ಕಿರಣ್ ಬೇಡಿ 
ಪ್ರಧಾನ ಸುದ್ದಿ

ಪೋಸ್ಟ್ ಮಾರ್ಟಮ್ : 'ಹೊರಗಿನ' ಬೇಡಿ ಬಿಟ್ಟುಕೊಟ್ಟಿದ್ದು ಬಿಜೆಪಿಯ ಅತಿ ಸುರಕ್ಷಿತ ಸ್ಥಾನ

ಕೃಷ್ಣನಗರ ಬಿಜೆಪಿ ಪಕ್ಷದ ಅತಿ ಸುರಕ್ಷಿತ ಸ್ಥಾನ ಎಂದೇ ಹೇಳಲಾಗುತ್ತದೆ. ಮಾರಾಟಗಾರರ ಮತ್ತು ಮಧ್ಯಮವರ್ಗದ ವೃತ್ತಿಪರರು ಹೆಚ್ಚಿರುವ

ನವದೆಹಲಿ: ಕೃಷ್ಣನಗರ ಬಿಜೆಪಿ ಪಕ್ಷದ ಅತಿ ಸುರಕ್ಷಿತ ಸ್ಥಾನ ಎಂದೇ ಹೇಳಲಾಗುತ್ತದೆ. ಮಾರಾಟಗಾರರ ಮತ್ತು ಮಧ್ಯಮವರ್ಗದ ವೃತ್ತಿಪರರು ಹೆಚ್ಚಿರುವ ಈ ಕ್ಷೇತ್ರದಲ್ಲಿ ಈ ಬಾರಿ ಎಎಪಿ ಸುನಾಮಿಗೆ ಬಿಜೆಪಿ ಕೊಚ್ಚಿ ಹೋಗಿದೆ.

ಮತ ಎಣಿಕೆ ಸಮಯದಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಬೇಡಿ ಅದೃಷ್ಟ 'ತೆರೆಯಾಟ'ವಾಡುತ್ತಿತ್ತು. ಒಂದು ಸಮಯದಲ್ಲಿ ಅವರು ಮೂಂಚೂಣಿಯಲ್ಲಿದ್ದರು ಕೂಡ, ಕೊನೆಗೆ ೨೨೭೭ ಮತಗಳ ಅಂತರದಿಂದ ಸೋಲು ಕಂಡರು. ೨೦೧೩ ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಹರ್ಷವರ್ಧನ್ ಈ ಕ್ಷೇತ್ರದಲ್ಲಿ ೪೬೦೦೦ ಮತಗಳ ಅಂತರದಿಂದ ಗೆದ್ದಿದ್ದರು.

ಮೂರು ದಿನಗಳ ಹಿಂದೆ ಚಟುವಟಿಕೆಗಳ ಗೂಡಾಗಿದ್ದ ಚಂದ್ರನಗರದ ಬಿಜೆಪಿ ಕಛೇರಿಗೆ ನೆನ್ನೆ ಬೀಗ ಜಡಿಯಲಾಗಿತ್ತು. "ಡಾಕ್ಟರ್ ಸಾಹೇಬರು (ಕೇಂದ್ರ ಸಚಿವ ಹರ್ಷವರ್ಧನ್) ಸ್ಪರ್ಧಿಸಿದ್ದರೆ ಖಂಡಿತಾ ಗೆಲ್ಲುತ್ತಿದ್ದರು. ಅಭ್ಯರ್ಥಿಗಳನ್ನು ಬಿಡಿ, ಕಾರ್ಯಕರ್ತರನ್ನು ಕೂಡ ಹೊರಗಿನಿಂದ ಕರೆತರಲಾಗಿತ್ತು. ಈ ಕ್ಷೇತ್ರದ ಬಗ್ಗೆ ಅವರಿಗೆ ಕಿಂಚಿತ್ತೂ ತಿಳಿದಿರಲಿಲ್ಲ" ಎನ್ನುತ್ತಾರೆ ೪೧ ವರ್ಷದ ಮೊಬೈಲ್ ಫೋನುಗಳ ಅಂಗಡಿ ಮಾಲೀಕ ಗಣೇಶ್ ಗುಪ್ತ. ಕಳೆದ ೨೦ ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ಮತ ನೀಡಿದ್ದ ಗಣೇಶ್ ಈ ಬಾರಿ ತಮ್ಮ ನಿಷ್ಠೆಯನ್ನು ಬದಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT