ಕೆ.ಟಿ ಗುರುಮೂರ್ತಿ 
ಪ್ರಧಾನ ಸುದ್ದಿ

ಸೃಷ್ಠಿಕರ್ತ ಗುರುಮೂರ್ತಿ ಸಂಸ್ಥೆಗೆ ಬೀಗ ಜಡಿದ ಸರ್ಕಾರ

ಬೆಂಗಳೂರು: ಸಂತಾನಹೀನತೆಯಿಂದ ಬಳಲುತ್ತಿರುವವರಿಗೆ ಸಂತಾನ ಭಾಗ್ಯ ಕಲ್ಪಿಸುವುದಾಗಿ ನಂಬಿಸಿ ಲಕ್ಷಾಂತರ ರುಪಾಯಿ ಪಡೆದು ವಂಚಿಸುತ್ತಿದ್ದ ಸೃಷ್ಠಿ ಗ್ಲೋಬಲ್ ಟ್ರಸ್ಟ್ ಮುಖ್ಯಸ್ಥ ಕೆ.ಟಿ ಗುರುಮೂರ್ತಿ ವಿರುದ್ಧ ಕೊನೆಗೂ ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿದೆ.

ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಜನಿ ಆದೇಶದಂತೆ ಶುಕ್ರವಾರ ಸೃಷ್ಠಿ ಗ್ಲೋಬಲ್ ಸಂಸ್ಥೆಗೆ ಅಧಿಕೃತವಾಗಿ ಬೀಗ ಹಾಕಿದ್ದಾರೆ.

ವಂಚನೆಗೊಳಗಾದ
20ಕ್ಕೂ ಹೆಚ್ಚು ಮಂದಿ ಗುರುಮೂರ್ತಿ ವಿರುದ್ಧ ದೂರು ದಾಖಲಿಸಿದ್ದರು.
ಬಸವೇಶ್ವರ ನಗರದಲ್ಲಿರುವ ಸೃಷ್ಠಿ ಗ್ಲೋಬಲ್ ಮೆಡಿಕೇರ್ ಸಂಸ್ಥೆ ಬಂಜೆತನ ನಿವಾರಣೆ ಮಾಡುವುದಾಗಿ ಹೇಳಿ, ಸಾವಿರಾರು ಜನರಿಗೆ ವಂಚಿಸಿತ್ತು.

ಕೆ.ಟಿ.ಗುರುಮೂರ್ತಿಯ ಸೃಷ್ಠಿ ಗ್ಲೋಬಲ್ ಸಂಸ್ಥೆಯ ವಿರುದ್ಧದ ಆರೋಪದ ಬಗ್ಗೆ ಡಾ.ವೀರಭದ್ರಯ್ಯ ನೇತೃತ್ವದ ಸಮಿತಿ ತನಿಖೆ ನಡೆಸಿದಾಗ, ಸೃಷ್ಠಿಕರ್ತನ ವಂಚನೆ ಬಯಲಾಗಿತ್ತು.

ಪ್ರಕರಣ ಸಂಬಂಧ ಸಂಸ್ಥೆಯ ಸಂಸ್ಥಾಪಕ ಕೆ.ಟಿ.ಗುರುಮೂರ್ತಿ ಸೇರಿದಂತೆ ಹಲವರ ವಿರುದ್ದ ಸಿಟಿ ಕ್ರೈಂಬ್ರ್ಯಾಂಚ್ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಸದ್ಯಗುರುಮೂರ್ತಿ ನ್ಯಾಯಾಂಗ ಬಂಧನಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT