ಯುದ್ಧಗ್ರಸ್ಥ ಯೆಮನ್ ದೇಶದ ಒಂದು ದೃಶ್ಯ 
ಪ್ರಧಾನ ಸುದ್ದಿ

ಯುದ್ಧಗ್ರಸ್ಥ ಯೆಮನ್ ನಲ್ಲಿ ಭಾರತೀಯನ ಮೊದಲ ಸಾವು

ಯುದ್ಧಗ್ರಸ್ಥ ಯೆಮನ್ ನಲ್ಲಿ, ಗಲ್ಫ್ ಡ್ರೋವ್ ಎಂಬ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಚಂಡೀಘರ್ ಮೂಲದ ಮಂಜಿತ್ ಸಿಂಗ್ ಆಡೆನ್ ನಗರದ ಬಾಂಬ್ ದಾಳಿಗೆ

ನವದೆಹಲಿ: ಯುದ್ಧಗ್ರಸ್ಥ ಯೆಮನ್ ನಲ್ಲಿ, ಗಲ್ಫ್ ಡ್ರೋವ್ ಎಂಬ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಚಂಡೀಘರ್ ಮೂಲದ ಮಂಜಿತ್ ಸಿಂಗ್ ಆಡೆನ್ ನಗರದ ಬಾಂಬ್ ದಾಳಿಗೆ ಆಹುತಿಯಾಗಿದ್ದು, ಭಾರತೀಯ ಮೂಲದ ಮನುಷ್ಯನೊಬ್ಬ ಮೃತಪಟ್ಟ ಮೊದಲ ವರದಿಯಾಗಿದೆ.

ಯೆಮನ್ನಲ್ಲಿ ಸಿಲುಕಿದ ಭಾರತೀಯರನ್ನು ರಕ್ಷಿಸಲು ಆಡೆನ್ ಬಂದರಿಗೆ ಹೋಗಿದ್ದ ಐ ಎನ್ ಎಸ್ ತರ್ಕಶ್ ಹಡಗಿನಲ್ಲಿ ಮಂಜಿತ್ ಅವರ ದೇಹವನ್ನು ಭಾರತಕ್ಕೆ ತರಲಾಗಿದೆ.

ಬಾಂಬ್ ಸ್ಪೋಟದಿಂದ ತೀವ್ರ ಗಾಯಗಳಾಗಿದ್ದ ಮಂಜಿತ್ ಅವರನ್ನು ಆಸ್ಪತ್ರೆಗೆ ಸೃರಿಸಿದ್ದರೂ ಅಲ್ಲಿ ಮಂಜಿತ್ ಅವರು ಕೊನೆಯುಸಿರೆಳೆದರು ಎಂದು ನೌಕಾ ಮೂಲಗಳು ತಿಳಿಸಿವೆ.

ಜಿಬೂಟಿಯಿಂದ ಆಡೆನ್ ಬಂದರಿಗೆ ಹೊರಟ ಐ ಎನ್ ಎಸ್ ತರ್ಕಶ್ ಹಡಗು ಶುಕ್ರವಾರ ಸಂಜೆ ೪೫೦ ಜನರನು ರಕ್ಷಿಸಿತ್ತು.

ಈ ಮಧ್ಯೆ ಭಾರತೀಯ ವೈಮಾನಿಕ ದಳ ನಿಯೋಜಿಸಿದ್ದ ಸಿ-೧೬ ಯುದ್ಧ ವಿಮಾನ ಯೆಮನ್ ನಿಂದ ರಕ್ಷಣಾ ಕಾರ್ಯಚರಣೆ ಶುಕ್ರವಾರ ಪೂರ್ಣಗೊಂಡಿದೆ ಎಂದು ತಿಳಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT