ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ದೆಹಲಿಯಲ್ಲಿ ಉಗಾಂಡ ಮಹಿಳೆಯ ರೇಪ್ ಪ್ರಕರಣ: ಇಬ್ಬರಿಗೆ ೩೦ ವರ್ಷ ಸಜೆ

ಉಗಾಂಡ ಮಹೆಳೆಯೊಬ್ಬಳನ್ನು ಅಪಹರಿಸಿ ಗ್ಯಾಂಗ್ ರೇಪ್ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥರಾದ ಇಬ್ಬರಿಗೆ ೩೦ ವರ್ಷ ಜೈಲು ಸಜೆ ನೀಡಿ ದೆಹಲಿ ಕೋರ್ಟ್

ನವದೆಹಲಿ: ಉಗಾಂಡ ಮಹಿಳೆಯೊಬ್ಬಳನ್ನು ಅಪಹರಿಸಿ ಗ್ಯಾಂಗ್ ರೇಪ್ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥರಾದ ಇಬ್ಬರಿಗೆ ೩೦ ವರ್ಷ ಜೈಲು ಸಜೆ ನೀಡಿ ದೆಹಲಿ ಕೋರ್ಟ್ ತೀರ್ಪು ಪ್ರಕಟಿಸಿದೆ. "ಅವರ ಈ ಕೆಲಸ ವಿಶ್ವದ ಮುಂದೆ ಭಾರತವನ್ನು ಅವಹೇಳನ ಮಾಡಿದೆ" ಎಂದಿರುವ ನ್ಯಾಯಧೀಶರು ಇಬ್ಬರೂ ಕಠಿಣ ಸಜೆಗೆ ಅರ್ಹರು ಎಂದಿದ್ದಾರೆ.

ದೆಹಲಿ ನಿವಾಸಿಗಳಾದ ರಾಜ್ ಕುಮಾರ್ ಮತ್ತು ದಿನೇಶ್ ಶರ್ಮ ಅವರಿಗೆ ೫೦ ಸಾವಿರ ದಂಡವನ್ನೂ ವಿಧಿಸಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿರೇಂದರ್ ಭಟ್ "ಒಬ್ಬಳೇ ವಿದೇಶಿ ಯುವತಿ, ತಡರಾತ್ರಿಯಲ್ಲಿ ನಡೆದು ಹೋಗುತ್ತಿರುವಾಗ ತೋಳಗಳ ತರಹ ಈ ತಪ್ಪಿತಸ್ಥರು ಹುಡುಗಿಯನ್ನು ಅಪಹರಿಸಿದ್ದಾರೆ" ಎಂದಿದ್ದಾರೆ.

"ವಿದೇಶಿ ಮಹಿಳೆಯನ್ನು ತಮ್ಮ ಗುರಿಯಾಗಿಸಿಕೊಂಡಿರುವ ಇವರಿಗೆ ದೇಶದ ಘನತೆ ಮಾತು ಗೌರವದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ತೋರಿಸಿದ್ದಾರೆ. ಅವರ ಈ ಕೆಲಸ ವಿಶ್ವದ ಮುಂದೆ ಭಾರತವನ್ನು ಅವಹೇಳನ ಮಾಡಿದೆ. ಇಂತಹ ಘಟನೆಗಳು ದೇಶಕ್ಕೆ ಕೆಟ್ಟ ಹೆಸರು ತರುತ್ತದೆ" ಎಂದು ನ್ಯಾಯಾಧೀಶ ಹೇಳಿದ್ದಾರೆ.

ಈ ಕೃತ್ಯವನ್ನು ಎಷ್ಟು ಹೀನಾಯವಾಗಿ ಎಸಗಿದ್ದಾರೆ ಎಂದರೆ "ಮಹಿಳೆಯ ಘನತೆ ಮತ್ತು ಗೌರವದ ಮೇಲೂ ಕಿಂಚಿತ್ತು ಚಿಂತೆಯಿಲ್ಲ ಅವರಿಗೆ ಎಂಬುದನ್ನು ತೋರಿಸುತ್ತದೆ" ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

GBA ಆಯ್ತು.. ಈಗ ಗ್ರೇಟರ್ ಮೈಸೂರು ಸಿಟಿ ಕಾರ್ಪೋರೇಷನ್ ಗೆ ಸಂಪುಟ ಅನುಮೋದನೆ!

'ಮಾತು' ಜಗತ್ತಿಗೆ ಉತ್ತಮವಾಗದ ಹೊರತು ಅದು ಶಕ್ತಿಯಲ್ಲ; ಡಿಕೆಶಿ ಪೋಸ್ಟ್​​ಗೆ CM ಸಿದ್ದರಾಮಯ್ಯ ಕೌಂಟರ್

ಮಹಿಳೆಗೆ ಕಚ್ಚಿದ ನಾಯಿ, ಪ್ರಶ್ನೆ ಮಾಡಿದ ಸಂತ್ರಸ್ಥೆಗೆ ಮಾಲಕಿ ಕಪಾಳಮೋಕ್ಷ, Video Viral

ಸಂಸತ್ತಿನಲ್ಲಿ 'ವಂದೇ ಮಾತರಂ', 'ಜೈ ಹಿಂದ್' ಘೋಷಣೆಗಳಿಗೆ ಆಕ್ಷೇಪಣೆ ಯಾಕೆ?: ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್

ಯುದ್ಧ ಸಾರಿದ ನ್ಯೂಜಿಲೆಂಡ್, 25 ಲಕ್ಷ Stone Cold Killers ನಿರ್ಮೂಲನೆ ಮಾಡುವ ಶಪಥ!

SCROLL FOR NEXT