ಕ್ರೀಡೆ

ಸುನಿಲ್ ಛೆಟ್ರಿ ನಂತರ ಯಾರೂ ಇಲ್ಲದೇ ಇರುವುದು ಆತಂಕಕಾರಿ: ಬೈಚುಂಗ್ ಭುಟಿಯಾ

Srinivas Rao BV

ಭಾರತೀಯ ಫುಟ್ಬಾಲ್ ನಲ್ಲಿ ಎದುರಾಳಿಗಳಿಗೆ ಆತಂಕ ಉಂಟುಮಾಡಬಲ್ಲ ಜೊತೆಯಾಟಗಾರರು ಇಲ್ಲದಿರುವುದು ನಿರಂತರ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಭಾರತೀಯ ಫುಟ್ಬಾಲ್ ನ ಖ್ಯಾತ ಆಟಗಾರ ಬೈಚುಂಗ್ ಭುಟಿಯಾ ಸಹ ಆತಂಕ ವ್ಯಕ್ತಪಡಿಸಿದ್ದಾರೆ. 

ಐಎಎನ್ಎಸ್ ಜೊತೆ ಮಾತನಾಡಿರುವ ಬೈಚುಂಗ್ ಭುಟಿಯಾ, ಈಗ ಸುನಿಲ್ ಛೆಟ್ರಿ ಭಾರತ ತಂಡದ ಅತ್ಯುತ್ತಮ ಆಟಗಾರನಾಗಿದ್ದಾರೆ, ಆದರೆ ಅವರ ಜೊತೆಯಾಗಿ ನಿಲ್ಲಬಲ್ಲವರು, ಅಥವಾ ಸುನಿಲ್ ಛೆಟ್ರಿ ನಿವೃತ್ತಿ ಘೋಷಿಸಿದ ಬಳಿಕ ಅವರ ಸ್ಥಾನ ತುಂಬುವಂತಹ ಆಟಗಾರರು ಇಲ್ಲದೇ ಇರುವುದು ಆತಂಕದ ವಿಷಯ ಎಂದು ಹೇಳಿದ್ದಾರೆ.

ಭಾರತೀಯ ಕ್ರಿಕೆಟ್ ನ ಮಾದರಿಯಲ್ಲಿ ಫುಟ್ಬಾಲ್ ನಲ್ಲಿಯೂ ಮಾಜಿ ಆಟಗಾರರು ಫುಟ್ಬಾಲ್ ಕ್ರೀಡೆಯನ್ನು ಬಲಿಷ್ಠಗೊಳಿಸಲು ಸಹಕರಿಸಬೇಕೆಂದು ಬೈಚುಂಗ್ ಭುಟಿಯಾ ಅಭಿಪ್ರಾಯಪಟ್ಟಿದ್ದಾರೆ.

ಸುನಿಲ್ ಛೆಟ್ರಿ ಅವರೊಂದಿಗೆ ಜೊತೆಯಾಗಬಲ್ಲ ಜೆಜೆ ಲಾಲ್ಪೆಕ್ಲುವಾ ಹಾಗೂ ಬಲ್ವಂತ್ ಸಿಂಗ್ ಸಹ ಗಾಯಾಳುಗಳಾಗಿದ್ದಾರೆ. ಈ ಕಾರಣದಿಂದ ಆ ಇಬ್ಬರು ಆಟಗಾರರಿಗೂ ಸುನಿಲ್ ಛೆಟ್ರಿಗೆ ಸಾಥ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಭುಟಿಯಾ ಹೇಳಿದ್ದಾರೆ.

SCROLL FOR NEXT