ಜಗ್ತರ್ ಸಿಂಗ್ ಅಲಿಯಾಸ್ ತಾರಾ 
ಪ್ರಧಾನ ಸುದ್ದಿ

ತಾರಾ-ಐ ಎಸ್ ಐ ನಂಟು ಬಹಿರಂಗ

ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಬೇಅಂತ್ ಸಿಂಗ್ ಅವರನ್ನು ಹತ್ಯೆಗೈದ ಸಿಖ್ ಉಗ್ರಗಾಮಿ ಜಗ್ತರ್ ಸಿಂಗ್ ಅಲಿಯಾಸ್ ತಾರಾ ಅವರ ವಿಚಾರಣೆ ವೇಳೆಯಲ್ಲಿ

ಚಂಡಿಘರ್: ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಬೇಅಂತ್ ಸಿಂಗ್ ಅವರನ್ನು ಹತ್ಯೆಗೈದ ಸಿಖ್ ಉಗ್ರಗಾಮಿ ಜಗ್ತರ್ ಸಿಂಗ್ ಅಲಿಯಾಸ್ ತಾರಾ ಅವರ ವಿಚಾರಣೆ ವೇಳೆಯಲ್ಲಿ ಪಾಕಿಸ್ತಾನದ ಐ ಎಸ್ ಐ ಜೊತೆ ಸಿಕ್ ಉಗ್ರಗಾಮಿಗಳು ಕೂಡಿಕೊಂಡು ದಕ್ಷಿಣ-ಪೂರ್ವ ಏಶಿಯಾ ದೇಶಗಳಲ್ಲಿ ಯುವಕರನ್ನು ಆಯ್ಕೆ ಮಾಡಿ ಭಯೋತ್ಪಾದಕ ಶಿಬಿರಗಳನ್ನು ಸ್ಥಾಪಿಸುವ ಯೋಜನೆಯನ್ನು ಹೊರಗೆಡವಿದ್ದಾನೆ.

ಕಳೆದು ಎರಡು ತಿಂಗಳಲ್ಲಿ ಥೈಲ್ಯಾಂಡ್ ಮತ್ತು ಮಲೇಶಿಯಾ ದೇಶಗಳಿಂದ ೪ ಸಿಕ್ ಉಗ್ರಗಾಮಿಗಳನ್ನು ಬಂಧಿಸಲಾಗಿದೆ. ಥೈಲ್ಯಾಂಡ್ ನಲ್ಲಿ ತಾರಾ ನ ಬಂಧನದ ನಂತರ ರಾಜ್ಯ ಬೇಹುಗಾರಿಕಾ ಪೊಲೀಸ್ ವಿಭಾಗ ಸುಮಾರು ೧೨ ಪಂಜಾಬಿ ಯುವಕರನ್ನು ಪ್ರಶ್ನಿಸಿದೆ. ಕೇಂದ್ರ ಬೇಹುಗಾರಿಕಾ ಸಂಸ್ಥೆಯಿಂದ ಬಂದ ಮಾಹಿತಿ ಪ್ರಕಾರ ತಾರಾ ಈ ಯುವಕರ ಜೊತೆ ಸಂಪರ್ಕದಲ್ಲಿದ್ದು ಅವರನ್ನು ಭಯೋತ್ಪಾದನೆ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಉದ್ಯೋಗ ನೀಡುವ ಭರವಸೆಯ ಮೇಲೆ ಥೈಲ್ಯಾಂಡ್ ಗೆ ಆಹ್ವಾನಿಸಿದ್ದ.

ತಾರಾ ನ ಬಳಿ ಈ ಯುವಕರ ಮಾಹಿತಿಯಿದ್ದರೂ, ಆ ಯುವಕರಿಗೆ ತಾರಾ ನ ಬಗ್ಗೆ ತಿಳಿದಿರಲಿಲ್ಲ ಎಂದಿದ್ದಾರೆ ಪೊಲೀಸರು. ತಾರಾ ಮತ್ತು ಇತರ ಉಗ್ರಗಾಮಿಗಳು ಪಂಜಾಬಿನಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಲು ಸಂಚು ಹೂಡಿದ್ದರು ಎಂದು ಕೂಡ ತಿಳಿದುಬಂದಿದೆ.

ಖಾಲಿಸ್ತಾನ್ ವಿಮೋಚನಾ ಸಂಘ ದ ಅಧ್ಯಕ್ಷ ಹರ್ಮಿಂದರ್ ಸಿಂಗ್ ಅಲಿಯಾ ಮಿಂಟೋ ಮತ್ತು ಅವನ ಸಹಚರ ಗುರ್ಪ್ರೀತ್ ಸಿಂಗ್ ಅಲಿಯಾಸ್ ಗೋಪಿ ಅವರನ್ನು ಕೂಡ ಥೈಲಾಂಡ್ ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಇವರ ವಿಚಾರಣಾ ವೇಳೆಯಲ್ಲಿ ಕೂಡ ಪಂಜಾಬಿನ ಯುವಕರನ್ನು ಸೆಳೆಯಲು ಯತ್ನಿಸುತ್ತಿದ್ದ ಐ ಎಸ್ ಐ ಯೋಜನೆಯ ಬಗ್ಗೆ ಬಹಿರಂಗಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸೌಧದತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Video

'JDS ಪಾದಯಾತ್ರೆಯ ಬಂಡವಾಳ ಬಯಲು ಮಾಡಿದ ವಿಜಯೇಂದ್ರ': ಕಾಂಗ್ರೆಸ್​​ನಿಂದ ವಿಡಿಯೋ ಬಿಡುಗಡೆ!

ಅಮೃತ್ ಭಾರತ್ ಯೋಜನೆಗೆ ವೇಗದ ಕೊರತೆ? ಕರ್ನಾಟಕದ 61 ರೈಲು ನಿಲ್ದಾಣಗಳಲ್ಲಿ 12 ಮಾತ್ರ ಮೇಲ್ದರ್ಜೆಗೆ

D Boss ವಿರುದ್ಧ ಸ್ನೇಹಿತರೇ 'ಸಾಕ್ಷ್ಯ': ರೇಣುಕಾಸ್ವಾಮಿ ಚಡ್ಡಿ ಬಿಚ್ಚಿ ದರ್ಶನ್‌ ಹೊಡೆದಿದ್ದರು, ನೇಣು ಹಾಕೋ ಯತ್ನ- ಪ್ರದೋಷ್ ಸಲ್ಲಿಸಿದ ಅರ್ಜಿಯಲ್ಲಿ ಮತ್ತೇನಿದೆ?

TNIE Exclusive | Air India ವಿಮಾನದಲ್ಲಿ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?