ಸೇನಾಶಾಲೆಯಲ್ಲಿ ನಡೆದ ಉಗ್ರರ ದಾಳಿಯ ಒಂದು ಚಿತ್ರ 
ಪ್ರಧಾನ ಸುದ್ದಿ

ಉಗ್ರರಿಗೆ ಮರಣ ದಂಡನೆ ನಿಷೇಧವನ್ನು ತೆರವುಗೊಳಿಸಿದ ಪಾಕಿಸ್ತಾನ

ಉಗ್ರಗಾಮಿ ಪ್ರಕರಣಗಳಲ್ಲಿ ಸದ್ಯಕ್ಕೆ ನಿಷೇಧಗೊಂಡಿರುವ ಮರಣ ದಂಡನೆ ಶಿಕ್ಷೆಯನ್ನು ಬುಧವಾರ ಪಾಕಿಸ್ತಾನ ತೆರವುಗೊಳಿಸಿದೆ.

ಇಸ್ಲಮಾಬಾದ್: ಉಗ್ರಗಾಮಿ ಪ್ರಕರಣಗಳಲ್ಲಿ ಸದ್ಯಕ್ಕೆ ನಿಷೇಧಗೊಂಡಿರುವ
ಮರಣ ದಂಡನೆಯನ್ನು ಬುಧವಾರ ಪಾಕಿಸ್ತಾನ ತೆರವುಗೊಳಿಸಿದೆ. ಪಾಕಿಸ್ತಾನದ ಪೇಶಾವರ್ ಜಿಲ್ಲೆಯ ಸೇನಾ ಶಾಲೆಯಲ್ಲಿ ೧೩೨ ಮಕ್ಕಳನ್ನು ತಾಲಿಬಾನ್ ಉಗ್ರರು ಬರ್ಬರ ಹತ್ಯೆಗೈದ ಒಂದು ದಿನದ ನಂತರ ಪಾಕಿಸ್ತಾನ ಈ ನಿರ್ಧಾರ ತೆಗೆದುಕೊಂಡಿದೆ.

ಉಗ್ರಗಾಮಿ ಚಟುವಟಿಕೆ ಸಂಬಂಧಿತ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಯ ನಿಷೇಧವನ್ನು ತೆರವುಗೊಳಿಸಿರುವ ಹಿನ್ನಲೆಯಲ್ಲೇ, ಸಧ್ಯ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಉಗ್ರರು ಗಲ್ಲು ಶಿಕ್ಷೆಗೆ ಒಳಪಡಬಹುದು ಎನ್ನಲಾಗಿದೆ.

ಪೇಶಾವರ್ ನ ಈ ದಾಳಿಯನ್ನು "ಅನಾಗರಿಕರ ನಡೆಸಿದ ರಾಷ್ಟ್ರೀಯ ದುರಂತ" ಎಂದು ಸರ್ವಪಕ್ಷ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ತಿಳಿಸಿದ್ದಾರೆ.

ಮಂಗಳವಾರ ನಡೆದ ಈ ಬರ್ಬರ ದಾಳಿಯಲ್ಲಿ ೧೩೨ ಮಕ್ಕಳನ್ನು ಒಳಗೊಂಡಂತೆ ೧೪೮ ಜನ ಮೃತಮಟ್ಟಿದ್ದರು. ಈ ಘಟನೆ ಇಡೀ ದೇಶವನ್ನು ದುಖಃದಲ್ಲಿ ಮುಳುಗಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT