ಮ್ಯಾಗಿ 
ಪ್ರಧಾನ ಸುದ್ದಿ

ನಂಜನಗೂಡಲ್ಲಿ ಫುಲ್ ಬಿಗಿ

ಸ್ಥಳೀಯ ನೆಸ್ಲೆ ಘಟಕ ಉತ್ಪಾದನೆ ಸ್ಥಗಿತಗೊಳಿಸಿದ್ದು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮುಂದೇನು ಎಂಬ ಬಗ್ಗೆ ಚಿಂತಾ ಕ್ರಾಂತರಾಗಿದ್ದಾರೆ.

ನಂಜನಗೂಡು: ಸ್ಥಳೀಯ ನೆಸ್ಲೆ ಘಟಕ ಉತ್ಪಾದನೆ ಸ್ಥಗಿತಗೊಳಿಸಿದ್ದು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮುಂದೇನು ಎಂಬ ಬಗ್ಗೆ ಚಿಂತಾ ಕ್ರಾಂತರಾಗಿದ್ದಾರೆ.

ಗುರುವಾರದಿಂದಲೇ ಇಲ್ಲಿನ ಘಟಕ ಉತ್ಪಾದನೆ ಸ್ಥಗಿತಗೊಳಿಸಿದ್ದು ಕಾರ್ಮಿಕರನ್ನು ರಜೆ ಮೇಲೆ ಕಳುಹಿಸಿದೆ. ಒಂದೆಡೆ ಬೇಡಿಕೆಯೂ ಇಲ್ಲ ಹಾಗೂ ನಿಷೇಧದ ತೂಗುಕತ್ತಿಯಿಂದ ಹೆದರಿರುವ ಕಂಪೆನಿಯು ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಇಲ್ಲಿ ಒಟ್ಟು 700 ಮಂದಿ ಕೆಲಸ ಮಾಡುತ್ತಿದ್ದು, ಇವರಲ್ಲಿ 300 ಕಾಯಂ ನೌಕರರಿದ್ದಾರೆ. ಉಳಿದ 400 ಮಂದಿ ಗುತ್ತಿಗೆ ಆಧಾರದ ನೌಕರರಾಗಿದ್ದು,  ಭವಿಷ್ಯದ ಬಗ್ಗೆ ಭಯಪೀಡಿತರಾಗಿದ್ದಾರೆ.

ವಿಚಿತ್ರವೆಂದರೆ ನಂಜನಗೂಡಿನಲ್ಲಿರುವ ನೆಸ್ಲೆ ಕಾರ್ಖಾನೆಯ ನೌಕರರು ತಮಿಳುನಾಡು ಮತ್ತು ಕೇರಳಕ್ಕೆ ಸೇರಿದವರಾಗಿದ್ದು, ಕನ್ನಡಿಗರೇ ಕಡಿಮೆ. ಹೀಗಾಗಿ ಕಾರ್ಖಾನೆಯೊಳಗೆ ಏನಾಗುತ್ತಿದೆ ಎಂದು ತಿಳಿಯಲು ಸ್ಥಳಿಯರಿಗೆ ಸಾಧ್ಯವೇ ಆಗಿಲ್ಲ. ಈ ಬಗ್ಗೆ ಪತ್ರಿಕೆ ಕಾರ್ಖಾನೆಯ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿತಾದರೂ,ಯಾರೂ ಬಾಯಿಬಿಡಲು ತಯಾರಿಲ್ಲ. ಅಲ್ಲದೆ ಕೆಲವರಂತೂ ನಮಗೆ ಕರೆ ಮಾಡಲೇಬೇಡಿ. ನಮ್ಮ ಫೋನ್ಗಳು ಟ್ಯಾಪ್ ಆಗುತ್ತಿರಬಹುದು ಎಂದು ಹೇಳಿದ್ದಾರೆ.

ಇದೇ ವೇಳೆ ಶನಿವಾರ ಬೆಳಗ್ಗೆ 9 ಗಂಟೆಗೆ ನೌಕರರ ತುರ್ತು ಸಭೆ ಕರೆಯಲಾಗಿದ್ದು, ಈ ಬಳಿಕ ಮುಂದಿನ ನಿರ್ಧಾರ ಹೊರಬೀಳಲಿದೆ. ಇದಷ್ಟೇ ಅಲ್ಲ, ಕಾರ್ಖಾನೆ ಬಳಿ ಹೊರಗಿನವರು ಸುಳಿಯಲೂ ಸಾಧ್ಯವಾಗದ ಪರಿಸ್ಥಿತಿ ಇದೆ. ನೌಕರರನ್ನು ಬಸ್‍ನಲ್ಲಿ ಕರೆತಂದು, ವಾಪಸ್ ಕರೆದುಕೊಂಡು ಹೋಗಿ ಬಿಡಲಾಗುತ್ತಿದೆ. ಹೀಗಾಗಿ ಸ್ಥಳಿಯರಿಗೂ ನೌಕರರಿಗೂ ಸಂಪರ್ಕ ಕಡಿಮೆ. ಈ ಹಿನ್ನೆಲೆಯಲ್ಲಿ ಈ ಕಾರ್ಖಾನೆಯಲ್ಲಿ ಯಾವ ರೀತಿಯ ಮ್ಯಾಗಿ ತಯಾರಾಗುತ್ತಿದೆ ಎಂದು ಅರಿಯುವುದು ಕಷ್ಟ. ಪ್ರತಿನಿತ್ಯ ಈ ಘಟಕದಲ್ಲಿ 75 ಟನ್ ಗೂ ಹೆಚ್ಚು ಮ್ಯಾಗಿ ನೂಡಲ್ಸ್ ಉತ್ಪಾದನೆಯಾಗುತಿತ್ತು.

ಉತ್ಪಾದನೆ ಸ್ಥಗಿತ: ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿರುವ ಮ್ಯಾಗಿ ತಯಾರಿಕಾ ಘಟಕ ಗುರುವಾರ ರಾತ್ರಿಯಿಂದ ಉತ್ಪಾದನೆ ಸ್ಥಗಿತಗೊಳಿಸಿದೆ. ಬಹುತೇಕ ರಾಜ್ಯ ಸರ್ಕಾರಗಳು ಮ್ಯಾಗಿ ಪರೀಕ್ಷೆ ನಡೆಸುತ್ತಿರುವುದು ಹಾಗೂ ಮ್ಯಾಗಿಯ 9 ಬಗೆಯ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಕೇಂದ್ರ ಸೂಚನೆ ನೀಡುತ್ತಿದ್ದಂತೆ ಉತ್ಪಾದನೆ ನಿಲ್ಲಿಸಲಾಗಿದೆ.

ಇನ್ನೊಂದು ಘಟಕಕ್ಕೆ ನಡೆದಿತ್ತು ಸಿದ್ಧತೆ: 2011ರಲ್ಲಿ ಈ ಉತ್ಪಾದನೆ ಘಟಕಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದರು. ರು. 300 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಬೃಹತ್ ಮ್ಯಾಗಿ ತಯಾರಿಕಾ ಘಟಕ ಇಂದಿನವರೆಗೂ ಲಾಭದಾಯಕವಾಗಿ ನಡೆದು ಬಂದಿರುವುದಲ್ಲದೇ ರು. 600 ಕೋಟಿ ವೆಚ್ಚದ ಮತ್ತೊಂದು ಘಟಕ ನಿರ್ಮಾಣಕ್ಕೆ ಸಿದ್ಧತೆ ನಡೆದಿತ್ತು. ಈ ನೂತನ ಘಟಕಕ್ಕೆ ಒಂದು ಸಾವಿರಕ್ಕೂ ಹೆಚ್ಚು ಕಾರ್ಮಿಕರ ಅವಶ್ಯಕತೆಯೂ ಇತ್ತು ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT