'ಸ್ಲಂ ಯುವ ದೌಡ್'ಗೆ ಚಾಲನೆ ನೀಡಿದ ಕ್ರೀಡಾ ಸಚಿವ ಗೋಯೆಲ್ 
ಕ್ರೀಡೆ

'ಸ್ಲಂ ಯುವ ದೌಡ್'ಗೆ ಚಾಲನೆ ನೀಡಿದ ಕ್ರೀಡಾ ಸಚಿವ ಗೋಯೆಲ್

ಸ್ಲಂ ಯುವ ದೌಡ್ (ಸ್ಲಂ ಯುವಕರ ಓಟ) ಎರಡನೇ ಮ್ಯಾರಥಾನ್ ಗೆ ಕ್ರೀಡಾ ಸಚಿವ ವಿಜಯ್ ಗೋಯಲ್, ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರೊಂದಿಗೆ ಶನಿವಾರ ಚಾಲನೆ

ನವದೆಹಲಿ: ಸ್ಲಂ ಯುವ ದೌಡ್ (ಸ್ಲಂ ಯುವಕರ ಓಟ) ಎರಡನೇ ಮ್ಯಾರಥಾನ್ ಗೆ ಕ್ರೀಡಾ ಸಚಿವ ವಿಜಯ್ ಗೋಯಲ್, ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರೊಂದಿಗೆ ಶನಿವಾರ ಚಾಲನೆ ನೀಡಿದ್ದಾರೆ.
ಈ ಮ್ಯಾರಥಾನ್ ಕರ್ಕಾರ್ದೂಮಡಾ ಕ್ರಾಸ್ ರಿವರ್ ಮಾಲ್ ನಿಂದ ಪ್ರಾರಂಭವಾಗಿ ಯಮುನಾ ಕ್ರೀಡಾ ಸಮುಚ್ಚಯದ ಬಳಿ ಮುಕ್ತಾಯಗೊಂಡಿದೆ. ಇದರಲ್ಲಿ ೫೦೦೦ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದಾರೆ. 
ಸ್ಲಂ ದತ್ತು ಸ್ವೀಕರಿಸಿ ಅಭಿಯಾನದ ಭಾಗವಾಗಿರುವ ಸ್ಲಂ ಯುವ ದೌಡ್ ನನ್ನು ಕ್ರೀಡಾ ಸಚಿವಾಲಯ ಮತ್ತು ನೆಹರು ಯುವ ಕೇಂದ್ರ ಸಂಘಟನೆ ಜಂಟಿಯಾಗಿ ಆಯೋಜಿಸಿದೆ. 
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಗೋಯಲ್ "ಯುವಕರನ್ನು ಒಂದೆಡೆ ಸೇರಿಸಿ ಅವರ ಕೌಶಲ್ಯ ಮತ್ತು ಐಡಿಯಾಗಳ ಬಗ್ಗೆ ತಿಳಿಯಲು ಇದು ನಮಗೆ ಸಹಕರಿಸುತ್ತದೆ. ಸ್ವಚ್ಛತೆ, ಡಿಜಿಟಲ್ ಇಂಡಿಯಾ ಮತ್ತು ಭೇಟಿ ಬಚಾವೋ ಆಂದೋಲನಗಳ ಭಾಗವಾಗಿ ಸ್ಲಂಗಳಲ್ಲಿ ಸಣ್ಣ ಉತ್ಸವಗಳನ್ನು ಆಯೋಜಿಸಲಿದ್ದೇವೆ" ಎಂದು ಹೇಳಿದ್ದಾರೆ. 
"ನಮ್ಮ ಗುರಿ ಮಾದರಿ ಸ್ಲಂಗಳನ್ನು ಸೃಷ್ಟಿಸುವುದು ಮತ್ತು ಬದಲಾವಣೆಯ ಭಾಗವಾಗಿ ಅವರ ಸ್ಲಂ ಮತ್ತು ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಸಹಕರಿಸುವ ಯುವಕರ ಪಡೆಗಳನ್ನು ರಚಿಸುವುದು" ಎಂದು ಕೂಡ ಗೋಯಲ್ ಹೇಳಿದ್ದಾರೆ. 
ಭಾನುವಾರ ಮೂರನೇ ಸ್ಲಂ ಯುವ ಮ್ಯಾರಥಾನ್ ಜರುಗಲಿದ್ದು ಇದಕ್ಕೆ ಕ್ರೀಡಾ ಸಚಿವರ ಜೊತೆಗೆ ಒಲಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಚಾಲನೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?