ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಪಂಜಾಬ್ ನಲ್ಲಿ ಎಲ್ ಇ ಟಿ, ಪಾಕಿಸ್ತಾನ ಐ ಎಸ್ ಐ ಫಿದಾಯಿನ್ ದಾಳಿ ನಡೆಸಲಿವೆ: ಗುಪ್ತಚರ

ಪಂಜಾಬ್ ಮತ್ತು ದೆಹಲಿಯಲ್ಲಿ ಫಿದಾಯಿನ್ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಕೆಂದ್ರ ಬೇಹುಗಾರಿಕಾ ಸಂಸ್ಥೆ ಎಚ್ಚರಿಕೆ ನೀಡಿದೆ. ಗುಪ್ತಚರ ಸಂಸ್ಥೆಗಳು ನೀಡಿರುವ ಮಾಹಿತಿಯ

ನವದೆಹಲಿ: ಪಂಜಾಬ್ ಮತ್ತು ದೆಹಲಿಯಲ್ಲಿ ಫಿದಾಯಿನ್ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಕೆಂದ್ರ ಬೇಹುಗಾರಿಕಾ ಸಂಸ್ಥೆ ಎಚ್ಚರಿಕೆ ನೀಡಿದೆ. ಗುಪ್ತಚರ ಸಂಸ್ಥೆಗಳು ನೀಡಿರುವ ಮಾಹಿತಿಯ ಪ್ರಕಾರ ಗುರುದಾಸಪುರ ಶೈಲಿಯ ದಾಳಿಯನ್ನು ನಡೆಸಲು ಎಲ್ ಇ ಟಿ ಸಜ್ಜಾಗಿದೆ ಎಂದು ಎಚ್ಚರಿಸಲಾಗಿದೆ. ಮೂಲಗಳ ಪ್ರಕಾರ "ಇದು ನಿಯತವಾಗಿ ನೀಡುವ ಎಚ್ಚರಿಕೆಯಲ್ಲ. ಎಲ್ ಇ ಟಿ ಇಂದ ತರಬೇತಿ ಪಡೆದಿರುವ ೧೫-೧೦ ಉಗ್ರರು ಭಾರತಕ್ಕೆ ನುಸುಳಲು ಸಜ್ಜಾಗಿದ್ದಾರೆ" ಎಂದು ತಿಳಿಸಿವೆ.

"ಅವರುಗಳನ್ನು ಪಾಕಿಸ್ತಾನಿ ಆಕ್ರಮಿತ ಕಾಶ್ಮೀರದಲ್ಲಿ ಸಜ್ಜು ಮಾಡಲಾಗಿದೆ. ಈ ಉಗ್ರರು ನುಸುಳಿದ ಮೇಲೆ ಜಮ್ಮು ಕಾಶ್ಮೀರದಲ್ಲಿ ಭೂಗತಾವಾಗಿರುವ ಉಗ್ರ ಸಂಸ್ಥೆಗಳು ನೆರವಿನಿಂದ ಟ್ರಕ್ ಗಳಲ್ಲಿ ಬಚ್ಚಿಡಲಾಗಿರುವ ಶಸ್ತ್ರಾಸ್ತ್ರಗಳನ್ನು ನೀಡಲಾಗುತ್ತದೆ" ಎಂದು ಕೂಡ ಗುಪ್ತಚರ ಸಂಸ್ಥೆಗಳು ತಿಳಿಸಿವೆ.  

ಬೇಹುಗಾರಿಕಾ ಸಂಸ್ಥೆಯ ಅಧಿಕಾರಿಗಳ ಪ್ರಕಾರ ಪಾಕಿಸ್ತಾನ ಐ ಎಸ್ ಐ ಇತ್ತೀಚೆಗಷ್ಟೆ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳಾದ ಎಲ್ ಇ ಟಿ, ಜೈಶ್ ಎ ಮೊಹಮ್ಮದ್, ಬಬ್ಬರ್ ಖಾಸ್ಲಾ ಮತ್ತು ಖಾಲಿಸ್ತಾನ್ ಜಿಂದಾಬಾದ್ ಫೋರ್ಸ್ ಗಳ ಜೊತೆ ಸಭೆ ನಡೆಸಿತ್ತು ಎಂದು ತಿಳಿಸಿದ್ದಾರೆ.

ಖಾಲಿಸ್ತಾನ್ ಜಿಂದಾಬಾದ್ ಫೋರ್ಸ್ ನ ಅಧ್ಯಕ್ಷ ರಂಜಿತ್ ಸಿಂಗ್ ಅಲಿಯಾಸ್ ನೀತಾ ಪಾಕಿಸ್ತಾನದ ಐ ಎಸ್ ಐ ಜೊತೆ ನಿಕಟವಾಗಿ ಕೆಲಸ ಮಾಡುತ್ತಿದ್ದು ಪಂಜಾಬ್ ಮೇಲೆ ದಾಳಿ ನಡೆಸಲು ಯೋಜನೆ ಸಿದ್ಧಪಡಿಸಿದ್ದಾನೆ. ಗುಪ್ತಚರ ಮೂಲದ ಪ್ರಕಾರ, ಗುರುದ್ವಾರ ಕರ್ತಾಪುರ್ ಸಾಹಿಬ್ ಬಳಿ ಎಲ್ ಇ ಟಿ ಫಿಯಾದೀನ್ ಗಳಿಗೆ ನೀತಾ ಎರಡು ತಿಂಗಳ ಕಾಲ ಭಾರತೀಯ ಭಾಷೆಯ ಬಗೆಗೆ ತರಬೇತಿ ನೀಡಿದ್ದಾನೆ ಎಂದು ತಿಳಿಯಲಾಗಿದೆ.

"ನೀತಾ ಉಗ್ರರಿಗೆ ಸಿಖ್ ಸಂಪ್ರದಾಯ ಮತ್ತು ಗುರುಮುಖಿ ಲಿಪಿಯ ತರಬೇತಿ ನೀಡಿದ್ದಾನೆ. ನುಸುಳುವಾಗ ಉಗ್ರರು ಪ್ರಾದೇಶಿಕ ನಿವಾಸಿಗಳಂತೆ ಮುಖವಾಡ ಧರಿಸಿರುವ ಸಾಧ್ಯತೆ ಇದೆ. ಪ್ರಾದೇಶಿಕ ಪೊಲೀಸ್ ಇಲಾಖೆ ಮತ್ತು ಇತರ ಕಾನೂನು ಸಂಸ್ಥೆಗಳನ್ನು ಕಟ್ಟೆಚ್ಚರದಲ್ಲಿ ಇಡಲಾಗಿದೆ" ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘಕಾಲ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

SCROLL FOR NEXT