ಪೊಲೀಸರು ನಿಷ್ಕ್ರಿಯಗೊಳಿಸಿದ ಪೈಪ್ ಬಾಂಬ್ 
ಪ್ರಧಾನ ಸುದ್ದಿ

ಕ್ಷಿಪ್ರ ಕಾರ್ಯಾಚರಣೆ, ಶಿವಗಂಗ ಬಾರ್ ನಲ್ಲಿ ಬಾಂಬ್ ಸ್ಫೋಟ ತಪ್ಪಿಸಿದ ಪೊಲೀಸರು

ಶಿವಗಂಗಾದ ಗಾಂಧಿನಗರದ ಬಾರ್ ಒಂದರಲ್ಲಿ ಸಣ್ಣ ಪ್ರಮಾಣದ

ಶಿವಗಂಗ: ಶಿವಗಂಗಾದ ಗಾಂಧಿನಗರದ ಬಾರ್ ಒಂದರಲ್ಲಿ ಸಣ್ಣ ಪ್ರಮಾಣದ ಪೈಪ್ ಬಾಂಬ್ ಒಂದರನ್ನು ನಿಷ್ಕ್ರಿಯಗೊಳಿಸುವಲ್ಲಿ ಪೋಲಿಸರು ಸಫಲರಾಗಿದ್ದು, ಸ್ಫೋಟವನ್ನು ತಪ್ಪಿಸಿದ್ದಾರೆ.

ಅನಾಥವಾಗಿ ಬಿದ್ದಿದ್ದ ಚೀಲವೊಂದನ್ನು ನೋಡಿದ ಟಿ ಎ ಎಸ್ ಎಂ ಎ ಸಿ ಬಾರ್ ಮಾಲೀಕ ಮುಥುರಮಾಲಿಂಗಮ್ ಅವರಿಗೆ ಅನುಮಾನ ಬಂದು ಪೋಲಿಸರಿಗೆ ತಿಳಿಸಿದ್ದಾರೆ. ಎಸ್ ಪಿ ಅಶ್ವಿನ್ ಎಂ ಕೊಟ್ನಿಸ್  ನಾಯಕತ್ವದಲ್ಲಿ ಬಂದ ಪೊಲೀಸ್ ತಂಡ, ಲೋಹ ಪತ್ತೆ ಯಂತ್ರದ ಮೂಲಕ ಈ ಬಟ್ಟೆಯ ಚೀಲವನ್ನು ತಪಾಸಣೆ ಮಾಡಿ ಅದರಲ್ಲಿ ಬಾಂಬ್ ಇರುವುದನ್ನು ದೃಢೀಕರಿಸಿದ್ದಾರೆ. ನಂತರ ಮುಧುರೈನಿಂದ ಬಂದ ಬಾಂಬ್ ನಿಷ್ಕ್ರಿಯ ದಳ ಬಾಂಬನ್ನು ನಿಷ್ಕ್ರಿಯಗೊಳಿಸಿದೆ.

೧೦ ಸೆಂಟಿಮೀಟರ್ ಉದ್ದ ಮತ್ತು ೯ ಸೆಂಟಿಮೀಟರ್ ಅಗಲವಿದ್ದ ಈ ಪೈಪ್ ಬಾಂಬ್, ಪ್ಲಾಸ್ಟಿಕ್ ಊಟದ ಡಬ್ಬಿಯಲ್ಲಿ ಟೈಮರ್ ಜೊತೆ ಇಡಲಾಗಿತ್ತು. ಸುಮಾರು ೧೧ ಘಂಟೆಗೆ ಬಂದ ಬಾಂಬ್ ನಿಷ್ಕ್ರಿಯ ದಳಕ್ಕೆ ೨ ಘಂಟೆಯ ಹೊತ್ತಿಗೆ ಆ ವೈರ್ ಗಳನ್ನು ಬೇರ್ಪಡಿಸಲು ಸಾಧ್ಯವಾಗಿದೆ.

ಈ ಬಾಂಬ್ ಸಣ್ಣ ಪ್ರಮಾಣದ್ದಾದರೂ, ಹಿಂದೆ ಮಧುರೈ ನಲ್ಲಿ ನಿಷ್ಕ್ರಿಯಗೊಳಿಸಿದ್ದ ಬಾಂಬ್ ಗಳ ಮಾದರಿಯಲ್ಲೇ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಬ್ ನಲ್ಲಿ ದಿಟೊನೇಟರ್ ಬಳಸದಿದ್ದರೂ, ದೊಡ್ಡ ವೋಲ್ಟೇಜ್ ಬ್ಯಾಟರಿಯೊಂದನ್ನು ಬಳಸಿದ್ದರಿಂದ ಅಕಸ್ಮಾತ್ ಸ್ಫೋಟಗೊಂಡಿದ್ದರೆ ಗಮನೀಯವಾದ ಹಾನಿ ಉಂಟು ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT