ದೆಹಲಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ 
ಪ್ರಧಾನ ಸುದ್ದಿ

ಪದವಿ ಪ್ರಮಾಣಪತ್ರ ಪ್ರಾಮಾಣಿಕವಾದದ್ದು: ದೆಹಲಿ ಮಾಜಿ ಕಾನೂನು ಸಚಿವ

ಕಾನೂನು ಸಚಿವ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿರುವ ಜಿತೇಂದ್ರ ಸಿಂಗ್ ತೋಮರ್ ಅವರು ತಮ್ಮ ಪದವಿ ನಕಲಲ್ಲ ಎಂದು ಮತ್ತೆ ತಿಳಿಸಿದ್ದು, ತಮ್ಮ ಬಂಧನ

ನವದೆಹಲಿ: ಕಾನೂನು ಸಚಿವ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿರುವ ಜಿತೇಂದ್ರ ಸಿಂಗ್ ತೋಮರ್ ಅವರು ತಮ್ಮ ಪದವಿ ನಕಲಲ್ಲ ಎಂದು ಮತ್ತೆ ತಿಳಿಸಿದ್ದು, ತಮ್ಮ ಬಂಧನ ಕೇಂದ್ರ ಸರ್ಕಾರ ನಡೆಸಿರುವ ಪಿತೂರಿ ಎಂದಿದ್ದಾರೆ.

"ನನ್ನ ಪದವಿ ಸಾಚಾ. ಇದೆಲ್ಲ ಕೇಂದ್ರದ ಪಿತೂರಿ" ಎಂದು ತೋಮರ್ ಅವರನ್ನು ಫೈಜಾಬಾದ್ ಗೆ ಕೊಂಡೊಯ್ಯುವ ವೇಳೆಯಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.

ನೆನ್ನೆ ತೋಮರ್ ಅವರನ್ನು ಬಂಧಿಸಿ ನಾಲ್ಕು ದಿನಗಳ ಪೊಲೀಸ್ ಬಂಧನಕ್ಕೆ ವಶಪಡಿಸಲಾಗಿತ್ತು. ಇವರ ಬಂಧನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಭಾರಿ ಹಿನ್ನಡೆ ಎನ್ನಲಾಗಿದೆ.

ಕಳೆದ ತಿಂಗಳು ದೆಹಲಿಯ ವಕೀಲರ ಸಂಘ ತೋಮರ್ ಅವರ ಪದವಿ ಪ್ರಮಾಣ ಪತ್ರ ನಕಲು ಎಂದು ಆರೋಪಿಸಿ ಪೊಲೀಸ್ ತನಿಖೆಗೆ ಆಗ್ರಹಿಸಿತ್ತು.

ತೋಮರ್ ತಾವು ಪದವಿ ಪಡೆದಿದ್ದೇನೆ ಎಂದು ಹೇಳಿಕೊಂಡಿರುವ ಪೂರ್ವ ಬಿಹಾರದ ಟೀಕಾ ಮಾಂಝಿ ಭಾಗ್ಲಾಪುರ ವಿಶ್ವವಿದ್ಯಾಲಯ, ಪದವಿ ನಕಲು ಎಂದು ದೆಹಲಿ ಹೈಕೋರ್ಟ್ ಗೆ ತಿಳಿಸಿದ್ದ ಹಿನ್ನಲೆಯಲ್ಲಿ ಪೊಲೀಸರು ತನಿಖೆಗೆ ಆದೇಶಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT