ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ 
ಪ್ರಧಾನ ಸುದ್ದಿ

೧೯೮೪ ಸಿಖ್ ವಿರೋಧಿ ಗಲಭೆ; ಟೈಟ್ಲರ್ ವಿರುದ್ಧ ಮರು ತನಿಖೆಗೆ ದೆಹಲಿ ಕೋರ್ಟ್ ಆದೇಶ

೧೯೮೪ರ ಸಿಖ್ ವಿರೋಧಿ ಗಲಭೆಯಲ್ಲಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಭಾಗಿಯಾಗಿದ್ದ ಆರೋಪವನ್ನು ತನಿಖೆ ಮಾಡಿ ಕ್ಲೀನ್ ಚಿಟ್ ಕೊಟ್ಟಿದ್ದ ಸಿ ಬಿ ಐ ಆದೇಶವನ್ನು ನಿರಾಕರಿಸಿರುವ

ನವದೆಹಲಿ: ೧೯೮೪ರ ಸಿಖ್ ವಿರೋಧಿ ಗಲಭೆಯಲ್ಲಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಭಾಗಿಯಾಗಿದ್ದ ಆರೋಪವನ್ನು ತನಿಖೆ ಮಾಡಿ ಕ್ಲೀನ್ ಚಿಟ್ ಕೊಟ್ಟಿದ್ದ ಸಿ ಬಿ ಐ ಆದೇಶವನ್ನು ನಿರಾಕರಿಸಿರುವ ದೆಹಲಿ ಕೋರ್ಟ್ ಶುಕ್ರವಾರ ಮರು ತನಿಖೆಗೆ ಆದೇಶಿಸಿದೆ.

ಸಿಬಿಐನ ವರದಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಹೆಚ್ಚಿವರಿ ಮುಖ್ಯ ಮೆಟ್ರೊಪಾಲಿಟನ್ ಮೆಜಿಸ್ಟ್ರೆಟ್ ಎಸ್ ಪಿ ಎಸ್ ಲಾಲ್ ಅವರು ೩೦೦೦ ಜನ ಸಿಖ್ ಸಮುದಾಯದವರನ್ನು ಮಾರಣ ಹೋಮ ಮಾಡಿದ ಈ ಗಲಭೆಯಲ್ಲಿ ಟೈಟ್ಲರ್ ಪಾತ್ರವನ್ನು ಮರು ತನಿಖೆ ಮಾಡುವಂತೆ ಸಿಬಿಐಗೆ ಸೂಚಿಸಿದ್ದಾರೆ.

೧೯೮೪ರ ಸಿಖ್ ವಿರೋಧಿ ಗಲಭೆಗಳಲ್ಲಿ ಪಲ್ಬನ್ಸಂಗ್ ನ ಗುರುದ್ವಾರದ ಮೇಲಿನ ದಾಳಿಯಲ್ಲಿ ಟೈಟ್ಲರ್ ಭಾಗಿಯಾಗಿರಲಿಲ್ಲ ಎಂದು ಈ ಹಿಂದೆ ಸಿಬಿಐ ತನಿಖೆಯ ವರದಿಯಲ್ಲಿ ತಿಳಿಸಿತ್ತು. ಈ ಗಲಭೆಯ ವೇಳೆಯಲ್ಲಿ ೧೯೮೪ ನವೆಂಬರ್ ೧ ರಂದು ಟೈಟ್ಲರ್ ಅವರು, ಮೂರು ಜನ ಸಿಖ್ಖರು ಹತ್ಯೆಯಾದ ಗುರುದ್ವಾರದ ಬಳಿಯಿರಲಿಲ್ಲ ಬದಲಾಗಿ ತೀನ್ ಮೂರ್ತಿ ಭವನದ ಬಳಿ ಇಂದಿರಾಗಾಂಧಿ ಅವರ ಕಳೇಬರದ ಬಳಿ ಇದ್ದರು ಎಂದು ಸಾಬೀತಾಗಿದೆ ಎಂದು ತಿಳಿಸಿ ಟೈಟ್ಲರ್ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಗಲಭೆಯ ಸಂಸ್ತ್ರಸ್ತರೊಬ್ಬರು ಕೋರ್ಟ್ ಮೊರೆ ಹೋಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT