ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಕರ್ನಾಟಕ ತಂಡ (ಸಂಗ್ರಹ ಚಿತ್ರ) 
ಕ್ರೀಡೆ

ಸಿಸಿಎಲ್-6: ಭಾನುವಾರ ಕರ್ನಾಟಕ-ಚೆನ್ನೈ ಮುಖಾಮುಖಿ

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ ಆರನೇ ಆವೃತ್ತಿಯ ಟೂರ್ನಿಯಲ್ಲಿ ನಟ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಭಾನುವಾರದಿಂದ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ನಟ ಜೀವಾ ನೇತೃತ್ವದ ಚೆನ್ನೈ ರೈನೋಸ್ ತಂಡವನ್ನು ಎದುರಿಸಲಿದೆ...

ಬೆಂಗಳೂರು: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ ಆರನೇ ಆವೃತ್ತಿಯ ಟೂರ್ನಿಯಲ್ಲಿ ನಟ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಭಾನುವಾರದಿಂದ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ನಟ ಜೀವಾ ನೇತೃತ್ವದ ಚೆನ್ನೈ ರೈನೋಸ್ ತಂಡವನ್ನು ಎದುರಿಸಲಿದೆ.

ಸಿಸಿಎಲ್ ನ ಮೊದಲೆರಡು ಟೂರ್ನಿಯ ಫೈನಲ್ ನಲ್ಲಿ ಕರ್ನಾಟಕವನ್ನು ಮಣಿಸಿದ್ದ ಚೆನ್ನೈ ರೈನೋಸ್ ತಂಡ ಈ ಬಾರಿ ಮೊದಲ ಪಂದ್ಯದಲ್ಲಿಯೇ ಎದುರಾಗಿದ್ದು, ಚೈನ್ನೈ ತಂಡವನ್ನು ಮಣಿಸಲು ಕರ್ನಾಟಕ ತಂಡ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ. ಆಡಿರುವ ಐದು ಆವೃತ್ತಿಯಲ್ಲಿ 4 ಬಾರಿ ಫೈನಲ್ ಆಡಿರುವ ಏಕೈಕ ತ೦ಡ ಎನ್ನುವ ಹೆಮ್ಮೆ ಕನಾ೯ಟಕ ತಾರೆಗಳ ತ೦ಡದ್ದಾಗಿದ್ದು, ಈಗಾಗಲೇ 2 ಭಾರಿ ಪ್ರಶಸ್ತಿಗೆ ಮುತ್ತಿಟ್ಟಿದೆ. 3ನೇ ಬಾರಿಯೂ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಆಟಗಾರರಿದ್ದಾರೆ.

ತಾಪ್ಸಿ ರಾಯಭಾರಿ
ಸಿಸಿಎಲ್‍ನ ಆರನೇ ಆವೃತ್ತಿಗೆ ನಟಿ ತಾಪ್ಸಿ ಪನ್ನು ಅವರು ರಾಯಭಾರಿಯಾಗಿ ಆಯ್ಕೆಯಾಗಿದ್ದು, ಮು೦ಬ್ಯೆ ತ೦ಡಕ್ಕೆ ಕೃತಿ ಸನೋನ್ ರಾಯಭಾರಿಯಾಗಿದ್ದಾರೆ. ಕನಿಷ್ಠ 45 ರೂ. ಮುಖಬೆಲೆಯ ಟಿಕೆಟ್‍ಗಳಿ೦ದಾಗಿ ಸಿಸಿಎಲ್ ಪ್ರೇಕ್ಷಕ-ಸ್ನೇಹಿಯೂ ಆಗಿದೆ.  ಸಿಸಿಎಲ್ ಆರ೦ಭಕ್ಕೆ ಮುನ್ನ ಶುಕ್ರವಾರ ಬೆ೦ಗಳೂರಿನಲ್ಲಿ ನಡೆದ ಸಮಾರ೦ಭದಲ್ಲಿ ಅಶೋಕ್ ಖೇಣಿ, ಸುದೀಪ್, ನಟಿ ಶಮಿ೯ಳಾ ಮಾ೦ಡೆ್ರ ಹಾಜರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

SCROLL FOR NEXT