ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಫೇಸ್ ಬುಕ್ ಮೂಲಕ ಯುವತಿಯರನ್ನು ಲೈಂಗಿಕ ಜಾಲಕ್ಕೆ ಎಳೆಯಲು ಯತ್ನ

ಯುವತಿಯರನ್ನು ಅಪರಾಧ ಕೃತ್ಯಗಳಿಗೆ ಮತ್ತು ವೇಶ್ಯಾವೃತ್ತಿಗೆ ಬಳಸಿಕೊಳ್ಳಲು ದುಷ್ಟರ ಕೂಟ...

ಲಂಡನ್: ಯುವತಿಯರನ್ನು ಅಪರಾಧ ಕೃತ್ಯಗಳಿಗೆ ಮತ್ತು ವೇಶ್ಯಾವೃತ್ತಿಗೆ ಬಳಸಿಕೊಳ್ಳಲು ದುಷ್ಟರ ಕೂಟ ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದೆ ಎಂದು ಯೂರೋಪಿನ ಪೊಲೀಸ್ ಸಂಸ್ಥೆ ಯೂರೋಪಾಲ್ ಮಂಗಳವಾರ ಹೇಳಿದೆ.

ಮಕ್ಕಳನ್ನು ನೋಡಿಕೊಳ್ಳಲು ಮತ್ತು ಮನೆಗೆಲಸ ಖಾಲಿ ಇವೆ ಎಂದು ಜಾಹೀರಾತು ಕೊಟ್ಟು ಯುವತಿಯರನ್ನು ಆಕರ್ಷಿಸಿ ಬಲಿಪಶುಗಳನ್ನಾಗಿ ಮಾಡುತ್ತಾರೆ, ನಂತರ ಈ ಜಾಲದಲ್ಲಿ ಸಿಲುಕಿಸಿ ಅವರ ಚಲನವಲನಗಳನ್ನು ಅಂತರ್ಜಾಲ ಕ್ಯಾಮರ ಮತ್ತು ಅಂತರ್ಜಾಲ ಮಾತುಕತೆಯ ಮೂಲಕ ನಿಯಂತ್ರಣ ಮಾಡುತ್ತಾರೆ ಎಂದಿದ್ದಾರೆ ರಾಬ್ ವೈನ್ ರೈಟ್.

"ಹೆಚ್ಚುತ್ತಿರುವ ಇಂತಹ ಪ್ರಕರಣಗಳಲ್ಲಿ ಬಲಿಪಶುಗಳಾದ ಯುವತಿಯರನ್ನು ವೀಕ್ಷಣೆಯಲ್ಲಿಡಲು ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ" ಎಂದು ಸಾಮಾಜಿಕ ನ್ಯಾಯ ಕೇಂದ್ರದ ಚಿಂತನ-ಮಂಥನದಲ್ಲಿ ಲಂಡನ್ ನಲ್ಲಿ ತಿಳಿಸಿದ್ದಾರೆ.

"ಅವರನ್ನು ಭೇಟಿ ಮಾಡುವ ಬದಲಾಗಿ ಇಂದು ವೆಬ್ ಚಾಟ್ ಮತ್ತು ವೆಬ್ ಕ್ಯಾಮ್ ಗಳ ಮೂಲಕ ಯುವತಿರರು ಎಲ್ಲಿರಬೇಕು ಮತ್ತು ಮುಂದಿನ ಗ್ರಾಹಕನಿಗೆ ಎಲ್ಲಿ ಕಾಯಬೇಕು ಎಂಬುದನ್ನು ತಿಳಿಸುತ್ತಾರೆ" ಎಂದಿದ್ದಾರೆ.

"ಈ ಹಿಂದೆ ಈ ಕಳ್ಳಸಾಗಾಣಿಕೆದಾರರು ಮತ್ತು ಮಧ್ಯವರ್ತಿಗಳು ಈ ಯುವತಿಯರನ್ನು ವೈಯಕ್ತಿಕವಾಗಿ ಭೇಟಿ ಮಾಡಬೇಕಿತ್ತು, ಆದರೆ ಈಗ ಒಂದು ಗುಂಡಿ ಒತ್ತುವ ಮೂಲಕ ೫೦ ಯುವತಿಯರನ್ನು ನಿಯಂತ್ರಿಸಬಹುದು" ಎಂದಿದ್ದಾರೆ.

ಈ ದುಷ್ಟ ಕೂಟಗಳು ಮಾನವ ಕಳ್ಳ ಸಾಗಾಣಿಕೆಯನ್ನು "ಕಡಿಮೆ ಅಪಾಯ ಹೆಚ್ಚು ಲಾಭದ" ಉದ್ಯಮವಾಗಿಸಿಕೊಂಡಿದ್ದಾರೆ ಮತ್ತು ಇದು ಅಪರಾಧಿ ತಂಡಗಳಿಗೆ ಪ್ರತಿ ವರ್ಷ ೧೫೦ ಬಿಲಿಯನ್ ಡಾಲರ್ ವಹಿವಾಟು ನಡೆಸಿಕೊಡುತ್ತದೆ ಎಂದಿದ್ದಾರೆ ಪೋಲೀಸ್ ಮುಖ್ಯಸ್ಥ.

ಯೂರೋಪಿನಲ್ಲಿ ಈ ಜಾಲಕ್ಕೆ ಬಲಿಯಾದವರ ಸಂಖ್ಯೆ ೫೦೦೦೦ ಎಂದು ಅಂದಾಜು ಮಾಡಲಾಗಿದ್ದು, ಇವರು ರೊಮೇನಿಯಾ, ಬಲ್ಗೇರಿಯಾ ಮತ್ತು ಹಂಗೇರಿಯಿಂದ ಹೆಚ್ಚಿನ ಸಂಖೆಯಲ್ಲಿದ್ದು, ಬ್ರಿಟನ್, ಜರ್ಮನಿ, ಬೆಲ್ಜಿಯಂ ಮತ್ತು ನೆದರ್ ಲ್ಯಾಂಡ್ಸ್ ನಲ್ಲಿ ಈ ಯುವತಿಯರು ಈ ಜಾಲಕ್ಕೆ ಬಂದು ಸೇರುತ್ತಾರೆ ಎನ್ನಲಾಗಿದೆ.

ಈ ದುಷ್ಟಕೂಟವನ್ನು ಹಿಮ್ಮೆಟ್ಟಲು ಅಂತರಾಷ್ಟ್ರೀಯ ಸಹಕಾರ ಅಗತ್ಯ ಎಂದಿದ್ದಾರೆ ವೈನ್ ರೈಟ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT