ರಾಬರ್ಟ್ ವಾದ್ರಾ 
ಪ್ರಧಾನ ಸುದ್ದಿ

ವಾದ್ರಾ ಆಸ್ತಿ ವಿವರ ಕೇಳಿದ ಹರ್ಯಾಣ ಸರ್ಕಾರ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರು ತಮ್ಮ ಆಸ್ತಿ ವಿವರಗಳನ್ನು ನೀಡಬೇಕೆಂದು...

ಚಂಡೀಗಢ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರು ತಮ್ಮ ಆಸ್ತಿ ವಿವರಗಳನ್ನು ನೀಡಬೇಕೆಂದು ಹರ್ಯಾಣ ಸರ್ಕಾರ ಹೇಳಿದೆ.

ಲ್ಯಾಂಡ್ ರೆಕಾರ್ಡ್ಸ್‌ನ ನಿರ್ದೇಶಕರು ಗುರ್‌ಗಾಂವ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ, ಡೆಪ್ಯುಟಿ ಕಮಿಷನರ್ ಶೇಖರ್ ವಿದ್ಯಾರ್ಥಿ ಅವರಿಗೆ ಪತ್ರ ಬರೆದಿದ್ದು, ಗುರ್‌ಗಾಂವ್ ಜಿಲ್ಲಾಡಳಿತದಲ್ಲಿ ವಾದ್ರಾ ಅವರು ಹೊಂದಿರುವ ಆಸ್ತಿ ವಿವರಗಳನ್ನು ನೀಡಬೇಕೆಂದು ಕೋರಿದ್ದಾರೆ.

ವಾದ್ರಾ ಅವರ ಆಸ್ತಿ ವಿವರಗಳನ್ನು ಒಂದು ವಾರದೊಳಗೆ ನೀಡುವಂತೆ ವಿದ್ಯಾರ್ಥಿ ಅವರು ಜಿಲ್ಲಾ ಕಂದಾಯ ಅಧಿಕಾರಿ ತರ್ಸೇಮ್ ಶರ್ಮಾ ಅವರಿಗೆ ಆದೇಶಿಸಿದ್ದಾರೆ.

ಹರ್ಯಾಣದಲ್ಲಿ ಅಕ್ಟೋಬರ್ 15 ವಿಧಾನಸಭಾ ಚುನಾವಣೆಯ ವೇಳೆ ಭೂಹಗರಣದ ಬಗ್ಗೆ ಬಿಜೆಪಿ ದನಿಯೆತ್ತಿತ್ತು. ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಗದ್ದುಗೆಗೇರಿದ ಮನೋಹರ್ ಲಾಲ್ ಖಟ್ಟಾರ್ ಈ ಹಗರಣ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದರು.

ಈ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕೆಂದು ಹರ್ಯಾಣ ಸಚಿವರಾದ ರಾಮ್ ಬಿಲಾಸ್ ಶರ್ಮಾ ಮತ್ತು ಅನಿಲ್ ವಿಜಿ ಒತ್ತಾಯಿಸಿದ್ದರು.

ಹರ್ಯಾಣದಲ್ಲಿ ಹೂಡಾ ಸರ್ಕಾರವಿದ್ದಾಗ ಅಂದರೆ ಮಾರ್ಚ್ 2005 -ಅಕ್ಟೋಬರ್ 2014ರ ಅವಧಿಯಲ್ಲಿ ಬಹುಕೋಟಿ ಮೌಲ್ಯದ ಭೂಹಗರಣ ಮಾಡಿದ್ದರು.

ಹರ್ಯಾಣದಲ್ಲಿ ನಡೆದ ಅತೀ ದೊಡ್ಡ ಭೂಹಗರಣ ಇದು. ಸರ್ಕಾರ ಮುಗ್ಧ ರೈತರಿಂದ ಸುಮಾರು 70,000 ಎಕರೆ ಭೂಮಿಯನ್ನು ಕಬಳಿಸಿತ್ತು. ಈ ಬಗ್ಗೆ ತನಿಖೆ ನಡೆಯಲೇ ಬೇಕು. ಈ ಹಗರಣದಲ್ಲಿ ಅಧಿಕಾರಗಳಾಗಿರಲಿ, ರಾಬರ್ಟ್ ವಾದ್ರಾ ಅಥವಾ ಭೂಪಿಂದರ್ ಸಿಂಗ್ ಹೂಡಾ ಯಾರೇ ಆಗಿರಲಿ, ತಪ್ಪಿತಸ್ಥರಾಗಿದ್ದರೆ ಅವರಿಗೆ ಶಿಕ್ಷೆಯಾಗಲೇ ಬೇಕು ಎಂದು ವಿಜ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಉತ್ತರ ಪ್ರದೇಶ: "ಆಕ್ಷೇಪಾರ್ಹ" ಸ್ಥಿತಿಯಲ್ಲಿದ್ದ ಪ್ರೇಮಿಗಳನ್ನು ಹೊಡೆದು ಕೊಂದ ಕುಟುಂಬಸ್ಥರು!

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

SCROLL FOR NEXT