ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ವಿಮಾನ ತಪ್ಪಿಸಿಕೊಂಡದ್ದಕ್ಕೆ ಹುಸಿ ಬಾಂಬ್ ಕರೆ ಮಾಡಿದ ಈಜು ತರಬೇತುದಾರ

ಹುಸಿ ಬಾಂಬ್ ಕರೆಯಿಂದ, ರಾಂಚಿಯಿಂದ ದೆಹಲಿಗೆ ತೆರಳಬೇಕಿದ್ದ ವಿಮಾನ ತಡವಾಗಿದ್ದಲ್ಲದೆ,

ರಾಂಚಿ: ಹುಸಿ ಬಾಂಬ್ ಕರೆಯಿಂದ, ರಾಂಚಿಯಿಂದ ದೆಹಲಿಗೆ ತೆರಳಬೇಕಿದ್ದ ವಿಮಾನ ತಡವಾಗಿದ್ದಲ್ಲದೆ, ಭದ್ರತಾ ಪಡೆಗಳಿಗೆ ತಲೆನೋವಾದ ಘಟನೆ ಸೋಮವಾರ ನಡೆದಿದೆ.

ರಾಂಚಿಯಿಂದ ದೆಹಲಿಗೆ ತೆರಳಬೇಕಿದ್ದ ವಿಮಾನಕ್ಕೆ ಸರಿಯಾದ ಸಮಯಕ್ಕೆ ಬರದೆ ತಪ್ಪಿ ಹೋದದ್ದಕ್ಕೆ, ಪ್ರಯಾಣಿಕನೊಬ್ಬ ಈ ಹುಸಿ ಕರೆ ಮಾಡಿದ್ದು ಎಂದು ತಿಳಿದುಬಂದ ನಂತರ ವಿಮಾನ ನಿಲ್ದಾಣದಿಂದ ಬಂಧನಕ್ಕೊಳಗಾಗಿದ್ದಾನೆ.

ಮೂಲಗಳ ಪ್ರಕಾರ ಈ ಪ್ರಯಾಣಿಕ ಈಜು ತರಬೇತುದಾರ. ತಡವಾಗಿ ಬಂದು ಪ್ರಯಾಣ ತಪ್ಪಿಸಿಕೊಂಡದ್ದರಿಂದ ಮುಂಬೈನ ಕಾಲ್ ಸೆಂಟರ್ ಗೆ ಕರೆ ಮಾಡಿ ತಾನು ತೆರಳಬೇಕಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂದು ಸಂಜೆ ೩ :೦೫ ಘಂಟೆಗೆ ತಿಳಿಸಿದ್ದಾನೆ.

ಆಗಲೇ ಮೇಲಕ್ಕೆ ಹಾರಿದ್ದ ವಿಮಾನವನ್ನು ರಾಂಚಿ ವಿಮಾನ ನಿಲ್ದಾಣಕ್ಕೆ ಇಳಿಸಿ ಪ್ರತ್ಯೇಕಗೊಳಿಸಿದ್ದಾರೆ. ಕೂಡಲೆ ಕಾರ್ಯಾಚರಣೆಗಿಳಿದ ಭದ್ರತಾ ಸಿಬ್ಬಂದಿ, ತಪಾಸಣೆಯ ನಂತರ ಇದು ಹುಸಿ ಕರೆ ಎಂದು ಧೃಢೀಕರಿಸಿ, ಕರೆಗಳ ತನಿಖೆ ನಡೆಸಿ ಪ್ರಯಾಣಿಕನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?