ಪಿ.ವಿ ಸಿಂಧು 
ಕ್ರೀಡೆ

ಜಪಾನ್‌ ಓಪನ್‌ನಿಂದ ಭಾರತದ ಪಿ.ವಿ ಸಿಂಧು ಔಟ್‌

ಭಾರತ ಅಗ್ರ ಶ್ರೇಯಾಂಕಿತೆ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ ಸಿಂಧು ಅವರು ಇಲ್ಲಿ ನಡೆಯುತ್ತಿರುವ ಜಪಾನ್‌ ಓಪನ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು...

ಟೋಕಿಯೊ: ಭಾರತ ಅಗ್ರ ಶ್ರೇಯಾಂಕಿತೆ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ ಸಿಂಧು ಅವರು ಇಲ್ಲಿ ನಡೆಯುತ್ತಿರುವ ಜಪಾನ್‌ ಓಪನ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಅನುಭವಿಸುವ ಮೂಲಕ ಟೂರ್ನಿಯಿಂದ ಹೊರ ನಡೆದರು.
ಶುಕ್ರವಾರ 50 ನಿಮಿಷಗಳ ಕಾಲ ನಡೆದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದ ವಿಶ್ವದ ಐದನೇ ಶ್ರೇಯಾಂಕಿತೆ ಸಿಂಧು ಅವರು 18-21, 15-21 ನೇರ ಸೆಟ್‌ಗಳಿಂದ ಎರಡನೇ ಶ್ರೇಯಾಂಕದ ಜಪಾನ್‌ನ ಅಕನೆ ಯಮಗುಚಿ ಅವರ ವಿರುದ್ಧ ಪರಾಭವಗೊಂಡರು. ಈ ಮೂಲಕ ಕಳೆದ ಇಂಡೋನೇಷ್ಯಾ ಓಪನ್‌ನಲ್ಲಿ ಫೈನಲ್‌ ತಲುಪಿದ್ದ ಸಿಂಧು ಜಪಾನ್‌ ಓಪನ್‌ನಲ್ಲಿ ಸೆಮಿಫೈನಲ್‌ ತಲುಪುವಲ್ಲಿ ವಿಫಲರಾದರು.
ಅದ್ಭುತ ಪ್ರದರ್ಶನ ತೋರಿದ ಜಪಾನ್ ಆಟಗಾರ್ತಿ ಭಾರತದ ಆಟಗಾರ್ತಿಯನ್ನು ಸೆದೆಬಡಿಯುವಲ್ಲಿ ಸಫಲರಾದರು. ಮೊದಲ ಸೆಟ್‌ನಲ್ಲಿ ಇಬ್ಬರು ಆಟಗಾರ್ತಿಯರಿಂದ ಭಾರಿ ಪೈಪೋಟಿ ನಡೆಯಿತು. ಅಂತೆಯೇ 3-3 ಸಮಬಲದ ಮೂಲಕ ಮೊದಲ ಗೇಮ್ ಸಾಗುತ್ತಿತ್ತು. ಈ ವೇಳೆ ಹೈದರಾಬಾದ್‌ ಆಟಗಾರ್ತಿ 11-7 ಮುನ್ನಡೆ ಗಳಿಸಿದ್ದರು. ಆದರೆ, ಅದೇ ಲಯ ಮುಂದುವರಿಸುವಲ್ಲಿ ವಿಫಲರಾದರು. ಆಕ್ರಮಣಕಾರಿ ಆಟ ಪ್ರದರ್ಶನ ತೋರಿದ ಅಕನೆ ಯಮಗುಚಿ ಅವರು 16-14 ಮುನ್ನಡೆಯೊಂದಿಗೆ ಮೊದಲನೇ ಸೆಟ್‌ ಅನ್ನು ತನ್ನದಾಗಿಸಿಕೊಂಡರು.
ಬಳಿಕ, ಎರಡನೇ ಸೆಟ್‌ ಗೆದ್ದು ಸಮಬಲ ಸಾಧಿಸುವ ಲೆಕ್ಕಾಚಾರದಲ್ಲಿ ಕಣಕ್ಕೆ ಇಳಿದಿದ್ದ ಸಿಂಧು, ಪ್ರಬಲ ಹೋರಾಟ ನಡೆಸಿದರು. ಆದರೂ, ಅವರು ಜಪಾನ್‌ ಆಟಗಾರ್ತಿಯನ್ನು ತಡೆಯುವಲ್ಲಿ ವಿಫಲರಾದರು. ಹಾಗಾಗಿ, ಆರು ಅಂಕಗಳ ಅಂತರದಲ್ಲಿ ಸೋಲುಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT