ನವದೆಹಲಿ: ವರ್ಷವಿಡಿ ವಿರಾಮವಿಲ್ಲದ ಕ್ರಿಕೆಟ್ ನಿಂದಾಗಿ ನಮ್ಮ ಆಟಗಾರರು ಸಾಕಷ್ಟು ದಣಿವು ಅನುಭವಿಸುತ್ತಿದ್ದಾರೆ. ಅವರ ದಣಿವು ನಿವಾರಿಸಲು ಕನಿಷ್ಟ ಪ್ರಯತ್ನವಾಗಿ ದೂರದ ಪ್ರಯಾಣವನ್ನು ತಪ್ಪಿಸುವ ನಿಟ್ಟಿನಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನದೇ ಆದ ಖಾಸಗಿ ವಿಮಾನವನ್ನು ಹೊಂದಿರಬೇಕು ಎಂದು ಬಾರತ ಕ್ರಿಕೆಟ್ ತಂದದ ಮಾಜಿ೮ ನಾಯಕ, ಕಪಿಲ್ ದೇವ್ ಹೇಳಿದ್ದಾರೆ.
ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕಪಿಲ್ ದೇವ್ ಮಾತನಾಡಿ, ಬಿಸಿಸಿಐ ಈಗ ಉತ್ತಮ ಆದಾಯ ಹೊಂದಿದೆ. ಹಾಗಾಗಿ ಖಾಸಗಿ ವಿಮಾನ ಹೊಂದುವುದೇನೂ ಕಠಿಣವಾಗಲಾರದು. ವಿಮಾನ ಖರೀದಿಸುವ ಮೂಲಕ ಸಮಯ ಉಳಿತಾಯದೊಂದಿಗೆ ಆಟಗಾರರ ಜೀವನ ಕೂದ ತುಸು ಆರಾಮ ಆಗುತ್ತದೆ ಎಂದರು.
ಮುಂದುವರಿದು ಭವಿಷ್ಯದಲ್ಲಿ ಆಟಗಾರರು ತಮ್ಮದೇ ಆದ ಸ್ವಂತ ಖಾಸಗಿ ವಿಮಾನದೊಂದಿಗೆ ಆಗಮಿಸುವುದನ್ನು ನೋಡಲು ನಾನು ಇಷ್ಟಪಡುತ್ತೇನೆ ಎಂದು ತಿಳಿಸಿದರು.
ಬಿಸಿಸಿಐ ವಿಮಾನ ಖರೀದಿಸಿದರೆ ಇದರಿಂದ ಆಟಗಾರರಿಗೆ ಅವಶ್ಯಕ ವಿಶ್ರಾಂತಿ ದೊರಕುವುದಷ್ಟೇ ಅಲ್ಲದೆ 20 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಲಭಿಸಲಿದೆ ಎಂದು ಅಭಿಪ್ರಾಯ ಪಟ್ಟರು.