ಯೋಗೇಂದ್ರ ಯಾದವ್ 
ಪ್ರಧಾನ ಸುದ್ದಿ

ಆಪ್ ಪಕ್ಷದ ಮುಖ್ಯ ವಕ್ತಾರನ ಸ್ಥಾನ ಕಳೆದುಕೊಳ್ಳಲಿರುವ ಯೋಗೇಂದ್ರ ಯಾದವ್?

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಶಿಸ್ತು ಸಮಿತಿಯಿಂದ ಪ್ರಶಾಂತ್ ಭೂಷಣ್ ಅವರನ್ನು ಉಚ್ಛಾಟಿಸಿದ ಮೇಲೆ ಈಗ ಯೋಗೇಂದ್ರ ಯಾದವ್ ಅವರು

ನವದೆಹಲಿ: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಶಿಸ್ತು ಸಮಿತಿಯಿಂದ ಪ್ರಶಾಂತ್ ಭೂಷಣ್ ಅವರನ್ನು ಉಚ್ಛಾಟಿಸಿದ ಮೇಲೆ ಈಗ ಯೋಗೇಂದ್ರ ಯಾದವ್ ಅವರು ಪಕ್ಷದ ಮುಖ್ಯ ವಕ್ತಾರನ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಯಾದವ್ ಅವರ ಹೆಸರಿರದ,  ಪಕ್ಷದ ವಕ್ತಾರರ ಹೊಸ ಪಟ್ಟಿಯನ್ನು ಆಪ್ ಬಿಡುಗಡೆ ಮಾಡಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. "ನಾವು ನೂತನ ವಕ್ತಾರರ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದೇವೆ. ಅದರಲ್ಲಿ ಯೋಗೇಂದ್ರ ಯಾದವ್ ಹೆಸರು ಇರುವುದಿಲ್ಲ" ಎಂದು ಹೆಸರು ಹೇಳಲಿಚ್ಛಿಸದ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಯಾದವ್ ಮತ್ತು ಪ್ರಶಾಂತ್ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಿಂದ ಕಿತ್ತೊಗೆದ ಮೇಲೆ ಹಾಗೂ ರಾಷ್ಟ್ರೀಯ ಶಿಸ್ತು ಸಮಿತಿಯಿಂದ ಪ್ರಶಾಂತ್ ಭೂಷಣ್ ಅವರನ್ನು ಉಚ್ಛಾಟಿಸಿದ ಮೇಲೆ ಈ ನಡೆಯನ್ನು ನಿರೀಕ್ಷಿಸಲಾಗಿತ್ತು.

ವಿಶೇಷವೆಂದರೆ ಪಕ್ಷದ ವಕ್ತಾರರ ಸಮಿತಿಯಲ್ಲಿ ಸದ್ಯಕ್ಕೆ ಯಾದವ್ ಒಬ್ಬರೇ ಮುಖ್ಯ ವಕ್ತಾರ ಎಂದು ನೇಮಕವಾಗಿರುವುದು. ಭಾನುವಾರ ಭೂಷಣ್ ಅವರನ್ನು ರಾಷ್ಟ್ರೀಯ ಶಿಸ್ತು ಸಮಿತಿಯಿಂದ ಉಚ್ಛಾಟಿಸಿ, ಕೇಜ್ರಿವಾಲ್ ಗೆ ಸಮೀಪದ ಮೂವರು ನಾಯಕರನ್ನು ಸಮಿತಿಗೆ ನೇಮಿಸಲಾಗಿದೆ.

ಆಪ್ ಪಕ್ಷದ ಆಂತರಿಕ ಲೋಕಪಾಲ್ ಅಡ್ಮಿರಲ್ (ಮಾಜಿ) ಎಲ್ ರಾಮದಾಸ್ ಅವರನ್ನು ಕೂಡ ಪಕ್ಷದ ವಿರುದ್ಧ ಮಾತನಾಡಿದ್ದಕ್ಕೆ ಹೊರಕಳುಹಿಸಲಾಗಿದೆ. ಈಗ ಲೋಕಪಾಲ್ ಸಮಿತಿಯನ್ನು ಇಬ್ಬರು ಮಾಜಿ ಐಪಿಎಸ್ ಅಧಿಕಾರಿಗಳು ಮತ್ತು ಒಬ್ಬ ಶೈಕ್ಷಣಿಕ ತಜ್ಞನಿಂದ ಬದಲಾಯಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT