ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ತಮಿಳು ಟಿವಿ ವಾಹಿನಿ ಕಚೇರಿಗೆ ಕಚ್ಚಾ ಬಾಂಬ್ ಎಸೆತ

ಚನ್ನೈನ ಪ್ರಖ್ಯಾತ ಟಿವಿ ವಾಹಿನಿಯೊಂದರ ಕಚೇರಿಗೆ ಪತ್ತೆ ಹಚ್ಚದ ವ್ಯಕ್ತಿಗಳು ಕಚ್ಚಾ ಬಾಂಬ್ ಗಳನ್ನು ಎಸೆದ ಘಟನೆ ನಡೆದಿದೆ

ಚೆನ್ನೈ: ಚನ್ನೈನ ಪ್ರಖ್ಯಾತ ಟಿವಿ ವಾಹಿನಿಯೊಂದರ ಕಚೇರಿಗೆ ಪತ್ತೆ ಹಚ್ಚದ ವ್ಯಕ್ತಿಗಳು ಕಚ್ಚಾ ಬಾಂಬ್ ಗಳನ್ನು ಎಸೆದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ.

ಇದು ಮುಂಜಾನೆ ನಡೆದ ಘಟನೆಯಲ್ಲಿ ಬೈಕುಗಳಲ್ಲಿ ಬಂದ ನಾಲ್ಕು ಜನ ಯುವಕರು ಊಟದ ಡಬ್ಬಿಯಲ್ಲಿ ಕಚ್ಚಾ ಬಾಂಬುಗಳನ್ನಿಟ್ಟು ಕಚೇರಿಯೊಳಗೆ ಎಸೆದಿದ್ದಾರೆ.

ಪೊಲೀಸರು ಸುಳುಹುಗಳ ಬೆನ್ನುಹತ್ತಿದ್ದು, ಇನ್ನು ಯಾರನ್ನು ಬಂಧಿಸಲಾಗಿಲ್ಲ.

ಈ ಘಟನೆಯಿಂದ ಯಾರಿಗೂ ಹಾನಿಯಾಗಿಲ್ಲ ಹಾಗೆಯೇ ಆಸ್ತಿ-ಪಾಸ್ತಿಗೂ ಹೆಚ್ಚಿನ ತೊಂದರೆಯಾಗಿಲ್ಲ ಎಂದು ಪುಥಿಯ ಥಲೈಮುರೈ ಟಿವಿ ವಾಹಿನಿಯ ಪತ್ರಕರ್ತರು ತಿಳಿಸಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದು ಮುನ್ನಾನಿ ಎಂಬ ಹಿಂದು ಸಂಘಟನೆ ಈ ವಾಹಿನಿ ನಡೆಸುತ್ತಿದ್ದ ವಿವಾದಾತ್ಮಕ ಕಾರ್ಯಕರ 'ತಾಳಿ'ಯನ್ನು ಭಾನುವಾರ ವಿರೋಧಿಸಿ ಪತ್ರಕರ್ತ ಛಾಯಾಗ್ರಾಹಕನೊಬ್ಬನ  ಮೇಲೆ ಹಲ್ಲೆ ಮಾಡಿದ್ದರಿಂದ ವಾಹಿನಿ ಈ ಕಾರ್ಯಕ್ರಮವನ್ನು ಹಿಂದಕ್ಕೆ ತೆಗೆದುಕೊಂಡಿತ್ತು. ಈ ಹಿನ್ನಲೆಯಲ್ಲೇ ಈ ಘಟನೆ ನಡೆದಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT