ರಾಮ್ ಕುಮಾರ್ 
ಕ್ರೀಡೆ

ಡೇವಿಸ್‌ ಕಪ್ ಅರ್ಹತಾ ಪಂದ್ಯ: ರಾಮನಾಥನ್‌, ಪ್ರಜ್ಞೇಶ್ ಗೆ ಸೋಲು,ಇಟಲಿಗೆ 2-0 ಮುನ್ನಡೆ

ಇಲ್ಲಿನ ಸೌತ್‌ ಕ್ಲಬ್‌ನಲ್ಲಿ ನಡೆದ ಡೇವಿಸ್ ಕಪ್‌ ಅರ್ಹತಾ ಸುತ್ತಿನ ಅಂತಿಮ ದಿನದ ಪಂದ್ಯದಲ್ಲಿ ಭಾರತದ ರಾಮ್‌ಕುಮಾರ್‌ ರಾಮನಾಥನ್‌ ಹಾಗೂ ಪ್ರಜ್ಞೇಶ್ ಗುಣೇಶ್ವರನ್ ಸೋಲುವ ಮೂಲಕ ಇಟಲಿ 2-0 ಅಂಕದೊಂದಿಗೆ ಮುನ್ನಡೆ ಪಡೆದುಕೊಂಡಿದೆ.

ಕೊಲ್ಕತ್ತಾ:  ಇಲ್ಲಿನ ಸೌತ್‌ ಕ್ಲಬ್‌ನಲ್ಲಿ ನಡೆದ ಡೇವಿಸ್ ಕಪ್‌ ಅರ್ಹತಾ ಸುತ್ತಿನ  ಅಂತಿಮ ದಿನದ ಪಂದ್ಯದಲ್ಲಿ   ಭಾರತದ ರಾಮ್‌ಕುಮಾರ್‌ ರಾಮನಾಥನ್‌ ಹಾಗೂ ಪ್ರಜ್ಞೇಶ್ ಗುಣೇಶ್ವರನ್ ಸೋಲುವ ಮೂಲಕ ಇಟಲಿ 2-0 ಅಂಕದೊಂದಿಗೆ ಮುನ್ನಡೆ ಪಡೆದುಕೊಂಡಿದೆ.

ಇಟಲಿಯ ಆ್ಯಂಡ್ರೆಸ್‌ ಸೆಪ್ಪೆ ವಿರುದ್ಧ 6-4, 6-2 ಅಂತರದಲ್ಲಿ ರಾಮ್ ಕುಮಾರ್  ರಾಮನಾಥನ್ ಸೋಲು ಅನುಭವಿಸಿದರು.ಪಂದ್ಯದ ಆರಂಭದಲ್ಲಿ ಸತತ ನಾಲ್ಕು ಸರ್ವ್ ಗಳಲ್ಲಿ ಮುನ್ನಡೆ ಸಾಧಿಸಿದ್ದ ರಾಮನಾಥನ್‌, ಒಂಬತ್ತನೇ ಸರ್ವ್‌ನಲ್ಲಿ ಎದುರಾಳಿ ಆಟಗಾರ ಸೆಪ್ಪೆ ವಿರುದ್ಧ 4-5 ಹಿನ್ನಡೆ ಅನುಭವಿಸಿದರು. ಅಂತಿಮವಾಗಿ ಮೊದಲ ಸೆಟ್‌ನಲ್ಲಿ ಸೆಪ್ಪೆ ಅವರು 6-4 ಅಂತರದಲ್ಲಿ ಭಾರತದ ರಾಮ್‌ಕುಮಾರ್‌  ಅವರನ್ನು ಮಣಿಸಿದರು.

ನಂತರ ಎರಡನೇ ಸೆಟ್‌ನಲ್ಲಿ ಒತ್ತಡದಲ್ಲಿ ಕಣಕ್ಕೆ ಇಳಿದ ಭಾರತದ ಎರಡನೇ ಶ್ರೇಯಾಂಕಿತ ಆಟಗಾರ ರಾಮನಾಥನ್‌ ಅವರು, ನೀರಸ ಪ್ರದರ್ಶನ ತೋರಿ  2-6 ಅಂತರದಲ್ಲಿ ಹೀನಾಯವಾಗಿ ಸೋಲು ಕಂಡರು. 
ಇದಾದ ಕೆಲವೇ ತಾಸುಗಳಲ್ಲಿ  ರೈಸಿಂಗ್ ಸ್ಟಾರ್  ಮ್ಯಾಟೊ ಬೆರೆಟಿನಿ ವಿರುದ್ಧ ಭಾರತದ ಪ್ರಜ್ಞೇಶ್  ಗುಣೇಶ್ವರನ್  6-4, 6-3 ಅಂತರದಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ಭಾರತ ಮೊದಲನೇ ಸಿಂಗಲ್ಸ್‌ನಲ್ಲಿ ಸೋಲು ಅನುಭವಿಸಿತು.ಇಟಲಿ 2-0ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ..

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT