ಬಜರಂಗ್ ಪುನಿಯಾ 
ಕ್ರೀಡೆ

ನಾಚಿಕೆಗೇಡಿನ ಸಂಗತಿ: ವಿನೇಶ್ ಸ್ವಾಗತಿಸುವ ಭರದಲ್ಲಿ 'ತಿರಂಗ' ಪೋಸ್ಟರ್‌ ಮೇಲೆ ಕಾಲಿಟ್ಟ ಬಜರಂಗ್ ಪುನಿಯಾ, ವಿಡಿಯೋ ವೈರಲ್!

ಭವ್ಯ ಸ್ವಾಗತ ಸಮಾರಂಭದ ಭಾಗವಾಗಿ ವಿನೇಶ್ ಫೋಗಟ್ ಅವರನ್ನು ಸ್ವಾಗತಿಸಲು ಸಹ ಭಾರತೀಯ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.

ನವದೆಹಲಿ: ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಅದಕ್ಕೆ ಕಾರಣ ವಿನೇಶ್ ಫೋಗಟ್ ಅವರನ್ನು ಸ್ವಾಗತಿಸುವಾಗ ಕಾರಿನ ಬಾನೆಟ್‌ನಲ್ಲಿ ತ್ರಿವರ್ಣ ಧ್ವಜದ ಮೇಲೆ ಬಜರಂಗ್ ನಿಂತಿರುವುದು. ಇದನ್ನು ಸಾಮಾಜಿಕ ಜಾಲತಾಣ ಬಳಕೆದಾರರು ನಾಚಿಕೆಗೇಡಿನ ಸಂಗತಿ ಎಂದು ಕರೆದಿದ್ದಾರೆ.

ವಾಸ್ತವವಾಗಿ, ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 50 ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್ ಗೆ ಹೋಗಿದ್ದ ಕುಸ್ತಿಪುಟ ವಿನೇಶ್ ಫೋಗಟ್ 100 ಗ್ರಾಂ ತೂಕ ಹೆಚ್ಚಾಗಿದೆ ಎಂದು ಅವರನ್ನು ಅನರ್ಹಗೊಳಿಸಲಾಗಿತ್ತು. ಇದರ ವಿರುದ್ಧ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ಮೇಲ್ಮನವಿ ಸಲ್ಲಿಸಿದ್ದ ವಿನೇಶ್ ಬೆಳ್ಳಿ ಪದಕಕ್ಕಾಗಿ ಮನವಿ ಮಾಡಿದ್ದರು. ಈ ಅರ್ಜಿಯನ್ನು ಸಿಎಎಸ್ ತಿರಸ್ಕರಿಸಿದ್ದರಿಂದ ಭಾರತಕ್ಕೆ ಬಂದ ವಿನೇಶ್ ಗೆ ಭವ್ಯವಾದ ಸ್ವಾಗತವನ್ನು ನೀಡಲಾಯಿತು.

ಭವ್ಯ ಸ್ವಾಗತ ಸಮಾರಂಭದ ಭಾಗವಾಗಿ ವಿನೇಶ್ ಫೋಗಟ್ ಅವರನ್ನು ಸ್ವಾಗತಿಸಲು ಸಹ ಭಾರತೀಯ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು. ವಿನೇಶ್ ಅವರ ಭವ್ಯ ಸ್ವಾಗತದ ನಡುವೆ ಕಾರಿನ ಮೇಲೆ ಅಳವಡಿಸಿದ್ದ 'ತಿರಂಗಾ' ಪೋಸ್ಟರ್ ಮೇಲೆ ಬಜರಂಗ್ ಪುನಿಯಾ ನಿಂತಿರುವುದು ವಿವಾದಕ್ಕೆ ಕಾರಣವಾಗಿದೆ.

ವೀಡಿಯೊವೊಂದರಲ್ಲಿ, ಭಜರಂಗ್ ಪುನಿಯಾ ಕಾರಿನ ಬಾನೆಟ್ ಮೇಲೆ ನಿಂತಿರುವಂತೆ ಕಂಡುಬಂದಿದೆ. ಅಲ್ಲಿ 'ತಿರಂಗಾ' ಪೋಸ್ಟರ್ ಅನ್ನು ಅಳವಡಿಸಲಾಗಿತ್ತು. ಪೂನಿಯಾ ಅಜಾಗರೂಕತೆಯಿಂದ 'ತಿರಂಗಾ' ಪೋಸ್ಟರ್ ಮೇಲೆ ಕಾಲಿಟ್ಟು ಅಲ್ಲಿ ನೆರೆದಿದ್ದ ಜನರನ್ನು ಮತ್ತು ಮಾಧ್ಯಮವನ್ನು ನಿಭಾಯಿಸುತ್ತಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ತ್ರಿವರ್ಣ ಧ್ವಜದ ಪೋಸ್ಟರ್ ಮೇಲೆ ನಿಂತು ಭಾರತದ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಭಾರತೀಯ ಕುಸ್ತಿಪಟು ಟೀಕಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT