ಪ್ರಶಸ್ತಿ ಪಡೆದ ಸಾಧಕಿಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 
ಪ್ರಧಾನ ಸುದ್ದಿ

ಮಹಿಳಾ ಸಾಧಕಿಯರಿಗೆ ಎಕ್ಸ್ ಪ್ರೆಸ್ "ದೇವಿ ಅವಾರ್ಡ್ಸ್" ಪ್ರದಾನ

ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಗೈದ ರಾಜ್ಯದ 10 ವಿಶಿಷ್ಠ ಮಹಿಳಾ ಸಾಧಕಿಯರಿಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ದೇವಿ ಅವಾರ್ಡ್ಸ್ ನೀಡಿ ಗೌರವಿಸಲಾಯಿತು.

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಗೈದ ರಾಜ್ಯದ 10 ವಿಶಿಷ್ಠ ಮಹಿಳಾ ಸಾಧಕಿಯರಿಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ದೇವಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಅವರನ್ನು ಗೌರವಿಸಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆ ಸಾಕಷ್ಟು ಮಹಿಳಾ ಸಮಸ್ಯೆಗಳನ್ನು ಬೆಳಕಿಗೆ ತಂದಿದೆ. ಜನರು ತಮ್ಮ ಕೆಲಸಕ್ಕೆ ಮನ್ನಣೆ ಸಿಗಬೇಕು ಎಂದು ಆಶಿಸುತ್ತಾರೆ. ರಾಜ್ಯದಲ್ಲಿ ಸಾಕಷ್ಟು ಕ್ರಿಯಾತ್ಮಕ ಮಹಿಳೆಯರಿದ್ದು, ಅವರ ಸೇವೆಗೆ ಮನ್ನಣೆ ಸಿಗಬೇಕು. ಕಲೆ, ವಿಜ್ಞಾನ, ಸಮಾಜ ಸೇವೆ ಮತ್ತು ಪೊಲೀಸ್ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮಹಿಳೆಯರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನಾರ್ಹ ವಿಚಾರ. ಈ ಮೂಲಕ ಪತ್ರಿಕಾ ಸಮೂಹ ಇತರರಿಗೂ ಮಾದರಿಯಾಗಿದ್ದು, ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಸಂಪಾದಕೀಯ ನಿರ್ದೇಶಕರಾದ ಪ್ರಭು ಚಾವ್ಲಾ ಅವರು ಮಾತನಾಡಿ, ಸಾಧನೆಗೈದ ಮಹಿಳೆಯರನ್ನು ಗುರುತಿಸಲು ಮತ್ತು ಅವರನ್ನು ಗೌರವಿಸಲು ಹೆಮ್ಮೆಯಾಗುತ್ತದೆ. ಮನೆ ಕೆಲಸಗಳನ್ನು ಸಂಬಾಳಿಸುವುದರೊಂದಿಗೇ ಇತರೆ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಮಲ್ಟಿಟಾಸ್ಕಿಂಗ್ (ಬಹುಕಾರ್ಯ) ಆಗಿ ಹೇಗೆ ಕೆಲಸ ಮಾಡಬಹುದು ಎಂಬುದನ್ನು ಶತಮಾನಗಳ ಹಿಂದೆಯೇ ಭಾರತೀಯ ಮಹಿಳೆಯರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಪ್ರಶಸ್ತಿ ಪಡೆದ ಸಾಧಕಿಯರು:
ಸುಕನ್ಯಾ ರಾಮ್ ಗೋಪಾಲ್ (ಘಟಂ ಕಲಾವಿದೆ)
ಶಿಲೋ ಶಿವ ಸುಲೇಮಾನ್ (ತಾಂತ್ರಿಕ ಕಲಾವಿದೆ)
ವಿದ್ಯಾ ಕೊಲ್ಯೂರ್ (ಯಕ್ಷಗಾನ ನಿರೂಪಕರು)
ನೇಮಿಚಂದ್ರ (ಬರಹಗಾರರು ಮತ್ತು ಎಂಜಿನಿಯರ್)
ಜಯ್ನಾ ಕಠಾರಿ (ಮಾನವ ಹಕ್ಕು ವಕೀಲೆ)
ರೋಹಿಣಿ ಗೋಡ್ಬಳೆ (ಕಣ ಭೌತ ಶಾಸ್ತ್ರಜ್ಞೆ)
ಆರ್ ಸುಶೀಲಾ (ಪೊಲೀಸ್ ಇನ್ಸ್ ಪೆಕ್ಟರ್)
ಡಾ. ವಿಜಯಲಕ್ಷ್ಮಿ ದೇಶ್ ಮನೆ (ಸರ್ಜಿಕಲ್ ಆಂಕಲಾಜಿಸ್ಟ್)
ಚಿತ್ರಾ ವಿಶ್ವನಾಥ್ (ವಾಸುಶಿಲ್ಪ ತಜ್ಞರು)
ಹೇಮಾಮಾಲಿನಿ ಮಯ್ಯಾ (ಹೊಟೆಲ್ ಉದ್ಯಮಿ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! Video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

SCROLL FOR NEXT