ಯಾಸಿನ್ ಭಟ್ಕಳ್ 
ಪ್ರಧಾನ ಸುದ್ದಿ

ಭಟ್ಕಳ್ ನ ಜೈಲಿನಿಂದ ಹೊರಬರುವ ಯೋಜನೆ ಬೂಟಾಟಿಕೆ: ಪೊಲೀಸರು

ಮುಸ್ಲಿಂ ರಾಷ್ಟ್ರಗಳ ನೆರವಿನಿಂದ ಹೈದರಾಬಾದಿನ ಚೆರ್ಲಪಲ್ಲಿ ಜೈಲಿನಿಂದ ಭಯೋತ್ಪಾದಕ ಯಾಸಿನ್ ಭಟ್ಕಳ್ ತಪ್ಪಿಸಿಕೊಂಡು ಹೋಗಲು ಯೋಜನೆ ಹಾಕಿಕೊಂಡಿದ್ದಾನೆ...

ಹೈದರಾಬಾದ್:ಮುಸ್ಲಿಂ ರಾಷ್ಟ್ರಗಳ ನೆರವಿನಿಂದ  ಹೈದರಾಬಾದಿನ ಚೆರ್ಲಪಲ್ಲಿ ಜೈಲಿನಿಂದ ಭಯೋತ್ಪಾದಕ ಯಾಸಿನ್ ಭಟ್ಕಳ್ ತಪ್ಪಿಸಿಕೊಂಡು ಹೋಗಲು ಯೋಜನೆ ಹಾಕಿಕೊಂಡಿದ್ದಾನೆ ಎಂಬುದು ಜೈಲಿನ ಅಧಿಕಾರಿಗಳನ್ನು ಮತ್ತು ಪೊಲೀಸರನ್ನು ದಾರಿ ತಪ್ಪಿಸುವ ಸೂಚನೆಯಷ್ಟೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಯಾಸಿನ್ 27 ಬಾರಿ ತನ್ನ ಕುಟುಂಬದವರ ಜೊತೆ ಮಾತನಾಡಿದ್ದರೂ ಆ ವೇಳೆಯಲ್ಲಿ ಡಮಾಸ್ಕಸ್ ಅಥವಾ ಇಸ್ಲಾಮಿಕ್ ರಾಜ್ಯಗಳನ್ನು ಎಲ್ಲಿಯೂ ಹೆಸರಿಸಿಲ್ಲ. ಅವನು ತನ್ನ ಪತ್ನಿ ಬಳಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ''ಡಮಾಸ್ಕಸ್ ನಲ್ಲಿರುವ ಯಾವುದೋ ಸ್ನೇಹಿತರ ನೆರವಿನೊಂದಿಗೆ ಸದ್ಯದಲ್ಲಿಯೇ ಜೈಲಿನಿಂದ ಹೊರಬರುತ್ತೇನೆ'' ಎಂಬುದನ್ನು ಹೇಳಿದ್ದ. ಅದು ಭಯೋತ್ಪಾದಕರ ಕೋಡ್ ಶಬ್ದ ಆಗಿರಲಿಕ್ಕೂ ಸಾಕು.ಒಟ್ಟಿನಲ್ಲಿ ಇದು ತನಿಖೆಯ ದಾರಿ ತಪ್ಪಿಸುವ ಕ್ರಮ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಭಟ್ಕಳ್ ನ ಮಾತುಗಳ ವಿಡಿಯೋ ರೆಕಾರ್ಡನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹೆಚ್ಚಿನ ತನಿಖೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೈಲಿನಲ್ಲಿರುವ ದೂರವಾಣಿಯಿಂದ ಕೈದಿಗಳಿಗೆ ವಾರಕ್ಕೊಮ್ಮೆ 5 ನಿಮಿಷ ಮಾತನಾಡಲು ಅವಕಾಶ ಕಲ್ಪಿಸುತ್ತೇವೆ. ಭಟ್ಕಳ್ ಅರೇಬಿಕ್ ಮತ್ತು ಉರ್ದು ಭಾಷೆಗಳಲ್ಲಿ ತನ್ನ ಕುಟುಂಬದವರ ಜೊತೆ ಮಾತನಾಡುತ್ತಿದ್ದ. ಆತ 27 ಬಾರಿ ಮಾತನಾಡುವಾಗಲೂ ಡಮಾಸ್ಕಸ್ ಅಥವಾ ಇಸ್ಲಾಮಿಕ್ ರಾಜ್ಯಗಳ ಪ್ರಸ್ತಾಪ ಮಾಡಿರಲಿಲ್ಲ. ಬೇರಾವುದೇ ಉಗ್ರಗಾಮಿ ಸಂಘಟನೆಗಳು ಸಹ ಜೈಲಿನ ಭದ್ರತೆಯನ್ನು ಉಲ್ಲಂಘಿಸಿ ಭಟ್ಕಳ್ ನನ್ನು ಬಿಡುಗಡೆಗೊಳಿಸುವ ಯೋಜನೆ ರೂಪಿಸಿರುವುದು ಬೆಳಕಿಗೆ ಬಂದಿಲ್ಲ ಎಂದು ಜೈಲಿನ ಡಿಐಜಿ ಎ.ನರಸಿಂಹ ತಿಳಿಸಿದ್ದಾರೆ.

ಕಳೆದ ತಿಂಗಳು ಜಾಗೃತ ದಳ ಭಟ್ಕಳ್ ಪತ್ನಿಗೆ ಕರೆ ಮಾಡಿ ಡಮಾಸ್ಕಸ್ ಹೆಸರು ಹೇಳಿರುವುದನ್ನು ಪತ್ತೆಹಚ್ಚಿತ್ತು. ಪ್ರತಿ 14 ದಿನಗಳಿಗೊಮ್ಮೆ ಅವನನ್ನು ಕೋರ್ಟ್ ಗೆ ಕರೆದುಕೊಂಡು ಹೋಗಲಾಗುತ್ತದೆ. ಆತ ನ್ಯಾಯಾಲಯಕ್ಕೆ ಹೋಗುವಾಗ ಮತ್ತು ಹಿಂತಿರುಗುವಾಗ ಯಾರ ಜೊತೆ ಮಾತನಾಡುತ್ತಾನೆ, ಏನು ಮಾಡುತ್ತಾನೆ ಎಂಬುದು ನಮಗೆ ತಿಳಿಯುವುದಿಲ್ಲ ಎಂದು ನರಸಿಂಹ ಹೇಳಿದ್ದಾರೆ.

ದೂರವಾಣಿ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಳ್ಳುತ್ತಾರೆ ಎಂದು ತಿಳಿದಿರುವುದರಿಂದ ತನಿಖೆಗೆ ಅಡ್ಡಿಪಡಿಸಲು ಭಟ್ಕಳ್ ಹೀಗೆ ಮಾಡಿರಬಹುದು ಎಂದು ತೆಲಂಗಾಣ ಜೈಲಿನ ಮಹಾ ನಿರ್ದೇಶಕ ವಿ.ಕೆ.ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ ಪಿತೂರಿ:ರಾಷ್ಟ್ರೀಯ ತನಿಖಾ ಸಂಸ್ಥೆ 2013ರಲ್ಲಿ ಯಾಸಿನ್ ಭಟ್ಕಳ್ ನನ್ನು ಬಿಹಾರದಲ್ಲಿ ಬಂಧಿಸಲಾಗಿತ್ತು. ಹೈದರಾಬಾದಿನ ದಿಲ್ ಸುಕ್ ನಗರ್ ಅವಳಿ ಸ್ಪೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಸೆಪ್ಟೆಂಬರ್ ನಲ್ಲಿ ಹೈದರಾಬಾದಿಗೆ ಕರೆತರಲಾಗಿತ್ತು. ಈ ದಾಳಿಯಲ್ಲಿ 17 ಮಂದಿ ಸಾವನ್ನಪ್ಪಿ 100ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಾತಿ ಗಣತಿ: ಇಲ್ಲಿಯವರೆಗೆ ಕೇವಲ ಶೇ. 2 ರಷ್ಟು ಪ್ರಗತಿ; ಪ್ರತಿದಿನ ಶೇ. 10 ರಷ್ಟು ಸಮೀಕ್ಷೆಗೆ ಸಿಎಂ ಸೂಚನೆ, ಗಡುವಿನೊಳಗೆ ಪೂರ್ಣ

ಮೈಸೂರು: ಪಂಚಭೂತಗಳಲ್ಲಿ ಸಾಹಿತಿ ಎಸ್‌.ಎಲ್‌ ಭೈರಪ್ಪ ಲೀನ; ಸಕಲ ಸರ್ಕಾರಿ ಗೌರವಗಳೊಂದಿಗೆ 'ಅಕ್ಷರ ಮಾಂತ್ರಿಕ'ನ ಅಂತ್ಯಕ್ರಿಯೆ

Cricket: 'ಅವರ ''ಗರ್ವ'' ಮುರಿಯಿರಿ'..: Asia Cup Final ನಲ್ಲಿ ಭಾರತ ಮಣಿಸಲು ರಾವಲ್ಪಿಂಡಿ ಎಕ್ಸ್ ಪ್ರೆಸ್ Shoaib Akhtar ಮಾಸ್ಟರ್ ಪ್ಲಾನ್!

ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಗೆ ಕರೆ ಮಾಡಿಲ್ಲ: ವಿದೇಶಾಂಗ ಸಚಿವಾಲಯ ಸ್ಪಷ್ಟನೆ

'RJD ಯಾವತ್ತೂ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಿ': ಬಿಹಾರ ಮಹಿಳೆಯರಿಗೆ ಪ್ರಧಾನಿ ಮೋದಿ ಕರೆ

SCROLL FOR NEXT