ವಜ್ರಕಾಯ ಚಿತ್ರದ ದೃಶ್ಯ 
ಪ್ರಧಾನ ಸುದ್ದಿ

ವೈ ದಿಸ್ ಕೊಲವೆರಿ

ಹರ್ಷ ನಿರ್ದೇಶನದ `ವಜ್ರಕಾಯ' ಚಿತ್ರದ ಹಾಡಿನಲ್ಲಿ ಪರಭಾಷೆಯ ನಟರು ಅಭಿನಯಿಸುವ ಮೂಲಕ ಸದ್ದು ಮಾಡಿತು. ಹಾಡಿನಲ್ಲಿ ಕಾಣಿಸಿಕೊಂಡ ಅಥಿತಿ ನಟರ ಪಟ್ಟಿಯಲ್ಲಿ ತೆಲುಗಿನ ರವಿತೇಜ ಕೂಡ ಸೇರಿಕೊಂಡಿದ್ದಾರೆ ಎಂಬುದು ನಿಮ್ಮ ಗಮನಕ್ಕಿರಲಿ...

ಹರ್ಷ ನಿರ್ದೇಶನದ `ವಜ್ರಕಾಯ' ಚಿತ್ರದ ಹಾಡಿನಲ್ಲಿ ಪರಭಾಷೆಯ ನಟರು ಅಭಿನಯಿಸುವ ಮೂಲಕ ಸದ್ದು ಮಾಡಿತು. ಹಾಡಿನಲ್ಲಿ ಕಾಣಿಸಿಕೊಂಡ ಅಥಿತಿ ನಟರ ಪಟ್ಟಿಯಲ್ಲಿ ತೆಲುಗಿನ ರವಿತೇಜ ಕೂಡ ಸೇರಿಕೊಂಡಿದ್ದಾರೆ ಎಂಬುದು ನಿಮ್ಮ ಗಮನಕ್ಕಿರಲಿ.

ಈಗ ಇದೇ ಚಿತ್ರದ ಮತ್ತೊಂದು ಸುದ್ದಿ ಇದು. ನಟ ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರದ ಒಂದು ಹಾಡಿಗೆ ತಮಿಳು ನಟ ಧನುಶ್ ಕಂಠ ನೀಡಿದ್ದಾರೆ. ಹೌದು, ತಮ್ಮದೇ ಚಿತ್ರದ `ವೈ ದಿಸ್ ಕೊಲವೆರಿ' ಹಾಡಿನ ಮೂಲಕ ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟು ಹಾಕಿದ ನಟ ಧನುಷ್, ಮೊದಲ ಬಾರಿಗೆ ಕನ್ನಡದಲ್ಲಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರಕ್ಕಾಗಿಯೇ  ಧನುಷ್ ಹಾಡಿರುವ ಹಾಡನ್ನು ಯೂಟ್ಯೂಬ್‍ನಲ್ಲಿ ಬಿಟ್ಟಿದ್ದಾರೆ.

ಅಪ್‍ಲೋಡ್ ಮಾಡಿದ ಕೂಡಲೇ ತುಂಬಾ ಹಿಟ್ಸ್ ಬಂದಿವೆ. `ಭಜರಂಗಿ' ಚಿತ್ರದ ಬಳಿಕ ಹರ್ಷ ನಿರ್ದೇಶಿಸಿರುವ ಸಿನಿಮಾ ಇದಾಗಿದೆ. ಯುವ ಪ್ರತಿಭೆ ಮೋಹನ್, ನಟ ಧನುಶ್ ಹಾಡಿರುವ ಹಾಡಿಗೆ ಸಾಹಿತ್ಯಬರೆದಿದ್ದಾರೆ. `ಯಾಕಮ್ಮ ನಗ್ತೀಯ, ಹಿಂಗ್ಯಾಕೆ ಕೊಲ್ತಿಯಾ... ನಿನ್ ನಗು ನೋಡ್ಬಿಟ್ಟು ನನ್ಗೆ ಬಲ್ಪು ಆಫ್  ಆಗೋಯ್ತು...' ಎಂದು ಶುರುವಾಗುವ ಹಾಡಿನ ಸಾಹಿತ್ಯ ಧನುಷ್ ಕಂಠದಲ್ಲಿ ಹೇಗೆ ಮೂಡಿಬಂದಿರಬಹುದು ಎನ್ನುವ ಕುತೂಹಲವಂತೂ ಇದ್ದೇ ಇರುತ್ತದೆ. ಹೀಗಾಗಿ ಅರ್ಜುನ್ ಜನ್ಯ ಸಂಗೀತವಿದ್ದ ಈ ಹಾಡು ಸಿಕ್ಕಾಪಟ್ಟೆ `ಹಿಟ್' ಎನಿಸಿಕೊಂಡಿದೆ.

ಮುಂದಿನ ದಿನಗಳಲ್ಲಿ ಮತ್ತಷ್ಟು `ಹಿಟ್' ಆಗುವ ಮುನ್ಸೂಚನೆಯೂ ಇದೆ. ಯಾವುದಕ್ಕೂ ನೀವೂ ಒಮ್ಮೆ ಹಾಡನ್ನೂ ನೀವು ಕೇಳಬಹುದು. `ವಜ್ರಕಾಯ' ಚಿತ್ರವನ್ನು ಸಿ.ಆರ್. ಮನೋಹರ್ ನಿರ್ಮಾಣ ಮಾಡುತ್ತಿದ್ದಾರೆ. ಅಂದಹಾಗೆ ಧನುಶ್ ಕನ್ನಡದಲ್ಲಿ ಹಾಡನ್ನು ಹಾಡಿದ್ದಕ್ಕೆ ನಿರ್ಮಾಪಕ ಮನೋರ್ ಕೊಟ್ಟಿದ್ದು ನಾಲ್ಕು ಲಕ್ಷ ಬೆಲೆಬಾಳುವ ಕೈ ಗಡಿಯಾರ ಗಿಫ್ಟ್ ಮಾಡಲಾಗಿದೆ ಎಂದು ಚೆನ್ನೈನಲ್ಲಿ ಧನುಶ್ ಸ್ಟುಡಿಯೋ ಮೂಲಗಳು ಹೇಳುತ್ತವೆ. ಧನುಶ್ ತಮ್ಮ ಚಿತ್ರದ ಹಾಡಿಗೆ ಧ್ವನಿ ನೀಡಿದ್ದಕ್ಕೆ ನಟ ಶಿವರಾಜ್ ಕುಮಾರ್ ಕೂಡ ಖುಷಿಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉಗ್ರರಿಗೆ ನೆರವು: ನಿಷೇಧಿತ ಜಮಾತ್-ಇ-ಇಸ್ಲಾಂಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಮ್ಮು-ಕಾಶ್ಮೀರ ಪೊಲೀಸರು ದಾಳಿ, ತೀವ್ರ ಶೋಧ

ಮೀರತ್​ ಕೊಲೆ ಪ್ರಕರಣ: ಹೆಣ್ಣು ಮಗುವಿಗೆ ರಾಧಾ ಎಂದು ಹೆಸರಿಟ್ಟ ಮುಸ್ಕಾನ್, DNA ಪರೀಕ್ಷೆಗೆ ಸೌರಭ್ ಕುಟುಂಬಸ್ಥರ ಆಗ್ರಹ

ರಾಜ್ಯದಲ್ಲಿ ಶಾಸನವಿಲ್ಲದ 'ದುಶ್ಯಾಸನ' ಆಡಳಿತ: 'ಪಾಂಚಜನ್ಯ' ಮೊಳಗಿಸಲು ಮೋದಿ ಬರ್ತಿದ್ದಾರೆ; ಸುನಿಲ್ ಕುಮಾರ್

ಬಿಜೆಪಿಗೆ ಡಿ.ಕೆ ಶಿವಕುಮಾರ್ ಅವಶ್ಯಕತೆಯಿಲ್ಲ: ಅವರನ್ನು ಕಟ್ಟಿಕೊಂಡು ನಾವು ಏನು ಮಾಡೋಣ? ವಿ. ಸೋಮಣ್ಣ

ಐಶ್ವರ್ಯಾ ರೈ ಗಂಡನಿಂದ ದೂರಾದರೆ ಮತಾಂತರ ಮಾಡಿ ಮದುವೆ ಆಗುತ್ತೇನೆ: ಪಾಕಿಸ್ತಾನದ ಧಾರ್ಮಿಕ ಗುರು ಹೇಳಿಕೆ ವೈರಲ್

SCROLL FOR NEXT