ವಿಮಾನ ಅಪಘಾತ ನಡೆದ ಸ್ಥಳ (ಒಳಚಿತ್ರ-ವಿಮಾನವನ್ನು ಪರ್ವತಕ್ಕೆ ಗುದ್ದಿದ ಆರೋಪ ಹೊತ್ತಿರುವ ಕೋ-ಪೈಲಟ್) 
ಪ್ರಧಾನ ಸುದ್ದಿ

ಉದ್ದೇಶಪೂರ್ವಕ ಕೃತ್ಯಕ್ಕೆ ಬಲಿಯಾದ್ರು 150 ಮಂದಿ

ವಿಮಾನ ದುರಂತಕ್ಕೆ ಕಾರಣ ಗೊತ್ತಾಗಿದ್ದು, ಇದು ತಾಂತ್ರಿಕ ಕಾರಣದಿಂದ ಸಂಭವಿಸಿದ ದುರಂತವಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ಮಾಡಿದ್ದು...

ಪ್ಯಾರಿಸ್: ಎರಡು ದಿನಗಳ ಹಿಂದೆ ದಕ್ಷಿಣ ಫ್ರಾನ್ಸ್ ನ ಆಲ್ಪ್ಸ್ ಪರ್ವತ ಶ್ರೇಣಿಗಳಲ್ಲಿ ಜರುಗಿದ ವಿಮಾನ ದುರಂತಕ್ಕೆ ಕಾರಣ ಗೊತ್ತಾಗಿದ್ದು, ಇದು ತಾಂತ್ರಿಕ ಕಾರಣದಿಂದ ಸಂಭವಿಸಿದ ದುರಂತವಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ಮಾಡಿದ್ದು ಎಂಬುದನ್ನು ಬ್ಲಾಕ್ ಬಾಕ್ಸ್ ಬಹಿರಂಗಮಾಡಿದೆ.

ಸಹ- ಪೈಲಟ್ ಮತ್ತು ಮುಖ್ಯ ಪೈಲಟ್‍ಗಳ ನಡುವಿನ ಜಗಳದಲ್ಲಿ ಯಾವ ತಪ್ಪನ್ನೂ ಮಾಡದ 150 ಮಂದಿ ಸತ್ತಿದ್ದಾರೆ. ಆರಂಭದಲ್ಲಿ ಸಣ್ಣದಿದ್ದ ಜಗಳ, ಬಳಿಕ ದೊಡ್ಡದಾಗಿದೆ. ಮುಖ್ಯಪೈಲಟ್ ಅನ್ನು ಕಾಕ್‍ಪಿಟ್‍ನಿಂದ ಹೊರಹಾಕಿದ ಸಹ ಪೈಲಟ್ ವಿಮಾನವನ್ನು ಪರ್ವತಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಅದೂ 700 ಕಿ.ಮೀ. ವೇಗದಲ್ಲಿ. ಇದರ ಜತೆಗೆ ಬ್ಲಾಕ್ಸ್‍ಬಾಕ್ಸ್‍ನಲ್ಲಿ ಕೊನೆಯ ಹತ್ತು ನಿಮಿಷಗಳ ಕಾಲ ನಡೆದ ಅವರಿಬ್ಬರ ನಡುವಿನ ವಾಕ್ಸಮರದ ಧ್ವನಿಮುದ್ರಣವೂ ಸಿಕ್ಕಿರುವುದು ಸಹಪೈಲಟ್‍ನ ಹೊಣೆಗೇಡಿತನಕ್ಕೆ ಇಂಬು ಕೊಟ್ಟಿದೆ. ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ಬ್ರಿಸ್ ರಾಬಿನ್ ಗುರುವಾರ ಈ ಆಘಾತಕಾರಿ ಮಾಹಿತಿ ನೀಡಿದ್ದಾರೆ. ಆತನಿಗೆ ವಿಮಾನವನ್ನು ನಾಶ ಮಾಡುವುದೇ ಉದ್ದೇಶವಾಗಿತ್ತು ಎಂದು ರಾಬಿನ್ ತಿಳಿಸಿದ್ದಾರೆ.

ಕಾಕ್ ಪೀಟ್ ನಲ್ಲಿ ಕಾಳಗ
ಕ್ಯಾಪ್ಟನ್‍ನನ್ನು ಕಾಕ್‍ಪಿಟ್‍ನಿಂದ ಹೊರ ಹಾಕುವುದಕ್ಕಿಂತ ಮೊದಲು ಅವರಿಬ್ಬರ ನಡುವೆ ಮುಷ್ಟಿ ಕಾಳಗ ನಡೆದಿತ್ತು. ಒಂದು ಹಂತದಲ್ಲಿ ಸಹ ಪೈಲಟ್ ಆ್ಯಂಡ್ರೆಸ್ ಲುಬಿಟ್ಸ್ ಕ್ಯಾಪ್ಟನ್‍ನತ್ತ ಕುರ್ಚಿಯನ್ನು ಎಸೆದಿದ್ದ ಎಂಬ ಅಂಶ ಬಯಲಾಗಿದೆ.

ಕೊನೆಯ ಹಂತದಲ್ಲಿ
ಇಷ್ಟೆಲ್ಲ ಆಗಿದ್ದರೂ ಪ್ರಯಾಣಿಕರಿಗೆ ವಿಮಾನದಲ್ಲಿ ಆಗಬಾರದ್ದು ಏನೋ ನಡೆಯುತ್ತಿದೆ ಎಂಬ ವಿಚಾರ ಗೊತ್ತಾಗಿದ್ದು ಕೊನೆಯ ಹಂತದಲ್ಲಿ. ಸಹ ಪೈಲಟ್‍ನ ಕೈಗೆ ವಿಮಾನದ ನಿಯಂತ್ರಣ ಬರುತ್ತಿದ್ದಂತೆ ಅದು ಹೊಯ್ದಾಡಲು ಆರಂಭವಾಯಿತು. 38 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನ ಏಕಾಏಕಿ 5 ಸಾವಿರ ಅಡಿಗಳಿಗೆ ತಗ್ಗಿ, ಆಲ್ಪ್ಸ್ ಪರ್ವತ ಶ್ರೇಣಿಗಳಿಗೆ ಅಪ್ಪಳಿಸಿತು. ಇದೇ ವೇಳೆಯಲ್ಲೇ ಏರ್ ಟ್ರಾಫಿಕ್ ನಿಯಂತ್ರಣ ಕೊಠಡಿಗೆ ಸಹಾಯ ಕರೆಯೂ ಬಂದಿತ್ತು.

ಇದು ಉಗ್ರ ಕೃತ್ಯ ಅಲ್ಲ
ಕ್ಯಾಪ್ಟನ್ ಮೇಲಿನ ಸಿಟ್ಟಿನಿಂದ ಸಹ ಪೈಲಟ್ ಈ ಕೃತ್ಯ ಎಸಗಿದ್ದಾನೆ. ಆತನಿಗೆ ವಿಧ್ವಂಸ ಕೃತ್ಯ ಮತ್ತು ಉಗ್ರಗಾಮಿ ಕೃತ್ಯದಲ್ಲಿ ನಂಬಿಕೆ ಇರಲಿಲ್ಲ ಎಂದು ರಾಬಿನ್ ತಿಳಿಸಿದ್ದಾರೆ. ಇದಕ್ಕಾಗಿಯೇ ಸಹ ಪೈಲಟ್ ವಿಮಾನವನ್ನು ಅತಿ ವೇಗದಿಂದ ಚಲಿಸುವಂತೆ ಮಾಡಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್‌ ಅಭಿಷೇಕ್​ ಸೇರಿ ಇಬ್ಬರು ಸಾವು; Video

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal flood: ಮೃತರ ಸಂಖ್ಯೆ 270ಕ್ಕೆ ಏರಿಕೆ, ಸುಮಾರು 288 ಭಾರತೀಯರು ನಾಪತ್ತೆ! 800ಕ್ಕೂ ಹೆಚ್ಚು ಜನರ ರಕ್ಷಣೆ