ಕ್ರೀಡಾ ಸಚಿವ ವಿಜಯ್ ಗೋಯೆಲ್ 
ಕ್ರೀಡೆ

ಮಾದಕವಸ್ತು ಸೇವನೆ ಪರೀಕ್ಷೆಯಲ್ಲಿ ನಪಾಸಾದವರಿಗೆ ಬದಲಿ ಸಾಧ್ಯವಿಲ್ಲ: ವಿಜಯ್ ಗೋಯೆಲ್

ಒಲಂಪಿಕ್ಸ್ ತಂಡದಲ್ಲಿರುವ ಆಟಗಾರರು ಆಂಟಿ-ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾದರೆ ಅವರಿಗೆ ಬದಲಾಗಿ ಬೇರೆ ಆಟಗಾರರನ್ನು ಕಳಿಸುವ ಸೌಲಭ್ಯ ಇಲ್ಲ ಎಂದು ಬುಧವಾರ ಕ್ರೀಡಾ ಸಚಿವ

ನವದೆಹಲಿ: ಒಲಂಪಿಕ್ಸ್ ತಂಡದಲ್ಲಿರುವ ಆಟಗಾರರು ಆಂಟಿ-ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾದರೆ ಅವರಿಗೆ ಬದಲಾಗಿ ಬೇರೆ ಆಟಗಾರರನ್ನು ಕಳಿಸುವ ಸೌಲಭ್ಯ ಇಲ್ಲ ಎಂದು ಬುಧವಾರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಹೇಳಿದ್ದಾರೆ. 
"ಮೂಲ ಆಟಗಾರ ಮಾದಕವಸ್ತು ಸೇವನೆ ಪರೀಕ್ಷೆಯಲ್ಲಿ ನಪಾಸಾದರೆ ಬದಲಿ ಆಟಗಾರನಿಗೆ ಅವಕಾಶ ಇಲ್ಲ ಎಂದು ತಿಳಿದಿದ್ದೇನೆ" ಎಂದು ಗೋಯೆಲ್ ಸಂಸತ್ತಿನಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ. 
"ಯಾವುದಾದರೂ ಆಟಗಾರ ಗಂಭೀರ ಅನಾರೋಗ್ಯಕ್ಕೆ ತುತ್ತಾದರೆ ಮಾತ್ರ ಅಂತಹ ಅಸಾಧಾರಣ ಸಂದರ್ಭದಲ್ಲಿ ಬದಲಿ ಆಟಗಾರನನ್ನು ಕಳಿಸುವ ಅವಕಾಶ ಇರುತ್ತದೆ" ಎಂದು ಬಿಜೆಪಿ ಪಕ್ಷದ ಮುಖಂಡ ಹೇಳಿದ್ದಾರೆ. 
ಕುಸ್ತಿ ಪಟು ಸರಸಿಂಗ್ ಯಾದವ್ ಅವರು ಮಾದಕವಸ್ತು ಸೇವನೆ ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ಬಂದಿದ್ದರ ಪರಿಣಾಮ ರಿಯೋ ಒಲಂಪಿಕ್ಸ್ ನಿಂದ ವಜಾಗೊಂಡಿರುವುದರಿಂದ ಅವರ ಬದಲಿಗೆ ಮತ್ತೊಬ್ಬ ಆಟಗಾರನನ್ನು ಕಳುಹಿಸಬಹುದೇ ಎಂಬ ಪ್ರಶ್ನೆಗೆ ಗೋಯೆಲ್ ಪ್ರತಿಕ್ರಿಯಿಸಿದ್ದಾರೆ. 
74 ಕೆಜಿ ಕುಸ್ತಿ ಆಟಕ್ಕೆ ಮಂಗಳವಾರ ನರಸಿಂಗ್ ಬದಲಿಗೆ ಪ್ರವೀಣ್ ಕುಮಾರ್ ರಾಣಾ ಅವರನ್ನು ಹೆಸರನ್ನು ಘೋಷಿಸಲಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT