ಮೀಸಲಾತಿ ಕೋರಿ ಗುಜರಾತಿನಲ್ಲಿ ಪಟೇಲ್ ಸಮುದಾಯ ನಡೆಸಿರುವ ರ್ಯಾಲಿ 
ಪ್ರಧಾನ ಸುದ್ದಿ

ಮೀಸಲಾತಿಗಾಗಿ ಗುಜರಾತಿ ಪಟೇಲರ ಮೆಗಾ ರ್ಯಾಲಿ; ಸ್ಥಗಿತಗೊಂಡ ಅಹಮದಾಬಾದ್

ಇತರೆ ಹಿಂದುಳಿದ ವರ್ಗದಡಿ ಮೀಸಲಾತಿ ಕೋರಿ ಅಹಮದಾಬಾದಿನಲ್ಲಿ ಪಟೇಲ್ ಸಮುದಾಯ ಬೃಹತ್ ರ್ಯಾಲಿ ನಡೆಸಿದೆ.

ಅಹಮದಾಬಾದ್: ಇತರೆ ಹಿಂದುಳಿದ ವರ್ಗದಡಿ ಮೀಸಲಾತಿ ಕೋರಿ ಅಹಮದಾಬಾದಿನಲ್ಲಿ ಪಟೇಲ್ ಸಮುದಾಯ ಬೃಹತ್ ರ್ಯಾಲಿ ನಡೆಸಿದೆ.

ಪಟೇಲ್ ಮುಖಂಡರು ಬಂಧ್ ಕರೆದಿರುವುದರಿಮ್ದ ಅಲ್ಲದೆ  ಪೊಲೀಸರು ಕೆಲವು ಮುಖ್ಯ ರಸ್ತೆಗಳಿಗೆ ಯಾರೂ ಬರದಂತೆ ನಿರ್ಬಂಧ ಹೇರಿರುವುದರಿಂದ ಹಾಗು ಜನಕ್ಕೆ ಅಗತ್ಯ ಇರದ ಹೊರತು ಮನೆಯಿಂದ ಹೊರಬೀಳದಂತೆ ಸೂಚಿಸಿರುವುದು ಗುಜರಾತಿನ ವಾಣಿಜ್ಯ ರಾಜಧಾನಿ ಅಹಮದಾಬದನ್ನು ಸ್ತಬ್ಧಗೊಳಿಸಿದೆ.

'ಪಾಟಿದಾರ್ ಅನಾಮತ್ ಆಂದೋಲನ ಸಮಿತಿ'ಯ ಸಂಚಾಲಕ ಹಾರ್ದಿಕ್ ಪಟೇಲ್ ಅವರು ತಿಳಿಸಿರುವಂತೆ ಜಿ ಎಂ ಡಿ ಸಿ ಮೈದಾನದಲ್ಲಿ 'ಮಾಹಾ ಕ್ರಾಂತಿ ರ್ಯಾಲಿ' ನಡೆಯಲಿದೆ ಎಂದಿದ್ದಾರೆ.

"ಇಲ್ಲಿನ ಪ್ರದೇಶಿಕ ನಿವಾಸಿಗಳಿಗೆ ತೊಂದರೆಯಾಗದಂತೆ ನಗರದಲ್ಲಿ ಹಾಗೂ ಇಡೀ ಗುಜರಾತಿನಲ್ಲಿ ಸಂಪೂರ್ಣ ಬಂಧ್ ಗೆ ಕರೆ ನೀಡಿದ್ದೇವೆ. ನಾಳೆ ಕೂಡ ಶಾಲೆ ಕಾಲೇಜು ಮತ್ತು ಅಂಗಡಿಗಳನ್ನು ತೆರೆಯದಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

ಹಿಂದುಳಿದ ವರ್ಗದಡಿ ಪಟೇಲ್ ಸಮುದಾಯವನ್ನು ಸೇರಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಆನಂದಿಬೇನ್ ಪಟೇಲ್ ಅವರು ತಿಳಿಸಿ ಮಾತುಕತೆಗೆ ಬರುವಂತೆ ಮುಖಂಡರಿಗೆ ಮನವಿ ಮಾಡಿದ್ದರೂ ಕೂಡ ಪಟೇಲ್ ಸಮುದಾಯ ಪಟ್ಟು ಸಡಿಲಿಸಲು ನಿರಾಕರಿಸಿದೆ.

ರಾಜ್ಯದಾದ್ಯಂತ ಪೊಲೀಸರು ಬಿಗಿ ಭದ್ರತೆಗೆ ಮುಂದಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT