ಸಜನ್ ಪ್ರಕಾಶ್ 
ಕ್ರೀಡೆ

‘ಎ’ ಸ್ಟ್ಯಾಂಡರ್ಡ್ ಒಲಿಂಪಿಕ್ ಕೋಟಾ ಗಳಿಸಿದ ಮೊದಲ ಭಾರತೀಯ ಈಜುಗಾರ ಸಜನ್ ಪ್ರಕಾಶ್

ಭಾರತದ ಈಜುಪಟು ಸಜನ್ ಪ್ರಕಾಶ್ ‘ಎ’ ಸ್ಟ್ಯಾಂಡರ್ಡ್ ನೊಂದಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಎಂದು ಹ್ಗ್ಗಳಿಕೆಗೆ ಪಾತ್ರವಾದರು.

ಹೈದರಾಬಾದ್: ಭಾರತದ ಈಜುಪಟು ಸಜನ್ ಪ್ರಕಾಶ್ ‘ಎ’ ಸ್ಟ್ಯಾಂಡರ್ಡ್ ನೊಂದಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಎಂದು ಹ್ಗ್ಗಳಿಕೆಗೆ ಪಾತ್ರವಾದರು.

ಇಟಲಿಯ ರೋಮ್‌ನ ಸೆಟೆಕೊಲ್ಲಿಯಲ್ಲಿ ಲೇನ್ 3 ನಲ್ಲಿಈಜುತ್ತಿದ್ದ ಕೇರಳದ 27 ವರ್ಷದ ಯುವಕ ಸಜನ್  1: 56.48 ನಿಮಿಷಕ್ಕೆ ಅಸಾಧಾರಣವಾದ ‘ಎ’ಕಟ್ ಅನ್ನು ಸಾಧಿಸಿದ್ದರು. ಕಳೆದ ವಾರ ಸೆರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ‘ಎ’ ಕಟ್ ಗಾಗಿ ಅತ್ಯಂತ ಸನಿಹಕ್ಕೆ ಬಂದಿದ್ದು ಇದು ಅವರ ಎರಡನೇ ಬಾರಿಯ ಸಾಧನೆಯಾಗಿದೆ. ಅವರು 1: 56.48 ನಿಮಿಷಕ್ಕೆ 200 ಮೀಟರ್ ಬಟರ್ ಫ್ಲೈ  ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.

ಪಶ್ಚಿಮ ಘಟ್ಟದ ​​ಅತಿ ಎತ್ತರದ ಶಿಖರಗಳಿರುವ ಇಡುಕ್ಕಿ ಜಿಲ್ಲೆಯ ಸಜನ್  ತನ್ನ ಸ್ನೇಹಿತ ಪ್ರದೀಪ್ ಕುಮಾರ್‌ ಜತೆ ತೆರಳುವುದಕ್ಕೆ ಮುನ್ನ ನಯೆವೆಲಿ (ತಮಿಳುನಾಡು) ನಲ್ಲಿ ತರಬೇತುದಾರ ಸಾಜು ಸೆಬಾಸ್ಟಿಯನ್ ನೇತೃತ್ವದಲ್ಲಿ ಈಜು ತರಬೇತಿ ಪಡೆದಿದ್ದರು. ಅವರು ಥೈಲ್ಯಾಂಡ್ ನಲ್ಲಿಫಿನಾ ವಿದ್ಯಾರ್ಥಿವೇತನದಲ್ಲಿ ತರಬೇತಿ ಪಡೆಯುತ್ತಿದ್ದರು, ಮತ್ತು ರಿಯೊ ಗೇಮ್ಸ್ ನಂತರ  ಅತ್ಯಂತ ಸ್ಥಿರವಾದ ಪ್ರದರ್ಶನ ನೀಡುತ್ತಾ ಸಾಗಿದ್ದರು. ಸಾಂಕ್ರಾಮಿಕ ರೋಗವು ಅವರನ್ನು  ದುಬೈಗೆ ಹೋಗುವಂತೆ ಮಾಡಿತ್ತು. ಅಲ್ಲಿ ಅವರು ಒಳಾಂಗಣ ಈಜುಕೊಳದಲ್ಲಿ ತರಬೇತಿ ಮುಂದುವರಿಸಿದ್ದರು.

ಕೇಂದ್ರ ಸಚಿವರ ಅಭಿನಂದನೆ

ರೋಮ್‌ನ ಸೆಟ್ಟೆ ಕೊಲ್ಲಿ ಟ್ರೋಫಿಯಲ್ಲಿ ಪುರುಷರ 200 ಮೀಟರ್ ಬಟರ್ ಫ್ಲೈ ವಿಭಾಗದಲ್ಲಿ  1:56:38 ಸಮಯದಲ್ಲಿ ಗುರಿ ತಲುಪಿ  ಟೋಕಿಯೊ 2020 ಗೆ ಅರ್ಹತೆ ಪಡೆದ ಮೊದಲ ಭಾರತೀಯ ಈಜುಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಜನ್ ಪ್ರಕಾಶ್ ಅವರಿಗೆ ನಾನು ಅಭಿನಂದಿಸುತ್ತೇನೆ.  ಭಾರತವನ್ನು ಹೆಮ್ಮೆ ಪಡುವಂತೆ ನಮ್ಮ ಕ್ರೀಡಾಪಟು ಬದ್ದತೆ ತೋರಿದ್ದಾರೆ. ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT