ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ದೆಹಲಿಯಲ್ಲಿ ಉಗಾಂಡ ಮಹಿಳೆಯ ರೇಪ್ ಪ್ರಕರಣ: ಇಬ್ಬರಿಗೆ ೩೦ ವರ್ಷ ಸಜೆ

ಉಗಾಂಡ ಮಹೆಳೆಯೊಬ್ಬಳನ್ನು ಅಪಹರಿಸಿ ಗ್ಯಾಂಗ್ ರೇಪ್ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥರಾದ ಇಬ್ಬರಿಗೆ ೩೦ ವರ್ಷ ಜೈಲು ಸಜೆ ನೀಡಿ ದೆಹಲಿ ಕೋರ್ಟ್

ನವದೆಹಲಿ: ಉಗಾಂಡ ಮಹಿಳೆಯೊಬ್ಬಳನ್ನು ಅಪಹರಿಸಿ ಗ್ಯಾಂಗ್ ರೇಪ್ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥರಾದ ಇಬ್ಬರಿಗೆ ೩೦ ವರ್ಷ ಜೈಲು ಸಜೆ ನೀಡಿ ದೆಹಲಿ ಕೋರ್ಟ್ ತೀರ್ಪು ಪ್ರಕಟಿಸಿದೆ. "ಅವರ ಈ ಕೆಲಸ ವಿಶ್ವದ ಮುಂದೆ ಭಾರತವನ್ನು ಅವಹೇಳನ ಮಾಡಿದೆ" ಎಂದಿರುವ ನ್ಯಾಯಧೀಶರು ಇಬ್ಬರೂ ಕಠಿಣ ಸಜೆಗೆ ಅರ್ಹರು ಎಂದಿದ್ದಾರೆ.

ದೆಹಲಿ ನಿವಾಸಿಗಳಾದ ರಾಜ್ ಕುಮಾರ್ ಮತ್ತು ದಿನೇಶ್ ಶರ್ಮ ಅವರಿಗೆ ೫೦ ಸಾವಿರ ದಂಡವನ್ನೂ ವಿಧಿಸಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿರೇಂದರ್ ಭಟ್ "ಒಬ್ಬಳೇ ವಿದೇಶಿ ಯುವತಿ, ತಡರಾತ್ರಿಯಲ್ಲಿ ನಡೆದು ಹೋಗುತ್ತಿರುವಾಗ ತೋಳಗಳ ತರಹ ಈ ತಪ್ಪಿತಸ್ಥರು ಹುಡುಗಿಯನ್ನು ಅಪಹರಿಸಿದ್ದಾರೆ" ಎಂದಿದ್ದಾರೆ.

"ವಿದೇಶಿ ಮಹಿಳೆಯನ್ನು ತಮ್ಮ ಗುರಿಯಾಗಿಸಿಕೊಂಡಿರುವ ಇವರಿಗೆ ದೇಶದ ಘನತೆ ಮಾತು ಗೌರವದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ತೋರಿಸಿದ್ದಾರೆ. ಅವರ ಈ ಕೆಲಸ ವಿಶ್ವದ ಮುಂದೆ ಭಾರತವನ್ನು ಅವಹೇಳನ ಮಾಡಿದೆ. ಇಂತಹ ಘಟನೆಗಳು ದೇಶಕ್ಕೆ ಕೆಟ್ಟ ಹೆಸರು ತರುತ್ತದೆ" ಎಂದು ನ್ಯಾಯಾಧೀಶ ಹೇಳಿದ್ದಾರೆ.

ಈ ಕೃತ್ಯವನ್ನು ಎಷ್ಟು ಹೀನಾಯವಾಗಿ ಎಸಗಿದ್ದಾರೆ ಎಂದರೆ "ಮಹಿಳೆಯ ಘನತೆ ಮತ್ತು ಗೌರವದ ಮೇಲೂ ಕಿಂಚಿತ್ತು ಚಿಂತೆಯಿಲ್ಲ ಅವರಿಗೆ ಎಂಬುದನ್ನು ತೋರಿಸುತ್ತದೆ" ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ