ವಿಕಾಸ್ ಸ್ವರೂಪ್-ಸಯ್ಯದ್ ಅಕ್ಬರುದ್ದೀನ್ 
ಪ್ರಧಾನ ಸುದ್ದಿ

ವಿದೇಶಾಂಗ ಸಚಿವಾಲಯದ ನೂತನ ವಕ್ತಾರನಾಗಿ 'ಸ್ಲಂ ಡಾಗ್ ಮಿಲಿಯನೇರ್' ಲೇಖಕ

ಹಿರಿಯ ಅಧಿಕಾರಿ ವಿಕಾಸ್ ಸ್ವರೂಪ್ ಅವರ ಚೊಚ್ಚಲ ಕಾದಂಬರಿ 'ಕ್ಯು&ಎ', 'ಸ್ಲಂ ಡಾಗ್ ಮಿಲಿಯನೇರ್' ಸಿನೆಮಾವಾಗಿ ರೂಪಾಂತರ ಪಡೆದು ಆಸ್ಕರ್ ಗೆದ್ದಿದ್ದು

ನವದೆಹಲಿ: ಹಿರಿಯ ಅಧಿಕಾರಿ ವಿಕಾಸ್ ಸ್ವರೂಪ್ ಅವರ ಚೊಚ್ಚಲ ಕಾದಂಬರಿ 'ಕ್ಯು&ಎ', 'ಸ್ಲಂ ಡಾಗ್ ಮಿಲಿಯನೇರ್' ಸಿನೆಮಾವಾಗಿ ರೂಪಾಂತರ ಪಡೆದು ಆಸ್ಕರ್ ಗೆದ್ದಿದ್ದು ತಿಳಿದಿರಬೇಕಷ್ಟೇ. ಈಗ ವಿಕಾಸ್ ಸ್ವರೂಪ್ ವಿದೇಶಾಂಗ ಸಚಿವಾಲಯದ ವಕ್ತಾರರಾಗಿ ಸಯ್ಯದ್ ಅಕ್ಬರುದ್ದೀನ್ ಅವರನ್ನು ಬದಲಿಸಿದ್ದಾರೆ.

ಸಯ್ಯದ್ ಅಕ್ಬರುದ್ದೀನ್ ಅವರಿಗೆ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ಮುಂಬಡ್ತಿ ನೀಡಿರುವುದರಿಂದ ೧೯೮೬ ಐ ಎಫ್ ಎಸ್ ಅಧಿಕಾರಿ ಸ್ವರೂಪ್, ಸಯ್ಯದ್ ಅವರನ್ನು ಬದಲಿಸಿದ್ದಾರೆ. ಸಯ್ಯದ್ ಅಕ್ಬರುದ್ದೀನ್ ಅಕ್ಟೋಬರ್ ನಲ್ಲಿ ನಡೆಯಲಿರುವ ಭಾರತ-ಆಫ್ರಿಕಾ ಶೃಂಗಸಭೆಯ ಮುಖ್ಯ ಒಡಂಬಡಿಗರಾಗಿ ಕೂಡ ಹೆಚ್ಚುವರಿ ಅಧಿಕಾರ ಕೂಡ ನೀಡಲಾಗಿದೆ.

ಸದ್ಯಕ್ಕೆ ವಿದೇಶಾಂಗ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿರುವ (ವಿಶ್ವಸಂಸ್ಥೆ-ರಾಜಕೀಯ) ಸ್ವರೂಪ್ ಏಪ್ರಿಲ್ ೧೮ರಿಂದ ಈ ಹೊಸ ಅಧಿಕಾರವನ್ನು ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷತೆ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾದ ಅಕ್ಬರುದ್ದೀನ್ ಈ ಹುದ್ದೆಯಲ್ಲಿ ಮೂರು ವರ್ಷಗಳಿಂದ ನಿರತರಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT