ಮೊಹಮ್ಮದ್ ಯೂನಸ್ 
ಪ್ರಧಾನ ಸುದ್ದಿ

ಚೆನ್ನೈ ಪ್ರವಾಹ: ಹಸುಗೂಸಿಗೆ ರಕ್ಷಕ 'ಯೂನಸ್' ಹೆಸರಿಟ್ಟ ಹಿಂದೂ ದಂಪತಿ

ಚೆನ್ನೈ ಪ್ರವಾಹದಲ್ಲಿ ಮುಳುಗಿ ಹೋಗುತ್ತಿದ್ದ ಚಿತ್ರ ಮತ್ತು ಮೋಹನ್ ದಂಪತಿಗೆ ಬಂದೊದಗಿದ್ದು ಮಹಮದ್ ಯೂನಸ್. ನೆನ್ನೆ ಜನಿಸಿದ ಅವರ ಹೆಣ್ಣು ಮಗುವಿಗೆ 'ಯೂನಸ್'

ಚೆನ್ನೈ: ಚೆನ್ನೈ ಪ್ರವಾಹದಲ್ಲಿ ಮುಳುಗಿ ಹೋಗುತ್ತಿದ್ದ ಚಿತ್ರ ಮತ್ತು ಮೋಹನ್ ದಂಪತಿಗೆ ಬಂದೊದಗಿದ್ದು ಮಹಮದ್ ಯೂನಸ್. ನೆನ್ನೆ ಜನಿಸಿದ ಅವರ ಹೆಣ್ಣು ಮಗುವಿಗೆ 'ಯೂನಸ್' ಎಂದು ಹೆಸರಿಸುವ ಮೂಲಕ ಗೌರವ,ಕೃತಜ್ಞತೆ ತೋರಿದ್ದಾರೆ.

ಉರಪಕ್ಕಂ ನಲ್ಲಿ ವಾಸಿಸುತ್ತಿದ್ದ ಚಿತ್ರ ಅವರು ಗರ್ಭಿಣಿ. ಮಗುವಿಗೆ ಜನ್ಮ ನೀಡಲು ಕೆಲವೇ ದಿನಗಳು ಉಳಿದಿದ್ದವು. ಆದರೆ ಮಾನ್ಸೂನ್ ನಿಂದ ಹೊಡೆದ  ಭಾರಿ ಮಳೆಗೆ ತಮ್ಮ ಮನೆಯೂ ಸಿಕ್ಕಿಹಾಕಿಕೊಂಡು ಕುತ್ತಿಗೆಯವರೆಗೆ ನೀರು ಹರಿದಿತ್ತಂತೆ. ಈ ಸಮಯದಲ್ಲಿ ಸಂಕಷ್ಟದಲ್ಲಿದ್ದವರ ವಿಷಯವನ್ನು ಮೆಸೆಜಿಂಗ್ ಆಪ್ ಮೂಲಕ ತಿಳಿದ ಮೊಹಮ್ಮದ್ ಯೂನಸ್ ತನ್ನ ಗೆಳೆಯರೊಂದಿಗೆ ಇವರನ್ನು ರಕ್ಷಿಸಲು ಮುಂದಾಗಿದ್ದಾರೆ.

ದೋಣಿಗಳನ್ನು ಹುಡುಕಿ ಪ್ರವಾಹದಲ್ಲಿ ಸಿಕ್ಕಿದ್ದ ಇವರನ್ನು ತಲುಪಲು ನಾಲ್ಕು ಘಂಟೆಗಳ ಕಾಲ ಹಿಡಿಯಿತು ಎಂದು ತಿಳಿಸುತ್ತಾರೆ ಯೂನಸ್. "ಎಲ್ಲಿಯೂ ವಿದ್ಯುಚ್ಚಕ್ತಿ ಇರಲಿಲ್ಲ. ಜನರು ಮರಗಳನ್ನು ಹತ್ತಿ ಕಟ್ಟಡಗಳ ಮೇಲಿಂದ ಸಹಾಯಕ್ಕೆ ಮೊರೆ ಇಡುತ್ತಿದ್ದರು. ಎರಡು ಕುಟುಂಬಗಳು ಕುತ್ತಿಗೆಯವರೆಗೆ ಹರಿಯುತಿದ್ದ ನೀರಿನಲ್ಲಿ ಸಿಲುಕಿದ್ದರು. ಅವರನ್ನು ದೋಣಿಯಲ್ಲಿ ಕೂರಿಸಿಕೊಂಡ ಮೇಲೆಯೇ ತಿಳಿದದ್ದು ಅವರಲ್ಲಿ ಒಬ್ಬರು ಗರ್ಭಿಣಿ ಎಂದು. ಅವರು ಮಗುವಿಗೆ ಜನ್ಮ ನೀಡಲು ಎರಡು ದಿನಗಳಷ್ಟೇ ಬಾಕಿ ಉಳಿದಿತ್ತು" ಎಂದು ವಿವರಿಸುತ್ತಾರೆ ಯೂನಸ್.

ಮುಖ್ಯರಸ್ತೆಗೆ ದೋಣಿ ಬರಲು ೧೫ ನಿಮಿಷ ಹಿಡಿಯಿತಂತೆ. ಅಷ್ಟರಲ್ಲಿ ಚಿತ್ರಾ ಭಯಕ್ಕೆ ಎಚ್ಚರ ತಪ್ಪಿರುವುದನ್ನು ಯೂನಸ್ ಗಮನಿಸಿದ್ದಾರೆ. ಅವರನ್ನು ಎಚ್ಚರಿಸಲು, ಸಮಾಧಾನ ಪಡಿಸಲು ಯೂನಸ್ ಕಥೆ ಹೇಳಿದ್ದಾರೆ. "ದೋಣಿ ಮುಗುಚಿ ಬಿದ್ದಿದ್ದ ಮರವೊಂದಕ್ಕೆ ಢಿಕ್ಕಿ ಹೊಡೆದು ಮುಳುಗುವ ಅಪಾಯದಲ್ಲಿತ್ತು. ಆ ಭಯಕ್ಕೆ ಅವರು ಎಚ್ಚರ ತಪ್ಪಿದರು. ಮತ್ತೊಬ್ಬರಿಗೆ ಸಹಾಯ ಮಾಡದ ಹೊರತು ಹಣ ಕಾಗದದ ಚೂರು ಎಂದು ತಿಳಿಸುವ ಒಂದು ಕಥೆ ಹೇಳಿದೆ ಅವರಿಗೆ" ಎಂದು ಯೂನಸ್ ನೆನಪಿಸಿಕೊಳ್ಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT