ವೈ ಎಸ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ ಎಸ್ ಜಗನ್ಮೋಹನ್ ರೆಡ್ಡಿ 
ಪ್ರಧಾನ ಸುದ್ದಿ

ಆಂಧ್ರ ಪ್ರದೇಶ ರಾಜಧಾನಿಯ ಸಂಸ್ಥಾಪನಾ ಕಾರ್ಯಕ್ರಮಕ್ಕೆ ಬರುವುದಿಲ್ಲ: ಜಗನ್

ಆಂಧ್ರಪ್ರದೇಶದ ರಾಜಧಾನಿ ನಗರ 'ಅಮರಾವತಿ' ನಿರ್ಮಾಣದಲ್ಲಿ ಟಿಡಿಪಿ ಸರ್ಕಾರ 'ರಿಯಲ್ ಎಸ್ಟೇಟ್ ವ್ಯವಹಾರ' ನಡೆಸುತ್ತಿದೆ ಎಂದು ದೂರಿರುವ ವೈ ಎಸ ಆರ್ ಕಾಂಗ್ರೆಸ್

ಹೈದರಾಬಾದ್: ಆಂಧ್ರಪ್ರದೇಶದ ರಾಜಧಾನಿ ನಗರ 'ಅಮರಾವತಿ' ನಿರ್ಮಾಣದಲ್ಲಿ ಟಿಡಿಪಿ ಸರ್ಕಾರ 'ರಿಯಲ್ ಎಸ್ಟೇಟ್ ವ್ಯವಹಾರ' ನಡೆಸುತ್ತಿದೆ ಎಂದು ದೂರಿರುವ ವೈ ಎಸ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ ಎಸ್ ಜಗನ್ಮೋಹನ್ ರೆಡ್ಡಿ ಅಕ್ಟೋಬರ್ ೨೨ ರಂದು ನಡೆಯಲಿರುವ ರಾಜಧಾನಿಯ ಸಂಸ್ಥಾಪನಾ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.

"ನಿಮ್ಮ ಲಂಚಕ್ಕಾಗಿ ನೀವು ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದೀರಿ ಮತ್ತು ಜನರ ಹಿತಾಸಕ್ತಿಗೆ ಧಕ್ಕೆ ತರುತ್ತಿದ್ದೀರಿ. ನಿಮ್ಮ ಇಚ್ಛೆಯಂತೆ ಸಿಂಗಪುರದ ಖಾಸಗಿ ಸಂಸ್ಥೆಗಳಿಗೆ ಜಮೀನು ನೀಡುತ್ತಿದ್ದೀರಿ. ನಿಮ್ಮ ಹಗರಣದ ಹಾಗೂ ನಿಮ್ಮ ನಿಲುವಿನ ವಿರುದ್ಧ ಪ್ರತಿಭಟನೆಯಾಗಿ ನಾನು ಅಲ್ಲಿಗೆ (ಸಂಸ್ಥಾಪನಾ ಕಾರ್ಯಕ್ರಮ) ಬರುವುದಿಲ್ಲ" ಎಂದು ಎನ್ ಚಂದ್ರಬಾಬು ನಾಯ್ಡು ಅವರಿಗೆ ಬರೆದಿರುವ ಮುಕ್ತ ಪತ್ರದಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್ ೨೨ ರಂದು ವಿಜಯದಶಮಿಯ ದಿನ ಆಂಧ್ರಪ್ರದೇಶದ ಅಮರಾವತಿ ನಗರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಹಲವಾರು ಗಣ್ಯ ವ್ಯಕ್ತಿಗಳಿಗೆ ಅಲ್ಲದೆ, ಸಾಮಾನ್ಯ ಜನಕ್ಕೆ, ರೈತರಿಗೆ ಆಹ್ವಾನ ನೀಡುವ ಮೂಲಕ ಎಲ್ಲರನ್ನೂ ಒಳಗೊಳ್ಳಲು ಪ್ರಯತ್ನಿಸಿದ್ದೇವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಸರ್ಕಾರ ಈ ಒಂದು ದಿನದ ಕಾರ್ಯಕ್ರಮಕ್ಕೆ ೪೦೦ ಕೋಟಿ ರೂಗಳನ್ನು ಅನಗತ್ಯ ವೆಚ್ಚ ಮಾಡುತ್ತಿದೆ ಎಂದು ಕೂಡ ಜಗನ್ ದೂರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT