ಕೇರಳ ಬ್ಲಾಸ್ಟರ್ಸ್ 
ಕ್ರೀಡೆ

ಐಎಸ್ಎಲ್: ಬೆಂಗಳೂರು ತಂಡದ ವಿರುದ್ಧ ಪಂದ್ಯ ಕೈಬಿಟ್ಟಿದ್ದ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ 4 ಕೋಟಿ ರೂ. ದಂಡ!

ಮಾರ್ಚ್ 3ರಂದು ಬೆಂಗಳೂರು ಎಫ್‌ಸಿ ವಿರುದ್ಧದ ಇಂಡಿಯನ್ ಸೂಪರ್ ಲೀಗ್ ಪ್ಲೇ-ಆಫ್ ಪಂದ್ಯವನ್ನು ಕೈಬಿಟ್ಟಿದ್ದಕ್ಕಾಗಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್(ಎಐಎಫ್‌ಎಫ್) ನ ಶಿಸ್ತು ಸಮಿತಿಯು ಕೇರಳ ಬ್ಲಾಸ್ಟರ್ಸ್ ಎಫ್‌ಸಿಗೆ 4 ಕೋಟಿ ರೂಪಾಯಿ ದಂಡ ವಿಧಿಸಿದೆ.

ನವದೆಹಲಿ: ಮಾರ್ಚ್ 3ರಂದು ಬೆಂಗಳೂರು ಎಫ್‌ಸಿ ವಿರುದ್ಧದ ಇಂಡಿಯನ್ ಸೂಪರ್ ಲೀಗ್ ಪ್ಲೇ-ಆಫ್ ಪಂದ್ಯವನ್ನು ಕೈಬಿಟ್ಟಿದ್ದಕ್ಕಾಗಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್(ಎಐಎಫ್‌ಎಫ್) ನ ಶಿಸ್ತು ಸಮಿತಿಯು ಕೇರಳ ಬ್ಲಾಸ್ಟರ್ಸ್ ಎಫ್‌ಸಿಗೆ 4 ಕೋಟಿ ರೂಪಾಯಿ ದಂಡ ವಿಧಿಸಿದೆ.

ಪಂದ್ಯದಲ್ಲಿ ಭಾಗಿಯಾಗಿರುವ ಎಲ್ಲಾ ತಂಡದ ಫ್ರಾಂಚೈಸಿಗಳ ಆಕ್ಷೇಪಣೆಗಳು ಮತ್ತು ಸಲ್ಲಿಕೆಗಳನ್ನು ಪರಿಗಣಿಸಿದ ನಂತರ ಪಂದ್ಯವನ್ನು ಕೈಬಿಡುವ ಈ ಅಕ್ಷಮ್ಯ ನಡವಳಿಕೆಗಾಗಿ ಸಾರ್ವಜನಿಕ ಕ್ಷಮೆಯಾಚಿಸುವಂತೆ ಶಿಸ್ತು ಸಮಿತಿಯು ಕೇರಳ ಬ್ಲಾಸ್ಟರ್ಸ್‌ಗೆ ಸೂಚಿಸಿದೆ. ಹಾಗೆ ಮಾಡದಿದ್ದಲ್ಲಿ ಬ್ಲಾಸ್ಟರ್ಸ್ ದಂಡದ ಮೊತ್ತವನ್ನು 6 ಕೋಟಿ ರೂಪಾಯಿಗೆ ಹೆಚ್ಚಿಸುವುದಾಗಿ ಎಐಎಫ್‌ಎಫ್ ಎಚ್ಚರಿಸಿದೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸುನಿಲ್ ಛೆಟ್ರಿ ಫ್ರೀಕಿಕ್ ನಲ್ಲಿ ಬಿಎಫ್ ಸಿ ಪರ ಗೋಲು ಬಾರಿಸಿದ್ದು, ಆ ಬಳಿಕ ಬ್ಲಾಸ್ಟರ್ಸ್ ತಂಡ ಪ್ರತಿಭಟನೆ ನಡೆಸಿ ಮೈದಾನದಿಂದ ನಿರ್ಗಮಿಸಿತ್ತು. ಛೆಟ್ರಿಯ ಫ್ರೀಕಿಕ್‌ಗೆ ತಯಾರಾಗಲು ಸಾಧ್ಯವಾಗಲಿಲ್ಲ ಎಂದು ಬ್ಲಾಸ್ಟರ್ಸ್ ಹೇಳಿತ್ತು. ಈ ಸಂಬಂಧ ರೆಫರಿ ಕ್ರಿಸ್ಟಲ್ ಜಾನ್ಸ್ ವಿರುದ್ಧ ಕ್ಲಬ್ ಎಐಎಫ್ ಎಫ್ ಗೆ ದೂರು ಕೂಡ ಸಲ್ಲಿಸಿತ್ತು.

ಬ್ಲಾಸ್ಟರ್ಸ್ ಮುಖ್ಯ ಕೋಚ್ ಇವಾನ್ ವುಕೊಮಾನೊವಿಕ್ ಅವರನ್ನು ಎಐಎಫ್‌ಎಫ್ ಸ್ಪರ್ಧೆಗಳಲ್ಲಿ 10 ಪಂದ್ಯಗಳಿಗೆ ನಿಷೇಧಿಸಲಾಗಿದೆ. ಎಐಎಫ್‌ಎಫ್ ಶಿಸ್ತು ಸಂಹಿತೆಯ ಆರ್ಟಿಕಲ್ 9.1.2ರ ಅಡಿಯಲ್ಲಿ ಅವರಿಗೆ ಐದು ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಒಂದು ವಾರದೊಳಗೆ ಆದೇಶವನ್ನು ಅನುಸರಿಸುವಂತೆ ಫೆಡರೇಶನ್ ಬ್ಲಾಸ್ಟರ್ಸ್ ಮತ್ತು ವುಕೊಮಾನೋವಿಕ್‌ಗೆ ಸೂಚಿಸಿದೆ. ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಎರಡೂ ಪಕ್ಷಗಳಿಗೂ ಹಕ್ಕಿದೆ.

'ಅರ್ಧದಲ್ಲೇ ಪಂದ್ಯವನ್ನು ಕೈಬಿಡುವುದು ಜಾಗತಿಕ ಕ್ರೀಡಾ ಇತಿಹಾಸದಲ್ಲಿ ಅಪರೂಪದ ಘಟನೆಗಳಲ್ಲಿ ಒಂದಾಗಿದ್ದು ಅದು  ಫುಟ್‌ಬಾಲ್‌ನಲ್ಲಿ ವಿಶೇಷವಾಗಿದೆ ಎಂದು ಶಿಸ್ತು ಸಮಿತಿ ಹೇಳಿದೆ. ಭಾರತದ ವೃತ್ತಿಪರ ಫುಟ್‌ಬಾಲ್ ಇತಿಹಾಸದಲ್ಲಿ ಎರಡನೇ ಬಾರಿಗೆ ಅರ್ಧದಲ್ಲೇ ಪಂದ್ಯವನ್ನು ಕೈಬಿಡಲಾಗಿದೆ. 2012ರಲ್ಲಿ ಈಸ್ಟ್ ಬೆಂಗಾಲ್ ವಿರುದ್ಧ ಮೋಹನ್ ಬಗಾನ್ ತಂಡ ಪಂದ್ಯ ಕೈಬಿಟ್ಟಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT