ಯುವಜನ/ಮಕ್ಕಳು

ಶ್ರಾವಣ ಮಾಸ

ಶ್ರಾವಣ ಮಾಸವು
ಬಂದಿತು ಎಂದರೆ
ಬರುವುದು ಹಬ್ಬದ ಸಾಲು,
ಉಣುವುದು ಉಡುವುದು
ಸಂಭ್ರಮ ಪಡುವುದು
ಹರುಷವೆ ಎಲ್ಲರ ಪಾಲು

ಮೊದಲು ಬರುವದು
ನಾಗರ ಚವುತಿ
ಹಾವಿಗೆ ಹಾಲೆರೆಯುವರು,
ವಿಷ ಜಂತುವಿಗೂ
ಸಿಹಿ ನೀಡುತಲಿ
ಪ್ರಾಣಿ ಪ್ರೀತಿ ತೋರುವರು

ನಂತರ ಬರುವಳು
ವರ ಮಹಾಲಕುಮಿ
ಸಿರಿ ಸಂಪದದ ಅರಸಿ,
ರಕ್ಷಾ ಬಂಧನವು
ಅಣ್ಣ-ತಂಗಿಯರ
ಪೊರೆವುದು ಬಂಧನ ಬೆಸೆಸಿ.

ಇದೇ ಮಾಸದಲಿ
ಸ್ವಾತಂತ್ರ್ಯದ ದಿನ
ಭಾರತೀಯರ ಹಬ್ಬ,
ತ್ರಿವರ್ಣ ಧ್ವಜವು
ಬಾನಲಿ ಮೆರೆದಿದೆ
ಮೀರಿದೆ ಹರುಷವು ಅಬ್ಬ!

ಕೃಷ್ಣನ ಜನುಮ
ದಿನವು ಬರುವುದು
ಬಹುಳ ಅಷ್ಟಮಿ ದಿವಸ
ಗೀತೆಯ ಸಾರಿ
ಜೀವನ ಧನ್ಯತೆ
ಪಾಠವ ಹೇಳಿದ ಅರಸ.

ಹೀಗೆಯೆ ಶ್ರಾವಣ
ಮಾಸವು ಪೂರ್ತಿ
ಸಂಭ್ರಮ ಪಡುವ ಕಾಲ,
ಭಕುತಿ ಪ್ರೇಮಗಳ
ಭಾವೈಕ್ಯತೆಯನು
ಬೆಳೆಪುದೆ ಇದರ ಮೂಲ

-ಗುರುರಾಜ್ ಬೆಣಕಲ್


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ರಷ್ಯಾದಿಂದ ಇಂಧನ ಖರೀದಿ ನಿಲ್ಲಿಸಿ.. ಇಲ್ಲ..' ಚೀನಾಗೆ ಶೇ.50ರಿಂದ ಶೇ.100ರಷ್ಟು ಸುಂಕ ಹಾಕ್ತೀನಿ': NATO ರಾಷ್ಟ್ರಗಳಿಗೆ Trump ಎಚ್ಚರಿಕೆ!

ರಜನಿಕಾಂತ್ 'Coolie' ಚಿತ್ರದಲ್ಲಿ ನಟಿಸಿದ್ದು ನನ್ನ ದೊಡ್ಡ ತಪ್ಪು ನಿರ್ಧಾರ: Aamir Khan ಹೇಳಿಕೆ ಕುರಿತು ಸ್ಪಷ್ಟನೆ!

ಮುಂದಿವ ವರ್ಷ ಮಾರ್ಚ್ 5 ರಂದು ನೇಪಾಳ ಸಂಸತ್ ಚುನಾವಣೆ: ಅಧ್ಯಕ್ಷರ ಕಚೇರಿ ಘೋಷಣೆ

ಹಾಸನ ಗಣೇಶ ಮೆರವಣಿಗೆ ದುರಂತ: ಸಾವಿನ ಸಂಖ್ಯೆ 10ಕ್ಕೆ ಏರಿಕೆ; ಸ್ಥಳಕ್ಕೆ ಕೃಷ್ಣ ಬೈರೇಗೌಡ ಭೇಟಿ

ಕೊನೆಗೂ ಸಂಘರ್ಷ ಪೀಡಿತ ಮಣಿಪುರಕ್ಕೆ ಮೋದಿ ಭೇಟಿ; 'ಶಾಂತಿ ಮಾರ್ಗ' ಆರಿಸಿಕೊಳ್ಳುವಂತೆ ಮನವಿ

SCROLL FOR NEXT