ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ತಮಿಳುನಾಡು ದಲಿತ ಎಂಜಿನಿಯರ್ ಕಗ್ಗೊಲೆ: ಆರು ಜನ ಬಂಧನ

ಪಲ್ಲಿಪಾಳ್ಯಮ್ ರೈಲ್ವೇ ಟ್ರ್ಯಾಕ್ ನಲ್ಲಿ ಜೂನ್ ೨೭ ರಂದು ಕಂಡುಬಂದ ದಲಿತ ಎಂಜಿನಿಯರ್ ಪ್ರಕರಣ ಬರೀ ಅಸಹಜ ಸಾವಲ್ಲ, ಕೊಲೆ ಎಂದಿದ್ದು ಗುರುವಾರ ೬ ಜನರನ್ನು

ನಾಮಕ್ಕಲ್: ಪಲ್ಲಿಪಾಳ್ಯಮ್ ರೈಲ್ವೇ ಟ್ರ್ಯಾಕ್ ನಲ್ಲಿ ಜೂನ್ ೨೭ ರಂದು ಕಂಡುಬಂದ ದಲಿತ ಎಂಜಿನಿಯರ್ ಪ್ರಕರಣ ಬರೀ ಅಸಹಜ ಸಾವಲ್ಲ, ಕೊಲೆ ಎಂದಿದ್ದು ಗುರುವಾರ ೬ ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧನಗೊಂಡವರಲ್ಲಿ ಒಬ್ಬ ಕಾಲೇಜು ವಿದ್ಯಾರ್ಥಿ ಕೂಡ ಎಂದು ಪೊಲೀಸ್ ತಿಳಿಸಿದ್ದು ಇನ್ನೂ ಮೂವರಿಗೆ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಗೋಕುಲ್ ರಾಜ್(೨೬) ಅವರ ಸಾವಿನಿಂದ ಆಕ್ರೋಶಗೊಂಡಿದ್ದ ಕುಟುಂಬ ವರ್ಗ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಜೂನ್ ೨೯ ರಿಂದ ಅನಿರ್ಧಿಷ್ಟ ಕಾಲಾವಧಿಯವರೆಗೆ ಉಪವಾಸ ಪ್ರತಿಭಟನೆ ಮಾಡುತ್ತಿದ್ದರು.

ಮೃತ ಯುವಕ ಅನ್ಯ ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದರಿಂದ ಈ ಕೊಲೆ ಮಾಡಲಾಗಿದೆ ಎಂಬ ಗುಮಾನಿ ಕೂಡ ದಟ್ಟವಾಗಿದೆ.

ಬಂಧನದ ಸುದ್ದಿ ತಿಳಿದ ನಂತರ ಉಪವಾಸವನ್ನು ಕೈಬಿಟ್ಟಿರುವ ಕುಟುಂಬ ವರ್ಗ ಕಳೇಬರವನ್ನು ಸ್ವೀಕರಿಸಿದೆ.

ಈ ಹಿಂದೆ ಪೊಲೀಸರು ಇದನ್ನು ಅಸಹಜ ಸಾವು ಎಂದಷ್ಟೇ ಬಗೆದಿದ್ದರು ಆದರೆ ಗೋಕುಲ್ ರಾಜ್ ಅವರ ಗೆಳೆಯನ ಮನವಿಯ ಮೇರೆಗೆ ಮದ್ರಾಸ್ ಹೈಕೋರ್ಟ್ ತಂಡ ರಚಿಸಿ ಶವ ಪರೀಕ್ಷೆ ನಡೆಸಿ ವರದಿ ಒಪ್ಪಿಸಲು ನಿರ್ದೇಶಿಸಿದ ಮೇಲೆ ಪೊಲೀಸರು ಇದನ್ನು ಅಪಹರಣ ಮತ್ತು ಕೊಲೆ ಪ್ರಕರಣ ಎಂದು ಬದಲಾಯಿಸಿದ್ದಾರೆ.

ಯುವಕನ ಪ್ರೇಮ ಪ್ರಕರಣ ಅವನ ಕೊಲೆಗೆ ಕಾರಣವಾಗಿದೆ ಎಂದು ಡಿ ಐ ಜಿ ವಿದ್ಯಾ ಕುಲಕರ್ಣಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT