ಶ್ರೀ ಪದ್ಮನಾಭಾಸ್ವಾಮಿ ದೇವಾಲಯ 
ಪ್ರಧಾನ ಸುದ್ದಿ

ತಿರುವನಂತಪುರಮ್ ಪದ್ಮನಾಭಸ್ವಾಮಿ ದೇವಾಲಯದಿಂದ ೨೬೬ಕೆಜಿ ಚಿನ್ನ ನಾಪತ್ತೆ

ಶ್ರೀ ಪದ್ಮನಾಭಾಸ್ವಾಮಿ ದೇವಾಲಯದಿಂದ ೨೬೬ಕೆಜಿ ಚಿನ್ನ ನಾಪತ್ತೆಯಾಗಿದೆ ಎಂದು ಕೇಂದ್ರದ ಮಾಜಿ ಆಡಿಟರ್ ಜನರಲ್ ವಿನೋದ್ ರಾಯ್

ತಿರುವನಂತಪುರಮ್: ಶ್ರೀ ಪದ್ಮನಾಭಾಸ್ವಾಮಿ ದೇವಾಲಯದಿಂದ ೨೬೬ಕೆಜಿ ಚಿನ್ನ ನಾಪತ್ತೆಯಾಗಿದೆ ಎಂದು ಕೇಂದ್ರದ ಮಾಜಿ ಆಡಿಟರ್ ಜನರಲ್ ವಿನೋದ್ ರಾಯ್ ಸುಪ್ರೀಮ್ ಕೋರ್ಟ್ ಗೆ ತಿಳಿಸಿದ್ದಾರೆ.

ದೇವಾಲಯದ ಆಸ್ತಿ-ಪಾಸ್ತಿಯನ್ನು ಆಡಿಟ್ ಮಾಡಲು ಸುಪ್ರೀಮ್ ಕೋರ್ಟ್ ರಾಯ್ ಅವರನ್ನು ನೇಮಿಸಿತ್ತು. ಈಗ ರಾಯ್ ಅವರು ಸಲ್ಲಿಸಿರುವ ೧೮೦೦ ಪುಟದ ವರದಿಯಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ.

ದೇವಸ್ಥಾನಕ್ಕೆ ಚಿನ್ನದ ಲೇಪನದ ಕೆಲಸದ ಸಲುವಾಗಿ ದೇವಾಲಯದ ದಾಸ್ತಾನಿನಿಂದ ೮೯೩.೪೪ ಕೆಜಿ ಚಿನ್ನವನ್ನು "ಕರಗಿಸಲು ಮತ್ತು ಶುದ್ಧೀಕರಿಸಲು" ಖಾಸಗಿ ಗುತ್ತಿಗೆದಾರನಿಗೆ ನೀಡಲಾಗಿತ್ತು.  ಆದರೆ ಹಿಂದಿರುಗಿದ್ದು ಕೆಲವ ೬೩೭ ಕೆಜಿ ಎನ್ನುತ್ತಾರೆ ದೇವಾಲಯದ ಅಧಿಕಾರಿಗಳು.

ಈ ಇಡೀ ಪ್ರಕರಣದಲ್ಲಿ ಏನೋ ತಪ್ಪು ನಡೆದಿದ್ದು, ಖಾಸಗಿ ಗುತ್ತಿಗೆದಾರನಿಗೆ ಚಿನ್ನ ನೀಡುವಾಗ ಅದರ ಗುಣಮಟ್ಟ ಪರೀಕ್ಷಿಸದೆ ಕೊಟ್ಟದ್ದೇಕೆ ಎಂದು ಪ್ರಶ್ನಿಸುತ್ತದೆ ವರದಿ.

ಆಸ್ತಿಪತ್ರದ ಪೂರಕವಾದ ದಾಖಲೆಗಳನ್ನು ಒದಗಿಸದಿದ್ದಕ್ಕೆ, ದೇವಾಲಯದ ಆಡಳಿತ ಮಂಡಳಿಯಾದ ಟ್ರ್ಯಾವಂಕೋರ್ ರಾಜವಂಶವನ್ನು ಈ ವರದಿ ದೂರಿದೆ.

ಹಣಕಾಸಿನ ದಾಖಲೆಗಳು ತಿರುಚಲಾಗಿದೆ ಹಾಗೂ ೨೦೦೮-೨೦೦೯ ರಲ್ಲಿ ದೇವಾಲಯ ಪಡೆದ ಚಿನ್ನ ಮತ್ತು ಬೆಳ್ಳಿಯ ದಾನದ ವಿವರವನ್ನು ದಾಖಲಿಸಿಲ್ಲ ಎಂದು ದೂರಿದೆ ವರದಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel