ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ 
ಕ್ರೀಡೆ

ವಿಶ್ವಕಪ್ ಕಬ್ಬಡ್ಡಿ: ಕಾಂಗರೂಗಳ ವಿರುದ್ಧ ಬಾಂಗ್ಲಾದೇಶಕ್ಕೆ ವಿಶ್ವ ದಾಖಲೆ ಜಯ

ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಕಬ್ಬಡ್ಡಿ 2016ರಲ್ಲಿ ಬಾಂಗ್ಲಾದೇಶದ ಪಾರಮ್ಯ ಮುಂದುವರೆದಿದ್ದು, ಸೋಮವಾರ ಬಲಾಢ್ಯ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಬರೊಬ್ಬರಿ 80-8 ಅಂಕಗಳ ಅಂತರದ ವಿಶ್ವದಾಖಲೆ ಜಯ ಸಾಧಿಸಿದೆ.

ಅಹ್ಮದಾಬಾದ್: ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಕಬ್ಬಡ್ಡಿ 2016ರಲ್ಲಿ ಬಾಂಗ್ಲಾದೇಶದ ಪಾರಮ್ಯ ಮುಂದುವರೆದಿದ್ದು, ಸೋಮವಾರ ಬಲಾಢ್ಯ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ  ಪಂದ್ಯದಲ್ಲಿ ಬರೊಬ್ಬರಿ 80-8 ಅಂಕಗಳ ಅಂತರದ ವಿಶ್ವದಾಖಲೆ ಜಯ ಸಾಧಿಸಿದೆ.

ಅಹ್ಮದಾಬಾದ್ ನ ಟ್ರಾನ್ಸ್ ಸ್ಟೇಡಿಯಾದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸವಾರಿ ಮಾಡಿದ ಬಾಂಗ್ಲಾದೇಶ ಆಟಗಾರರು ವಿಶ್ವದಾಖಲೆಯ 80-8 ಅಂಕಗಳ  ಅಂತರದಿಂದ ಗೆಲುವು ಸಾಧಿಸಿದರು. ಅಂತಾರಾಷ್ಟ್ರೀಯ ಕಬ್ಬಡ್ಡಿ ಇತಿಹಾಸದಲ್ಲಿಯೇ ತಂಡವೊಂದು ಗಳಿಸಿದ ಗರಿಷ್ಟ ಅಂಕಗಳಿದಾಗಿದ್ದು, ಈ ಪೈಕಿ 42 ಅಂಕಗಳು ರೈಡಿಂಗ್ ನಿಂದ ಬಂದ  ಅಂಕಗಳಾಗಿದ್ದು, 18 ಅಂಕಗಳು ಟ್ಯಾಕಲ್ ನಿಂದ ಬಂದದ್ದಾಗಿದೆ. ಉಳಿದ 20 ಅಂಕಗಳು ಇತರೆ ವಿಭಾಗದಿಂದ ಬಂದಿದೆ.

ಆರಂಭದಿಂದಲೂ ಆಸ್ಟ್ರೇಲಿಯಾ ಮೇಲೆ ಮುಗಿ ಬಿದ್ದ ಬಾಂಗ್ಲಾದೇಶ ಆಟಗಾರರು ಪಂದ್ಯ ಆರಂಭವಾದ ಕೇವಲ ಮೂರೇ ನಿಮಿಷದಲ್ಲಿ ಆಸಿಸ್ ಆಟಗಾರರನ್ನು ಆಲ್ ಔಟ್ ಮಾಡುವ ಮೂಲಕ  ಮೊದಲ ಯಶಸ್ಸು ಸಾಧಿಸಿದರು. ಬಳಿಕ ರೈಡಿಂಗ್ ಹಾಗೂ ಬಲಿಷ್ಟ ಟ್ಯಾಕಲ್ ಗಳಿಂದ ಅಂಕಗಳನ್ನು ಸಂಪಾದಿಸುತ್ತಲೇ ಹೋದ ಬಾಂಗ್ಲಾದೇಶದ ಎದುರು ಆಸ್ಟ್ರೇಲಿಯಾ ಒಂದೊಂದು  ಅಂಕಗಳಿಕೆಗೂ ಪರದಾಡುವಂತೆ ಮಾಡಿತ್ತು. ಇಡೀ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಬರೊಬ್ಬರಿ 7 ಬಾರಿ ಆಲ್ ಔಟ್ ಆಯಿತು ಎಂದರೆ ಬಾಂಗ್ಲಾದೇಶದ ದಾಳಿ ಹೇಗಿತ್ತು ಎಂಬುದನ್ನು  ಊಹಿಸಿಕೊಳ್ಳಬಹುದು.

ವಿಶ್ವಕಪ್ ಟೂರ್ನಿ ಆರಂಭಕ್ಕೂ ಮೊದಲು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಆಸ್ಟ್ರೇಲಿಯಾ ತನ್ನ ಹೀನಾಯ ಪ್ರದರ್ಶನದ ಮೂಲಕ ಇದೀಗ ಟೂರ್ನಿಯಿಂದ ಹೊರಬಿದ್ದಿದೆ. ಪ್ರಮುಖವಾಗಿ  ಸೋಮವಾರ ಬಾಂಗ್ಲಾ ವಿರುದ್ಧದ ಪಂದ್ಯವನ್ನು ಗೆದ್ದು ಟೂರ್ನಿಗೆ ಗೌರವಯುತ ವಿದಾಯ ಹೇಳುವ ವಿಶ್ವಾಸದಲ್ಲಿದ್ದ ಆಸ್ಟ್ರೇಲಿಯಾಗೆ ಬಾಂಗ್ಲಾದೇಶದ ಆಟಗಾರರು ಈ ಭರ್ಜರಿ ಗೆಲುವಿನ ಮೂಲಕ  ಗಾಯದ ಬರೆ ಎಳೆದಿದ್ದಾರೆ.

ಈ ಭರ್ಜರಿ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಬಾಂಗ್ಲಾದೇಶ 3ನೇ ಸ್ಥಾನಕ್ಕೆ ಜಿಗಿದಿದೆ. ಎ ವಿಭಾಗದ ಪಟ್ಟಿಯಲ್ಲಿ ಪ್ರಸ್ತುತ 25 ಅಂಕ ಗಳಿಸಿರುವ ಕೊರಿಯಾ ಮೊದಲ ಸ್ಥಾನದಲ್ಲಿದ್ದು, 16  ಅಂಕಗಳಿಸಿರುವ ಭಾರತ ಎರಡನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

SCROLL FOR NEXT