ಕಿರಣ್ ಬೇಡಿ 
ಪ್ರಧಾನ ಸುದ್ದಿ

ಪೋಸ್ಟ್ ಮಾರ್ಟಮ್ : 'ಹೊರಗಿನ' ಬೇಡಿ ಬಿಟ್ಟುಕೊಟ್ಟಿದ್ದು ಬಿಜೆಪಿಯ ಅತಿ ಸುರಕ್ಷಿತ ಸ್ಥಾನ

ಕೃಷ್ಣನಗರ ಬಿಜೆಪಿ ಪಕ್ಷದ ಅತಿ ಸುರಕ್ಷಿತ ಸ್ಥಾನ ಎಂದೇ ಹೇಳಲಾಗುತ್ತದೆ. ಮಾರಾಟಗಾರರ ಮತ್ತು ಮಧ್ಯಮವರ್ಗದ ವೃತ್ತಿಪರರು ಹೆಚ್ಚಿರುವ

ನವದೆಹಲಿ: ಕೃಷ್ಣನಗರ ಬಿಜೆಪಿ ಪಕ್ಷದ ಅತಿ ಸುರಕ್ಷಿತ ಸ್ಥಾನ ಎಂದೇ ಹೇಳಲಾಗುತ್ತದೆ. ಮಾರಾಟಗಾರರ ಮತ್ತು ಮಧ್ಯಮವರ್ಗದ ವೃತ್ತಿಪರರು ಹೆಚ್ಚಿರುವ ಈ ಕ್ಷೇತ್ರದಲ್ಲಿ ಈ ಬಾರಿ ಎಎಪಿ ಸುನಾಮಿಗೆ ಬಿಜೆಪಿ ಕೊಚ್ಚಿ ಹೋಗಿದೆ.

ಮತ ಎಣಿಕೆ ಸಮಯದಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಬೇಡಿ ಅದೃಷ್ಟ 'ತೆರೆಯಾಟ'ವಾಡುತ್ತಿತ್ತು. ಒಂದು ಸಮಯದಲ್ಲಿ ಅವರು ಮೂಂಚೂಣಿಯಲ್ಲಿದ್ದರು ಕೂಡ, ಕೊನೆಗೆ ೨೨೭೭ ಮತಗಳ ಅಂತರದಿಂದ ಸೋಲು ಕಂಡರು. ೨೦೧೩ ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಹರ್ಷವರ್ಧನ್ ಈ ಕ್ಷೇತ್ರದಲ್ಲಿ ೪೬೦೦೦ ಮತಗಳ ಅಂತರದಿಂದ ಗೆದ್ದಿದ್ದರು.

ಮೂರು ದಿನಗಳ ಹಿಂದೆ ಚಟುವಟಿಕೆಗಳ ಗೂಡಾಗಿದ್ದ ಚಂದ್ರನಗರದ ಬಿಜೆಪಿ ಕಛೇರಿಗೆ ನೆನ್ನೆ ಬೀಗ ಜಡಿಯಲಾಗಿತ್ತು. "ಡಾಕ್ಟರ್ ಸಾಹೇಬರು (ಕೇಂದ್ರ ಸಚಿವ ಹರ್ಷವರ್ಧನ್) ಸ್ಪರ್ಧಿಸಿದ್ದರೆ ಖಂಡಿತಾ ಗೆಲ್ಲುತ್ತಿದ್ದರು. ಅಭ್ಯರ್ಥಿಗಳನ್ನು ಬಿಡಿ, ಕಾರ್ಯಕರ್ತರನ್ನು ಕೂಡ ಹೊರಗಿನಿಂದ ಕರೆತರಲಾಗಿತ್ತು. ಈ ಕ್ಷೇತ್ರದ ಬಗ್ಗೆ ಅವರಿಗೆ ಕಿಂಚಿತ್ತೂ ತಿಳಿದಿರಲಿಲ್ಲ" ಎನ್ನುತ್ತಾರೆ ೪೧ ವರ್ಷದ ಮೊಬೈಲ್ ಫೋನುಗಳ ಅಂಗಡಿ ಮಾಲೀಕ ಗಣೇಶ್ ಗುಪ್ತ. ಕಳೆದ ೨೦ ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ಮತ ನೀಡಿದ್ದ ಗಣೇಶ್ ಈ ಬಾರಿ ತಮ್ಮ ನಿಷ್ಠೆಯನ್ನು ಬದಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ