ಭಾರತ ಹಾಕಿ ತಂಡ (ಸಂಗ್ರಹ ಚಿತ್ರ) 
ಕ್ರೀಡೆ

ಶೂಟ್ ಔಟ್ ವಿವಾದ: ಭಾರತ ಹಾಕಿ ತಂಡದಿಂದ ಅಧಿಕೃತ ದೂರು

ಅಂಪೈರ್ ಗಳ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡಿರುವ ಭಾರತ ಹಾಕಿ ತಂಡ ಈ ಸಂಬಂಧ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆಗೆ ಅಧಿಕೃತ ದೂರು ಸಲ್ಲಿಸಿದೆ.

ಲಂಡನ್: ಅಂಪೈರ್ ಗಳ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡಿರುವ ಭಾರತ ಹಾಕಿ ತಂಡ ಇದೀಗ ಅಂತಾರಾಷ್ಟ್ರೀಯ ಹಾಕಿ  ಸಂಸ್ಥೆಗೆ ಈ ಸಂಬಂಧ ಅಧಿಕೃತ ದೂರು ಸಲ್ಲಿಸಿದೆ.

ನಿನ್ನೆ ಲಂಡನ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಶೂಟ್ ಔಟ್ ವೇಳೆ ಅಂಪೈರ್ ಗಳು ನೀಡಿದ ತೀರ್ಪುಗಳು ಆಸ್ಟ್ರೇಲಿಯಾ ತಂಡಕ್ಕೆ ವರವಾಗಿ ಪರಿಣಮಿಸಿ ಭಾರತ 1-3  ಅಂತರದಿಂದ ಸೋಲುವಂತಾಗಿತ್ತು. ಪೆನಾಲ್ಟಿ ಶೂಟೌಟ್​ನಲ್ಲಿ ಆಸ್ಟ್ರೇಲಿಯಾದ ಬೇಲೆ ಅವರಿಗೆ 2ನೇ ಅವಕಾಶ ನೀಡಿದ ಕುರಿತು ಭಾರತ ತಂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪೆನಾಲ್ಟಿ  ಶೂಟೌಟ್ ವೇಳೆ ಬೇಲೆ ಚೆಂಡು ಬಾರಿಸುವಾಗ ಗೋಲ್ ಪೋಸ್ಟ್ ಬಳಿ ಸ್ವಲ್ಪ ಅಡಚಣೆ ಉಂಟಾದ ಕಾರಣ ಬೇಲೆ ಅವರಿಗೆ 2ನೇ ಅವಕಾಶ ನೀಡಲಾಯಿತು. ಭಾರತ ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿತು. ನಂತರ ಅಂಪೈರ್​ಗಳು, ಪಂದ್ಯದ ರೆಫ್ರಿ ಮತ್ತು ಟೂರ್ನಿಯ ಆಯೋಜಕರು ಮೈದಾನಕ್ಕಿಳಿದು 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಹಾಗಾಗಿ ಫಲಿತಾಂಶ ಪ್ರಕಟವಾಗಲು 1 ಗಂಟೆ ವಿಳಂಬವಾಗಿತ್ತು.

ಬೇಲೆ ಚೆಂಡು ಬಾರಿಸಲು ಸಿದ್ಧತೆ ನಡೆಸುವಾಗ 7ನೇ ಸೆಕೆಂಡ್​ನಲ್ಲಿ ಭಾರತದ ಗೋಲ್ ಕೀಪರ್ ಪಿ.ಆರ್.ಶ್ರೀಜೀಶ್ ಅನುದ್ದೇಶಿತವಾಗಿ ಸ್ವಲ್ಪ ಅಡಚಣೆ ಮಾಡಿದ್ದರು. ಹಾಗಾಗಿ ಬೇಲೆಗೆ 2ನೇ ಅವಕಾಶ ನೀಡಲಾಯಿತು ಎಂದು ತೀರ್ಪುಗಾರರು ತೀರ್ಮಾನಿಸಿದ ಕಾರಣ ಭಾರತ ಪಂದ್ಯದಲ್ಲಿ ಸೋಲು ಒಪ್ಪಿಕೊಂಡು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿತು.

ಇದೀಗ ಈ ವಿವಾದತ್ಮಕ ತೀರ್ಪಿನ ವಿರುದ್ಧ ಭಾರತ ಹಾಕಿ ತಂಡ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆಗೆ ದೂರು ನೀಡಿದ್ದು, ಹಾಕಿ ಸಂಸ್ಥೆ ನಿರ್ದೇಶಕರಿಗೆ ಭಾರತ ಹಾಕಿ ತಂಡದ ಸದಸ್ಯರು ದೂರು  ಸಲ್ಲಿಕೆ ಮಾಡಿದ್ದಾರೆ. ಭಾರತದ ಗೋಲ್ ಕೀಪರ್ ಶ್ರೀಜೀಶ್ ಉದ್ದೇಶಪೂರ್ವಕವಾಗಿ ಬೇಲೆ ಅವರಿಗೆ ಅಡಚಣೆ ಮಾಡಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT