ಪ್ರಧಾನ ಸುದ್ದಿ

ಇಂದು ಕಚೇರಿ ತೊರೆಯಲಿರುವ ಜೆಡಿಎಸ್

Guruprasad Narayana

ಬೆಂಗಳೂರು: ಇಲ್ಲಿಯವರೆಗೆ ತಮ್ಮ ಪ್ರಧಾನ ಕಚೇರಿಯಾಗಿದ್ದ, ರೇಸ್ ಕೋರ್ಸ್ ರಸ್ತೆಯ ಕಛೇರಿಯನ್ನು ಜೆಡಿಎಸ್ ಪಕ್ಷ ಭಾನುವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ವಹಿಸಿಕೊಡಲಿದೆ.

ಶನಿವಾರ ಪತ್ರಿಕಾ ಗೋಷ್ಠಿ ನಡೆಸಿದ ಪ್ರಧಾನಿ ಎಚ್ ಡಿ ದೇವೇಗೌಡ, ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ಕಚೇರಿಯನ್ನು ತೊರೆಯಲಿದ್ದೇವೆ ಎಂದು ತಿಳಿಸಿದ್ದಾರೆ. "ನಮಗೂ ಆತ್ಮಾಭಿಮಾನ ಇದೆ ಹಾಗೂ ನಾವೂ ಯಾರ ಹಂಗಿನಲ್ಲೂ ಇರಲು ಬಯಸುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನನ್ನ ಮನವಿ ಎಂದರೆ ನಮಗೆ ಹೊಸ ಜಾಗ ಸಿಗುವವರೆಗೂ ಒಂದು ಮೂಲೆಯಲ್ಲಿ ನಮ್ಮ ಕಡತಗಳು ಮತ್ತು ಪೀಠೋಪಕರಣಗಳನ್ನು ಇಟ್ಟುಕೊಳ್ಳಲು ಅವಕಾಶ ನೀಡಿ" ಎಂದಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಒಕ್ಕಲಿಗರ ಸಂಘದ ಕಟ್ಟಡದ ಒಂದು ಭಾಗವನ್ನು ಕಚೇರಿಯಾಗಿ ಬಳಸಿಕೊಳ್ಳಲು ನನ್ನ ಮನಃಸಾಕ್ಷಿ ಒಪ್ಪಲಿಲ್ಲ ಎಂದಿರುವ ಮಾಜಿ ಪ್ರಧಾನಿ "ಹೇಗಿದ್ದರೂ ಈಗ ಬೇಸಿಗೆ ಆದುದರಿಂದ ಇಲ್ಲೆ ಹೊರಗಡೆ ನಾವು ಸಭೆ ನಡೆಸಬಹುದು. ಇದಕ್ಕೆ ಕಾಂಗ್ರೆಸ್ ಪಕ್ಷದ ಯಾವುದೇ ಆಕ್ಷೇಪಣೆ ಇಲ್ಲ ಎಂದುಕೊಳ್ಳುತ್ತೇನೆ" ಎಂದಿದ್ದಾರೆ.

SCROLL FOR NEXT