ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಪಕ್ಷೇತರ ಶಾಸಕನಿಗೆ ಥಳಿಸಿದ ಬಿಜೆಪಿ ಶಾಸಕರು 
ಪ್ರಧಾನ ಸುದ್ದಿ

ಶಾಸಕರ ಗೂಂಡಾಗಿರಿ; ಬೀಫ್ ಪಾರ್ಟಿ ಮಾಡಿದ್ದಕ್ಕೆ ಪಕ್ಷೇತರ ಶಾಸಕನನ್ನು ಥಳಿಸಿದ ಬಿಜೆಪಿ ಶಾಸಕರು

ಬೀಫ್ ಔತಣಕೂಟವನ್ನು ಆಯೋಜಿಸಿದ್ದಕ್ಕೆ ಜಮ್ಮು ಕಾಶ್ಮೀರದ ಪಕ್ಷೇತರ ಶಾಸಕ, ಎಂಜಿನಿಯರ್ ರಶೀದ್ ಅವರಿಗೆ ವಿಧಾನಸಭೆಯಲ್ಲೇ ಬಿಜೆಪಿ ಶಾಸಕರು ಥಳಿಸಿದ ಘಟನೆ ನಡೆದಿದೆ.

ಬೀಫ್ ಔತಣಕೂಟವನ್ನು ಆಯೋಜಿಸಿದ್ದಕ್ಕೆ ಜಮ್ಮು ಕಾಶ್ಮೀರದ ಪಕ್ಷೇತರ ಶಾಸಕ, ಎಂಜಿನಿಯರ್ ರಶೀದ್ ಅವರಿಗೆ ವಿಧಾನಸಭೆಯಲ್ಲೇ ಬಿಜೆಪಿ ಶಾಸಕರು ಥಳಿಸಿದ ಘಟನೆ ನಡೆದಿದೆ.

ಮೊದಲಿಗೆ ಬಿಜೆಪಿ ಶಾಸಕ ರವಿಂದರ್ ಸಿಂಗ್ ಅವರು ರಶೀದ್ ಅವರನ್ನು ಥಳಿಸಲು ಪ್ರಾರಂಭಿಸಿದ್ದಾರೆ ನಂತರ ಇತರ ಶಾಸಕರು ಅವರನ್ನು ಕೂಡಿಕೊಂಡಿದ್ದಾರೆ. ಆನಂಅತರ ಭದ್ರತಾ ಪಡೆ ರಶೀದ್ ಅವರನ್ನು ಹೊರಕ್ಕೆ ಕರೆದುಕೊಂಡು ಹೋಗಿದೆ.

ಶಾಸಕರ ಹಾಸ್ಟೆಲ್ ನಲ್ಲಿ ಬೀಫ್ ಔತಣಕೂಡ ಆಯೋಜಿಸಿದ್ದ ರಶೀದ್ ನಾಗರಿಕ ಸಮುದಾಯವನ್ನು ಅಲ್ಲಿಗೆ ಆಹ್ವಾನಿಸಿದ್ದರು. ಅಲ್ಲಿ ಕೂಡ ದಾಂಧಲೆ ನಡೆಸಿದ್ದ ಬಿಜೆಪಿ ಶಾಸಕರು ಹಾಸ್ಟೆಲ್ ಅನ್ನು ಧ್ವಂಸಗೊಳಿಸಿದ್ದಲ್ಲದೆ, ಅವರನ್ನು ತಡೆಯಲು ಬಂದ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡುವಂತೆ ನೋಡಿಕೊಂಡಿದ್ದಾರೆ ಎಂದು ಕೂಡ ರಶೀದ್ ದೂರಿದ್ದರು.

"ನನ್ನ ಗುರಿ ಏನೆಂದರೆ ಸರ್ಕಾರಕ್ಕೆ ಸಂದೇಶ ಕಳುಹಿಸುವುದು... ನೀವು ಗೋಹತ್ಯೆ ನಿಷೇಧ ಜಾರಿ ಮಾಡಿ ಬಿಡಿ, ಅದರ ಬಗ್ಗೆ ಚರ್ಚಿಸಿ ಅಥವಾ ಚರ್ಚಿಸದಿರಿ.. ನಾವು ನಿಷೇಧದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದು ನಮಗೆ ಸಲ್ಲುವುದಿಲ್ಲ" ಎಂದು ದೆಹಲಿ ಮೂಲದ ದಿನಪತ್ರಿಕೆಯೊಂದಕ್ಕೆ ರಶೀದ್ ಹೇಳಿದ್ದಾರೆ.

ಈ ನಡೆಯನ್ನು ವಿರೋಧಪಕ್ಷಗಳು ಖಂಡಿಸಿವೆ. "ವಿಧಾನಸಭೆಯಲ್ಲಿ ಥಳಿಸುವುದು ತರವಲ್ಲ. ರಶೀದ್ ಆಕ್ಷೇಪಾರ್ಹ ಕೆಲಸವನ್ನು ಮಾಡಿದ್ದರೆ ಅದನ್ನು ಚರ್ಚಿಸಬೇಕೆ" ಎಂದು ನ್ಯಾಷನಲ್ ಕಾನ್ಫರೆನ್ಸ್ ನ ಅಧ್ಯಕ್ಷ ಒಮರ ಅಬ್ದುಲ್ಲ ಹೇಳಿದ್ದಾರೆ.

 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT