ಲೋಕಯುಕ್ತ ಭಾಸ್ಕರ್ ರಾವ್ ಅವರ ಪುತ್ರ ಬಂಧನದಲ್ಲಿರುವ ಯೆರಭಾಟಿ ಅಶ್ವಿನ್ 
ಪ್ರಧಾನ ಸುದ್ದಿ

ಭ್ರಷ್ಟ ಲೋಕಾ: ಅಶ್ವಿನ್ ಮತ್ತು ಸಹಚರನಿಂದ 10.91 ಲಕ್ಷ ವಂಚನೆ: ಹೊಸ ಎಫ್ಐಆರ್

ಲೋಕಯುಕ್ತ ಭಾಸ್ಕರ್ ರಾವ್ ಅವರ ಪುತ್ರ ಯೆರಭಾಟಿ ಅಶ್ವಿನ್ ವಿರುದ್ಧ ವಿಶೇಷ ತನಿಖಾ ದಳ ನೂತನ ಎಫ್ ಐ ಆರ್ ದಾಖಲು ಮಾಡಿದೆ.

ಬೆಂಗಳೂರು: ಲೋಕಯುಕ್ತ ಭಾಸ್ಕರ್ ರಾವ್ ಅವರ ಪುತ್ರ ಯೆರಭಾಟಿ ಅಶ್ವಿನ್ ವಿರುದ್ಧ ವಿಶೇಷ ತನಿಖಾ ದಳ ನೂತನ ಎಫ್ ಐ ಆರ್ ದಾಖಲು ಮಾಡಿದೆ.

ಅಮಾನತುಗೊಂಡಿರುವ ಲೋಕಾಯುಕ್ತದ ಸಾರ್ವಜನಿಕ ಸಂಪರ್ಕಾಧಿಕಾರಿ ಸಯ್ಯದ್ ರಿಯಾಜ್, ದಲ್ಲಾಳಿ ಭಾಸ್ಕರ್, ಅಶ್ವಿನ್ ಮತ್ತು ಅವನ ಸಹಚರ ನರಸಿಂಹ ರಾವ್ ಅವರನ್ನು ಪ್ರಮುಖ ಆರೋಪಿಗಳೆಂದು ಹೆಸರಿಸಲಾಗಿದೆ.

ಇದು ಅಶ್ವಿನ್ ವಿರುದ್ಧ ಮೂರನೆ ಎಫ್ ಐ ಆರ್ ಆಗಿದ್ದು, ಭಾಸ್ಕರ್ ಮತ್ತು ರಿಯಾಜ್ ವಿರುದ್ಧ ಎರಡನೆ ಎಫ್ ಐ ಆರ್ ಮತ್ತು ಈ ಮೂವರೂ ಸದ್ಯಕ್ಕೆ ಪೊಲೀಸರ ಬಂಧನದಲ್ಲಿದ್ದಾರೆ.

ಮಾಜಿ ಜಿಲ್ಲ ಪಂಚಾಯಿತಿ ಸದಸ್ಯ, ಉದ್ಯಮಿ ಪಿ ಎನ್ ಕೃಷ್ಣಮೂರ್ತಿ ಅವರ ದೂರಿನ ಮೇಲೆ ಈ ಎಫ್ ಐ ಆರ್ ದಾಖಲಿಸಲಾಗಿದೆ. ಈ ದೂರಿನ ಪ್ರಕಾರ ನರಸಿಂಹ ರಾವ್ ಎನ್ನುವವರು ಕೃಷ್ಣ ಮೂರ್ತಿ ಅವರನ್ನು ಅಶ್ವಿನ್ ಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಇದು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರೊಂದಿಗಿನ ಹಣಕಾಸು ವಿವಾವದವನ್ನು ಬಗೆಹರಿಸಿಕೊಡುವುದಾಗಿ ಅಶ್ವಿನ್ ತಿಳಿಸಿದ್ದು, ಯು ಬಿ ಸಿಟಿ ಹೋಟೆಲ್ ಒಂದರಲ್ಲಿ ಭೇಟಿಯಾಗಿದ್ದಾರೆ. ನಂತರ ಕೋರಮಮಂಗಲದ ಆಸ್ತಿಯ ಖಾತೆಯನ್ನು ಮಾಡಿಸಿಕೊಡುವುದಾಗಿ ಕೃಷ್ಣಮೂರ್ತಿಯವರಿಗೆ ಅಶ್ವಿನ್ ತಿಳಿಸಿದ್ದಾನೆ.

ಇದಕ್ಕಾಗಿ 20 ಲಕ್ಷ ಹಣವನ್ನು ಅಶ್ವಿನ್ ಬೇಡಿಕೆಯಿಟ್ಟಿದ್ದು ಅದರಲಿ 10.91 ಲಕ್ಷ ದುಡ್ಡನ್ನು ಹಲವು ಕಂತುಗಳಲ್ಲಿ ಅಶ್ವಿನ್ ಮತ್ತು ನರಸಿಂಹ ರಾವ್ ಅವರಿಗೆ ಕೃಷ್ಣಮೂರ್ತಿ ಪಾವತಿಸಿದ್ದಾರೆ. ಈ ಹಣ ಪಾವತಿಸಿದ ಮೇಲು ಖಾತೆಯನನ್ನು ಮಾಡಲಾಗಿಲ್ಲ ಎಂದು ಕೃಷ್ಣಮೂರ್ತಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಇದರ ನಂತರ ಅಶ್ವಿನ್ ಅವರನ್ನು ಮತ್ತೆ ಭೇಟಿ ಮಾಡಿದ ಮೇಲೆ, ಲೋಕಾಯುಕ್ತ ಕಚೇರಿಗೆ ಕೃಷ್ಣಮೂರ್ತಿ ಅವರಿಗೆ ಬರುವಂತೆ ಹೇಳಿ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು, ಕೆಲಸ ಮಾತ್ರ ಆಗಲಿಲ್ಲ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT