ಯುವರಾಜ್ ಸಿಂಗ್ 
ಪ್ರಧಾನ ಸುದ್ದಿ

ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದ್ದಕ್ಕೆ ಧೋನಿ ದೂರಿದ ಯುವಿ ತಂದೆ; ಸಮಾಧಾನದ ಟ್ವೀಟ್ ಮಾಡಿದ ಯುವರಾಜ್

ಕ್ರಿಕೆಟ್ ವಿಶ್ವಕಪ್ ತಂಡಕ್ಕೆ ತಮ್ಮ ಮಗ ಆಯ್ಕೆಯಾಗದಿದ್ದಕ್ಕೆ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸೋಮವಾರ ಎಂ ಎಸ್ ಧೋನಿ

ನವದೆಹಲಿ: ಕ್ರಿಕೆಟ್ ವಿಶ್ವಕಪ್ ತಂಡಕ್ಕೆ ತಮ್ಮ ಮಗ ಆಯ್ಕೆಯಾಗದಿದ್ದಕ್ಕೆ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸೋಮವಾರ ಎಂಎಸ್ ಧೋನಿ ಅವರನ್ನು ದೂರಿದ್ದಾರೆ.

"ನನ್ನ ಮಗನ ಜೊತೆ ಎಂಎಸ್ ಧೋನಿಗೆ ಏನು ತೊಂದರೆ ನನಗೆ ತಿಳಿಯಬೇಕು. ನನ್ನ ಮಗನಿಗೆ ಕ್ಯಾನ್ಸರ್ ತೊಂದರೆ ಇದ್ದಾಗಲೂ ತಂಡಕ್ಕಾಗಿ ಆಡಿದ್ದಾನೆ" ಎಂದು ಭಾರತದ ಒಂದು ದಿನ ಕ್ರಿಕೆಟ್ ತಂಡದ ನಾಯಕನ ಮೇಲೆ ಯೋಗರಾಜ್ ಕಿಡಿ ಕಾರಿದ್ದಾರೆ.

"ನನ್ನ ಮಗ ಕ್ರಿಕೆಟ್ ವರ್ಲ್ಡ್ ಕಪ್ ತಂಡದಲ್ಲಿ ಇಲ್ಲ ಎಂದು ತಿಳಿದು ನನಗೆ ಆಘಾತವಾಯಿತು. ಎಂಎಸ್ ಧೋನಿಗೆ ನನ್ನ ಮಗನ ಜೊತೆ ವೈಯಕ್ತಿಕ ತೊಂದರೆಗಳಿದ್ದರೆ ನಾನೇನೂ ಮಾಡುವುದಿಲ್ಲ. ದೇವರು ನ್ಯಾಯ ಕೊಡುತ್ತಾನೆ. ಅವರು (ಎಂಎಸ್ ಧೋನಿ) ಆಯ್ಕೆಗಾರರಿಗೆ ತಂಡದಲ್ಲಿ ಯುವರಾಜ್ ಬೇಕಾಗಿಲ್ಲ ಎಂದು ತಿಳಿಸಿದ್ದರು" ಎಂದು ಯೋಗರಾಜ್ ದೂರಿದ್ದಾರೆ.

ಈ ಪ್ರಕರಣಕ್ಕೆ ಸಮಾಧಾನ ನೀಡಲು ಪ್ರಯತ್ನಿಸಿರುವ ಯುವರಾಜ್ "ಎಲ್ಲ ಪೋಷಕರಂತೆ  ನನ್ನ ತಂದೆಯೂ ಮಗನ ಮೇಲಿನ ಪ್ರೀತಿಯಿಂದ ಹಾಗೆ ಮಾತನಾಡಿದ್ದಾರೆ. ಮಹಿ ಜೊತೆ ಆಡುವುದನ್ನು ನಾನು ಸಂಭ್ರಮಿಸಿದ್ದೇನೆ. ಮುಂದೆಯೂ ಆಡುತ್ತೇನೆ" ಎಂದು ಯುವರಾಜ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT