ಬಿಜೆಪಿ ಮುಖಂಡ ವಕೀಲ ಸುಬ್ರಮಣ್ಯ ಸ್ವಾಮಿ 
ಪ್ರಧಾನ ಸುದ್ದಿ

ಅಸಾರಂ ಜಾಮೀನು ಅರ್ಜಿ: ವಾದಕ್ಕೆ ಮೂರನೆ ಬಾರಿ ಗೈರುಹಾಜರಾದ ವಕೀಲ ಸ್ವಾಮಿ

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಬಂಧಿತರಾಗಿರುವ ಸ್ವಘೋಷಿತ ದೇವಮಾನವ ಅಸಾರಂ ಬಾಪು ಅವರಿಗೆ ಜಾಮೀನು ಕೋರಿ

ಜೋಧಪುರ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಬಂಧಿತರಾಗಿರುವ ಸ್ವಘೋಷಿತ ದೇವಮಾನವ ಅಸಾರಂ ಬಾಪು ಅವರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ವಕೀಲ ಸುಬ್ರಮಣ್ಯ ಸ್ವಾಮಿ ಮೂರನೆ ಬಾರಿಗೆ ಪ್ರಾದೇಶಿಕ ಕೋರ್ಟ್ ನಲ್ಲಿ ವಾದ ಮಾಡುವುದರಿಂದ ತಪ್ಪಿಸಿಕೊಂಡಿದ್ದಾರೆ.

ಈಗ ಕೋರ್ಟ್ ಜೂನ್ ೧೬ಕ್ಕೆ ಹೊಸ ದಿನಾಂಕ ನಿಗದಿಪಡಿಸಿದೆ. ಸದ್ಯಕ್ಕೆ ಅಸಾರಂ ಅವರನ್ನು ಒಂದೂವರೆ ವರ್ಷದಿಂದ ಜೋಧಪುರ ಜೈಲಿನಲ್ಲಿ ಇಡಲಾಗಿದೆ.

ಬಿಜೆಪಿ ಮುಖಂಡ ಸ್ವಾಮಿ ಅಸಾರಂ ಬಾಪು ಅವರಿಗೆ ಜಾಮೀನು ಕೋರಿ ಕೋರ್ಟ್ ನಲ್ಲಿ ಮೇ ೨೩ ರಂದು ಅರ್ಜಿ ಸಲ್ಲಿಸಿದ್ದರು ಹಾಗು ಕೋರ್ಟ್ ಮೇ ೨೬ ರಂದು ವಿಚಾರಣೆಗೆ ಕರೆದಿತ್ತು.

ಆದರೆ ಆ ದಿನ ಸ್ವಾಮಿ ಕೋರ್ಟಿಗೆ ಹಾಜರಾಗಲಿಲ್ಲ. ನಂತರ ಜೂನ್ ೨ಕ್ಕೆ ಕೋರ್ಟ್ ವಿಚಾರಣೆಯನ್ನು ಮುಂದೂಡಿತು ಎಂದು ಸಂಸ್ತ್ರಸ್ತ ಬಾಲಕಿಯ ವಕೀಲ ಪಿ ಸಿ ಸೋಲಂಕಿ ತಿಳಿಸಿದ್ದಾರೆ.

ಜೂನ್ ಎರಡರಂದು ಕೂಡ ಸ್ವಾಮಿ ಕೋರ್ಟಿಗೆ ಹಾಜರಾಗಲಿಲ್ಲ, ನಂತರ ಕೋರ್ಟ್ ನೆನ್ನೆಗೆ ಅಂದರೆ ಜೂನ್ ೯ಕ್ಕೆ ವಿಚಾರಣೆ ಮುಂದೂಡಿತ್ತು. ನೆನ್ನೆ ಕೂಡ ವಾದ ಮಾಡಲು ಸ್ವಾಮಿ ಬರಲಿಲ್ಲವಾದ್ದರಿಂದ ಜೂನ್ ೧೬ಕ್ಕೆ ಮುಂದೂಡಲಾಗಿದೆ.

ಸ್ವಾಮಿಯವರ ಗೈರುಹಾಜರಿಯ ಬಗ್ಗೆ ಅಸಾರಂ "ಅವರು ಒಳ್ಳೆಯ ಮನುಷ್ಯ. ಖಂಡಿತಾ  ಬರುತ್ತಾರೆ. ಅವರ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸಬಾರದು" ಎಂದಿದ್ದಾರೆ.

ಇದು ಅಸಾರಂ ಸಲಿಸುವ ೬ನೆ ಜಾಮೀನು ಅರ್ಜಿ. ಈ ಹಿಂದೆ ಟ್ರಯಲ್ ಕೋರ್ಟ್, ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟುಗಳಲ್ಲಿ ೫ ಜಾಮೀನು ಅರ್ಜಿಗಳು ತಿರಸ್ಕೃತಗೊಂಡಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT