ಜಗ್ತರ್ ಸಿಂಗ್ ಅಲಿಯಾಸ್ ತಾರಾ 
ಪ್ರಧಾನ ಸುದ್ದಿ

ತಾರಾ-ಐ ಎಸ್ ಐ ನಂಟು ಬಹಿರಂಗ

ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಬೇಅಂತ್ ಸಿಂಗ್ ಅವರನ್ನು ಹತ್ಯೆಗೈದ ಸಿಖ್ ಉಗ್ರಗಾಮಿ ಜಗ್ತರ್ ಸಿಂಗ್ ಅಲಿಯಾಸ್ ತಾರಾ ಅವರ ವಿಚಾರಣೆ ವೇಳೆಯಲ್ಲಿ

ಚಂಡಿಘರ್: ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಬೇಅಂತ್ ಸಿಂಗ್ ಅವರನ್ನು ಹತ್ಯೆಗೈದ ಸಿಖ್ ಉಗ್ರಗಾಮಿ ಜಗ್ತರ್ ಸಿಂಗ್ ಅಲಿಯಾಸ್ ತಾರಾ ಅವರ ವಿಚಾರಣೆ ವೇಳೆಯಲ್ಲಿ ಪಾಕಿಸ್ತಾನದ ಐ ಎಸ್ ಐ ಜೊತೆ ಸಿಕ್ ಉಗ್ರಗಾಮಿಗಳು ಕೂಡಿಕೊಂಡು ದಕ್ಷಿಣ-ಪೂರ್ವ ಏಶಿಯಾ ದೇಶಗಳಲ್ಲಿ ಯುವಕರನ್ನು ಆಯ್ಕೆ ಮಾಡಿ ಭಯೋತ್ಪಾದಕ ಶಿಬಿರಗಳನ್ನು ಸ್ಥಾಪಿಸುವ ಯೋಜನೆಯನ್ನು ಹೊರಗೆಡವಿದ್ದಾನೆ.

ಕಳೆದು ಎರಡು ತಿಂಗಳಲ್ಲಿ ಥೈಲ್ಯಾಂಡ್ ಮತ್ತು ಮಲೇಶಿಯಾ ದೇಶಗಳಿಂದ ೪ ಸಿಕ್ ಉಗ್ರಗಾಮಿಗಳನ್ನು ಬಂಧಿಸಲಾಗಿದೆ. ಥೈಲ್ಯಾಂಡ್ ನಲ್ಲಿ ತಾರಾ ನ ಬಂಧನದ ನಂತರ ರಾಜ್ಯ ಬೇಹುಗಾರಿಕಾ ಪೊಲೀಸ್ ವಿಭಾಗ ಸುಮಾರು ೧೨ ಪಂಜಾಬಿ ಯುವಕರನ್ನು ಪ್ರಶ್ನಿಸಿದೆ. ಕೇಂದ್ರ ಬೇಹುಗಾರಿಕಾ ಸಂಸ್ಥೆಯಿಂದ ಬಂದ ಮಾಹಿತಿ ಪ್ರಕಾರ ತಾರಾ ಈ ಯುವಕರ ಜೊತೆ ಸಂಪರ್ಕದಲ್ಲಿದ್ದು ಅವರನ್ನು ಭಯೋತ್ಪಾದನೆ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಉದ್ಯೋಗ ನೀಡುವ ಭರವಸೆಯ ಮೇಲೆ ಥೈಲ್ಯಾಂಡ್ ಗೆ ಆಹ್ವಾನಿಸಿದ್ದ.

ತಾರಾ ನ ಬಳಿ ಈ ಯುವಕರ ಮಾಹಿತಿಯಿದ್ದರೂ, ಆ ಯುವಕರಿಗೆ ತಾರಾ ನ ಬಗ್ಗೆ ತಿಳಿದಿರಲಿಲ್ಲ ಎಂದಿದ್ದಾರೆ ಪೊಲೀಸರು. ತಾರಾ ಮತ್ತು ಇತರ ಉಗ್ರಗಾಮಿಗಳು ಪಂಜಾಬಿನಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಲು ಸಂಚು ಹೂಡಿದ್ದರು ಎಂದು ಕೂಡ ತಿಳಿದುಬಂದಿದೆ.

ಖಾಲಿಸ್ತಾನ್ ವಿಮೋಚನಾ ಸಂಘ ದ ಅಧ್ಯಕ್ಷ ಹರ್ಮಿಂದರ್ ಸಿಂಗ್ ಅಲಿಯಾ ಮಿಂಟೋ ಮತ್ತು ಅವನ ಸಹಚರ ಗುರ್ಪ್ರೀತ್ ಸಿಂಗ್ ಅಲಿಯಾಸ್ ಗೋಪಿ ಅವರನ್ನು ಕೂಡ ಥೈಲಾಂಡ್ ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಇವರ ವಿಚಾರಣಾ ವೇಳೆಯಲ್ಲಿ ಕೂಡ ಪಂಜಾಬಿನ ಯುವಕರನ್ನು ಸೆಳೆಯಲು ಯತ್ನಿಸುತ್ತಿದ್ದ ಐ ಎಸ್ ಐ ಯೋಜನೆಯ ಬಗ್ಗೆ ಬಹಿರಂಗಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯಾರೋ ಒಬ್ಬರಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ: ಖರ್ಗೆ ಹೇಳಿಕೆ ಬೆಂಬಲಿಸಿದ ಎಂ.ಬಿ.ಪಾಟೀಲ; ಡಿಕೆಶಿಗೆ ಪರೋಕ್ಷ ಟಾಂಗ್

U19 ಏಷ್ಯಾ ಕಪ್ ಫೈನಲ್‌: ಪಾಕ್ ವಿರುದ್ಧ ಸೋತರೂ ನಖ್ವಿ ಕೈಯಿಂದ ಪದಕ ಸ್ವೀಕರಿಸದ India ಯುವ ಪಡೆ, Video!

G RAM G ಮಸೂದೆ: ಬಿಜೆಪಿಯಿಂದ ಎರಡನೇ ಬಾರಿ 'ಮಹಾತ್ಮ ಗಾಂಧಿ ಹತ್ಯೆ'; ಚಿದಂಬರಂ ಕಿಡಿ

ನಾಯಕತ್ವ ಬದಲಾವಣೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಗರಂ; ನಾಯಕರಿಗೆ ಖಡಕ್ ಸಂದೇಶ

ಜಮ್ಮುವಿನ NIA ಕಚೇರಿ ಬಳಿ ಚೀನಾ ನಿರ್ಮಿತ ರೈಫಲ್ ಟೆಲೆಸ್ಕೋಪ್ ಪತ್ತೆ, ಭದ್ರತೆ ಹೆಚ್ಚಳ

SCROLL FOR NEXT