಏಸರ್ಸ್ ಪರ ಕಣಕ್ಕಿಳಿದ ಸುಗಿಯಾರ್ತೋ, ಸ್ಮಾಷರ್ಸ್ ತಂಡದ ಬ್ರಿಸ್ ಲೆವೆರ್ಡೆಸ್ ವಿರುದ್ಧ 15-11, 15-14 ಸೆಟ್ಗಳ ಅಂತರ ದಲ್ಲಿ ಜಯ ಸಾಧಿಸಿ, ತಮ್ಮ ತಂಡಕ್ಕೆ 2 ಅಂಕ ದೊರಕಿಸಿಕೊಟ್ಟರು. ಈ ಅಂಕಗಳಿಂದಾಗಿ ಡೆಲ್ಲಿ ಏಸರ್ಸ್ ತಂಡ, ಚೆನ್ನೈ ತಂಡವನ್ನು 4-3 ಅಂಕಗಳ ಮೂಲಕ ಮಣಿಸಿ, ಫೈನಲ್ ಪ್ರವೇಶಿಸಲು ಸಾಧ್ಯವಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT