ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ತಮಿಳು ಟಿವಿ ವಾಹಿನಿ ಕಚೇರಿಗೆ ಕಚ್ಚಾ ಬಾಂಬ್ ಎಸೆತ

ಚನ್ನೈನ ಪ್ರಖ್ಯಾತ ಟಿವಿ ವಾಹಿನಿಯೊಂದರ ಕಚೇರಿಗೆ ಪತ್ತೆ ಹಚ್ಚದ ವ್ಯಕ್ತಿಗಳು ಕಚ್ಚಾ ಬಾಂಬ್ ಗಳನ್ನು ಎಸೆದ ಘಟನೆ ನಡೆದಿದೆ

ಚೆನ್ನೈ: ಚನ್ನೈನ ಪ್ರಖ್ಯಾತ ಟಿವಿ ವಾಹಿನಿಯೊಂದರ ಕಚೇರಿಗೆ ಪತ್ತೆ ಹಚ್ಚದ ವ್ಯಕ್ತಿಗಳು ಕಚ್ಚಾ ಬಾಂಬ್ ಗಳನ್ನು ಎಸೆದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ.

ಇದು ಮುಂಜಾನೆ ನಡೆದ ಘಟನೆಯಲ್ಲಿ ಬೈಕುಗಳಲ್ಲಿ ಬಂದ ನಾಲ್ಕು ಜನ ಯುವಕರು ಊಟದ ಡಬ್ಬಿಯಲ್ಲಿ ಕಚ್ಚಾ ಬಾಂಬುಗಳನ್ನಿಟ್ಟು ಕಚೇರಿಯೊಳಗೆ ಎಸೆದಿದ್ದಾರೆ.

ಪೊಲೀಸರು ಸುಳುಹುಗಳ ಬೆನ್ನುಹತ್ತಿದ್ದು, ಇನ್ನು ಯಾರನ್ನು ಬಂಧಿಸಲಾಗಿಲ್ಲ.

ಈ ಘಟನೆಯಿಂದ ಯಾರಿಗೂ ಹಾನಿಯಾಗಿಲ್ಲ ಹಾಗೆಯೇ ಆಸ್ತಿ-ಪಾಸ್ತಿಗೂ ಹೆಚ್ಚಿನ ತೊಂದರೆಯಾಗಿಲ್ಲ ಎಂದು ಪುಥಿಯ ಥಲೈಮುರೈ ಟಿವಿ ವಾಹಿನಿಯ ಪತ್ರಕರ್ತರು ತಿಳಿಸಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದು ಮುನ್ನಾನಿ ಎಂಬ ಹಿಂದು ಸಂಘಟನೆ ಈ ವಾಹಿನಿ ನಡೆಸುತ್ತಿದ್ದ ವಿವಾದಾತ್ಮಕ ಕಾರ್ಯಕರ 'ತಾಳಿ'ಯನ್ನು ಭಾನುವಾರ ವಿರೋಧಿಸಿ ಪತ್ರಕರ್ತ ಛಾಯಾಗ್ರಾಹಕನೊಬ್ಬನ  ಮೇಲೆ ಹಲ್ಲೆ ಮಾಡಿದ್ದರಿಂದ ವಾಹಿನಿ ಈ ಕಾರ್ಯಕ್ರಮವನ್ನು ಹಿಂದಕ್ಕೆ ತೆಗೆದುಕೊಂಡಿತ್ತು. ಈ ಹಿನ್ನಲೆಯಲ್ಲೇ ಈ ಘಟನೆ ನಡೆದಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT