ಅಥ್ಲೀಟ್ ಜಿಮ್ನಾಸ್ಟ್ ದೀಪಾ ಕರ್ಮಾಕರ್ 
ಕ್ರೀಡೆ

ಏಷ್ಯನ್ ಗೇಮ್ಸ್: ಕ್ರೀಡಾ ಸಚಿವಾಲಯದಿಂದ ಅಥ್ಲೀಟ್ ಗಳ ಹೆಸರು ಘೋಷಣೆ

ಚೀನಾದಲ್ಲಿ ಸೆ.23 ರಿಂದ ಅ.08 ವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್ ಗೆ ಕೊನೆಗೂ ಕ್ರೀಡಾ ಸಚಿವಾಲಯ 634 ಅಥ್ಲೀಟ್ ಗಳ ಹೆಸರುಗಳನ್ನು ಅಂತಿಮಗೊಳಿಸಿದೆ. 

ನವದೆಹಲಿ: ಚೀನಾದಲ್ಲಿ ಸೆ.23 ರಿಂದ ಅ.08 ವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್ ಗೆ ಕೊನೆಗೂ ಕ್ರೀಡಾ ಸಚಿವಾಲಯ 634 ಅಥ್ಲೀಟ್ ಗಳ ಹೆಸರುಗಳನ್ನು ಅಂತಿಮಗೊಳಿಸಿದೆ. 

ಎನ್ಎಸ್ಎಫ್ ನಿಂದ ಒಟ್ಟು 850 (440 ಪುರುಷ 410 ಮಹಿಳೆ ಕ್ರೀಡಾಪಟುಗಳು) ಹೆಸರುಗಳ ಪೈಕಿ ಯಾರನ್ನು ಆಯ್ಕೆ ಮಾಡಲಿದೆ ಎಂಬ ಬಗ್ಗೆ ತೀವ್ರ ಕುತೂಹಲ ಮೂಡಿತ್ತು. 

ಫುಟ್ಬಾಲ್ ನ್ನು ಸೇರಿಸಲಾಗಿತ್ತು. ಹಲವು ಫೆಡರೇಷನ್ ಗಳು ಅನುಮೋದನೆಗಾಗಿ ಕಾಯುತ್ತಿದ್ದವು. ಆದರೆ ಕ್ರೀಡಾ ಸಚಿವಾಲಯದಿಂದ ನಿಗದಿಪಡಿಸಲಾಗಿದ್ದ ಮಾನದಂಡಗಳಿಗೆ ಅನುಸಾರವಾಗಿರದ ಕಾರಣ ಅನುಮೋದನೆ ಲಭ್ಯವಾಗಲಿಲ್ಲ. 

ಅಥ್ಲೀಟ್ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಗೆ ಹ್ಯಾಂಗ್‌ಝೌ ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಭಾಗವಹಿಸುವ ಕನಸು ಭಗ್ನಗೊಂಡಿದೆ. ಜಿಮ್ನಾಸ್ಟಿಕ್ಸ್ ಫೆಡರೇಶನ್ ನಡೆಸಿದ ಟ್ರಯಲ್ಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೂ ಆಕೆಯನ್ನು ಕೈಬಿಡುವ ನಿರ್ಧಾರದಿಂದ ಆಕೆಯ ಕೋಚ್ ಬಿಶ್ವೇಶ್ವರ್ ನಂದಿ ಅವರಿಗೂ ನಿರಾಶೆಯುಂಟಾಗಿದೆ.

"ಹಿಂದಿನ ಪ್ರದರ್ಶನದ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡಲಾಗುತ್ತಿರುವುದನ್ನು ನಾನು ನೋಡುತ್ತಿರುವುದು ಇದೇ ಮೊದಲು. ತರಬೇತುದಾರರಾಗಿ ಮತ್ತು ಆಟಗಾರರಾಗಿ ನಾವು ಯಾವಾಗಲೂ ಪ್ರಸ್ತುತ ಪ್ರದರ್ಶನ ಮತ್ತು ಫಾರ್ಮ್ ಅನ್ನು ಆಧರಿಸಿ ಕ್ರೀಡಾಪಟುಗಳನ್ನು ಆಯ್ಕೆ ಮಾಡುತ್ತೇವೆ. ಆದರೆ ಈ ಬಾರಿ ಹಿಂದಿನ ಪ್ರದರ್ಶನಗಳನ್ನು ಆಧರಿಸಲಾಗಿದೆ. ಇದು ಭಾರತೀಯ ಜಿಮ್ನಾಸ್ಟಿಕ್ಸ್‌ಗೆ ಒಳ್ಳೆಯದಲ್ಲ ಮತ್ತು ಕ್ರೀಡೆಯನ್ನು ಹಿಂದಕ್ಕೆ ಕೊಂಡೊಯ್ಯುತ್ತದೆ. ಪುರುಷರ ತಂಡವನ್ನು ಪರಿಗಣಿಸಬಹುದಿತ್ತು. ಒಬ್ಬ ಜಿಮ್ನಾಸ್ಟ್ ಅನ್ನು ಮಾತ್ರ ಅಂತಿಮಗೊಳಿಸಲಾಗಿದೆ" ಎಂದು ಬಿಶ್ವೇಶ್ವರ್ ನಂದಿ ಹೇಳಿದ್ದಾರೆ.    

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT