ಪಿ. ವಿ. ಸಿಂಧು ಕೋಚ್ ಕಿಮ್ ಜಿ ಹ್ಯುನ್ 
ಕ್ರೀಡೆ

ಶಾಕಿಂಗ್ ಸುದ್ದಿ: ಪಿ. ವಿ. ಸಿಂಧು ಕೋಚ್ ರಾಜೀನಾಮೆ!

ಟೊಕಿಯೋ ಒಲಿಂಪಿಕ್ಸ್ ಗೆ ಒಂದು ವರ್ಷಗಳಿಗಿಂತಲೂ ಕಡಿಮೆ ದಿನ ಬಾಕಿ ಇರುವಂತೆಯೇ ಭಾರತೀಯ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಕೋಚ್ ಸ್ಥಾನಕ್ಕೆ  ದಕ್ಷಿಣ ಕೊರಿಯಾದ ಕಿಮ್ ಜಿ  ಹ್ಯುನ್ ರಾಜೀನಾಮೆ ನೀಡಿದ್ದಾರೆ.

ಹೈದ್ರಾಬಾದ್:  ಟೊಕಿಯೋ ಒಲಿಂಪಿಕ್ಸ್ ಗೆ ಒಂದು ವರ್ಷಗಳಿಗಿಂತಲೂ ಕಡಿಮೆ ದಿನ ಬಾಕಿ ಇರುವಂತೆಯೇ ಭಾರತೀಯ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಕೋಚ್ ಸ್ಥಾನಕ್ಕೆ  ದಕ್ಷಿಣ ಕೊರಿಯಾದ ಕಿಮ್ ಜಿ  ಹ್ಯುನ್ ರಾಜೀನಾಮೆ ನೀಡಿದ್ದಾರೆ.

ಕಳೆದ ತಿಂಗಳು ಸ್ವಿಟ್ಜರ್ಲೆಂಡ್ ನ ಬಾಸೆಲ್ ನಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ  ಪಿ. ವಿ. ಸಿಂಧು ಚಿನ್ನ ಗೆಲ್ಲುವಲ್ಲಿ ಕಿಮ್ ಜಿ ಹ್ಯುನ್  ಪ್ರಮುಖ ಪಾತ್ರ ವಹಿಸಿದ್ದರು. 

ನ್ಯೂಜಿಲ್ಯಾಂಡ್ ನಲ್ಲಿರುವ ಕಿಮ್ ಜಿ ಹ್ಯೂನ್ ಪತಿ ರಿಚ್ಚಿ ಮಾರ್ ಪಾರ್ಶ್ವವಾಯು ಸಮಸ್ಯೆಯಿಂದ ನರಳುತ್ತಿದ್ದು, ಅವರು ಚೇತರಿಸಿಕೊಳ್ಳಲು 4ರಿಂದ 6 ತಿಂಗಳು ಹಿಡಿಯಲಿದೆ. ಅವರನ್ನು ನೋಡಿಕೊಳ್ಳಲು ಕಿಮ್ ಜಿ ಹ್ಯೂನ್ ಅಗತ್ಯವಿರುವುದರಿಂದ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಭಾರತದ ಮುಖ್ಯ ರಾಷ್ಟ್ರೀಯ ಕೋಚ್ ಪುಲ್ಲೇಲಾ ಗೋಪಿಚಂದ್ ಹೇಳಿದ್ದಾರೆ.

ಪಿ. ವಿ. ಸಿಂಧು ಅವರ ಯಶಸ್ಸಿನಲ್ಲಿ ಕಿಮ್ ಜಿ ಹ್ಯುನ್ ಬಹು ಮುಖ್ಯ ಪಾತ್ರ ವಹಿಸಿದ್ದಾರೆ. ಈ ಹಂತದಲ್ಲಿ ಕಿಮ್ ರಾಜೀನಾಮೆ ದುರದೃಷ್ಟಕರವಾಗಿದೆ. ಅವರ ಪತಿ ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸುವುದಾಗಿ ಪಿ. ವಿ. ಸಿಂಧು ತಿಳಿಸಿದ್ದಾರೆ.

ಕಿಮ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೆ. ಶ್ರಮಪಟ್ಟು ಕೆಲಸ ಮಾಡುತ್ತೇನೆ. ಗೋಪಿ ಸರ್ ಹಾಗೂ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಜೊತೆಗಿದೆ. ಅಗತ್ಯ ಬಿದ್ದರೆ ಪುರುಷರ ಸಿಂಗಲ್ಸ್ ಕೋಚ್ ನೆರವು ಪಡೆಯುವುದಾಗಿ ಪಿ. ವಿ. ಸಿಂಧು ಹಾಗೂ ಆಕೆಯ ತಂದೆ ಪಿ.ವಿ. ರಾಮಣ್ಣ ತಿಳಿಸಿದ್ದಾರೆ.

ವಿಶೇಷವೆಂದರೆ ಯಾವುದೇ ದೂರು ಇಲ್ಲದೆ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿದೇಶಿ ಕೋಚ್ ಗಳ ಪೈಕಿ ಕಿಮ್  ಮೂರನೇಯವರಾಗಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT