ಮನೋಹರ್ ಪರಿಕ್ಕರ್ 
ಪ್ರಧಾನ ಸುದ್ದಿ

ಒಆರ್ ಒಪಿ ವಾರ್ಷಿಕ ಪರಿಷ್ಕರಣೆ ಕಷ್ಟ: ಮನೋಹರ್ ಪರಿಕ್ಕರ್

ನಿವೃತ್ತ ಸೈನಿಕರಿಗೆ ಒಆರ್ ಒಪಿ ವಾರ್ಷಿಕ ಪರಿಷ್ಕರಣೆ ಮಾಡುವುದು ಕಷ್ಟ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ಪಣಜಿ: ನಿವೃತ್ತ ಸೈನಿಕರಿಗೆ ಒಆರ್ ಒಪಿ ವಾರ್ಷಿಕ ಪರಿಷ್ಕರಣೆ ಮಾಡುವುದು ಕಷ್ಟ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಪಣಜಿಯಲ್ಲಿ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಪರಿಕ್ಕರ್, ಒಆರ್ ಒಪಿ ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸದೇ ಇರುವುದನ್ನು ಟೀಕಿಸಿದ್ದ ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಭರವಸೆಗಳನ್ನು ಈಡೆರಿಸಲು ತತ್ವಗಳಿಗಿಂತ ಹಣ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.
ನಿವೃತ್ತ ಸೈನಿಕರ ಪ್ರಮುಖ 6 ಬೇಡಿಕೆಗಳ ಪೈಕಿ ಒಆರ್ ಒಪಿಯನ್ನು ವಾರ್ಷಿಕವಾಗಿ ಪರಿಷ್ಕರಿಸುವುದೂ ಒಂದು ಬೇಡಿಕೆಯಾಗಿತ್ತು.  ಕೇಂದ್ರ ಸರ್ಕಾರ ಒಆರ್ ಒಪಿಯನ್ನು ಪ್ರತಿ ಐದು ವರ್ಷಕ್ಕೊಮ್ಮೆ ಒಆರ್ ಒಪಿಯನ್ನು ಪರಿಷ್ಕರಿಸಲು ಬದ್ಧರಾಗಿದ್ದೇವೆ, ಆದರೆ ವಾರ್ಷಿಕವಾಗಿ ಪರಿಷ್ಕರಿಸುವುದು ಕಷ್ಟ ಎಂದು ಹೇಳಿದ್ದಾರೆ.
ಒಆರ್ ಒಪಿಯನ್ನು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸದೇ ಇರುವುದನ್ನು ಟೀಕಿಸಿದ್ದ ರಾಹುಲ್ ಗಾಂಧಿ ಹಾಗೂ  ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಬಗ್ಗೆ ಮಾತನಾಡಿರುವ ಪರಿಕ್ಕರ್ ಈ ಹಿಂದಿನ ಯುಪಿಎ ಸರ್ಕಾರ ಒಆರ್ ಒಪಿ ಜಾರಿಗೆ ಕೇವಲ 500 ಕೋಟಿ ರೂಪಾಯಿ ಮೀಸಲಿಟ್ಟಿತ್ತು, ಭರವಸೆ ಈಡೇರಿಕೆ ವಿಷಯದಲ್ಲಿ ತತ್ವಗಳಿಗಿಂತ ಹಣ ಮುಖ್ಯವಾಗುತ್ತದೆ ಇದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.    
ಹಲವು ದಶಕಗಳಿಂದ ಈಡೇರದೇ ಇದ್ದ ಒಆರ್ ಒಪಿಯನ್ನು ಜಾರಿಗೊಳಿಸಿದ್ದಕ್ಕೆ ಗೋವಾ ಬಿಜೆಪಿ ಘಟಕದಿಂದ ಮನೋಹರ್ ಪರಿಕ್ಕರ್ ಅವರನ್ನು ಸನ್ಮಾನ ಮಾಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT