ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಬಿರು ಬೇಸಿಗೆ; ರಾಂಚಿಯಲ್ಲಿ ಶಾಲೆಗಳನ್ನು ಅವಧಿಗೂ ಮುಂಚಿತವಾಗಿ ಮುಚ್ಚಲು ಸೂಚನೆ

ಬೇಸಿಗೆಯ ತಾಪ ವಿಪರೀತವಾಗುತ್ತಿರುವುದರಿಂದ ರಾಂಚಿಯಲ್ಲಿ ಶಾಲೆಗಳನ್ನು ಬೆಳಗ್ಗೆ ೧೧:೩೦ ರೊಳಗೆ ಮುಚ್ಚುವಂತೆ ಸೂಚಿಸಲಾಗಿದೆ ಎಂದು ಮಂಗಳವಾರ ಅಧಿಕಾರಿಯೊಬ್ಬರು

ರಾಂಚಿ: ಬೇಸಿಗೆಯ ತಾಪ ವಿಪರೀತವಾಗುತ್ತಿರುವುದರಿಂದ ರಾಂಚಿಯಲ್ಲಿ ಶಾಲೆಗಳನ್ನು ಬೆಳಗ್ಗೆ ೧೧:೩೦ ರೊಳಗೆ ಮುಚ್ಚುವಂತೆ ಸೂಚಿಸಲಾಗಿದೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಹೊಸ ಸಮಯದ ನಿಯಮ ಬುಧವಾರದಿಂದ ಜಾರಿಯಲ್ಲಿರಲಿದೆ ಎಂದು ಕೂಡ ಧಿಕಾರಿ ತಿಳಿಸಿದ್ದಾರೆ.

೮ನೆ ತರಗತಿಯವರೆಗೆ ಶಾಲೆಗಳನ್ನು ಬೆಳಗ್ಗೆ ೧೦:೩೦ ರೊಳಗೆ ಮುಗಿಸಬೇಕು ಮತ್ತು ೯ನೇ ತರಗತಿಂದ ೧೨ನೇ ತರಗತಿಯವರೆಗೆ ಬೆಳಗ್ಗೆ ೧೧:೩೦ಕ್ಕೆ ತರಗತಿಗಳನ್ನು ಮುಗಿಸಬೇಕು ಎಂದು ಅವರು ತಿಳಿಸಿದ್ದಾರೆ.

ಜಾರ್ಖಂಡ ರಾಜ್ಯದ ಸ್ಥಾಪನೆಗೂ ಮುಂಚಿತವಾಗಿ ಬಿಹಾರದ ಬೇಸಿಗೆ ರಾಜಧಾನಿಯಾಗಿದ್ದ ರಾಂಚಿ ಈ ವರ್ಷ ಏಪ್ರಿಲ್ ೧ ರಿಂದ ೪೦ ಡಿಗ್ರಿಗಿಂತಲೂ ಹೆಚ್ಚಿನ ತಾಪಮಾನದಿಂದ ಬಳಲುತ್ತಿದೆ.

ಸೋಮವಾರ ಸೂರ್ಯನ ಶಾಖದಿಂದ ಬಳಲಿ ವಿದ್ಯಾರ್ಥಿನಿಯೊಬ್ಬಳು ಅಸು ನೀಗಿರುವ ವರದಿಯಾಗಿದೆ.

ಅತೀವ ತಾಪಮಾನದಿಂದ ಜಾರ್ಖಂಡದಲ್ಲಿ ಇಲ್ಲಿಯವರೆಗೂ ೧೫ ಜನ ಮೃತಪಟ್ಟಿದ್ದು, ಜೆಮ್ ಶೆಡ್ ಪುರ ಮತ್ತು ದಲ್ತಂಗಂಜ್ ನಲ್ಲಿ ಉಷ್ಣಾಂಶ ೪೫ ಡಿಗ್ರಿಗೂ ಹೆಚ್ಚಿದೆ.

ರಾಂಚಿ, ಜೆಮ್ ಶೆಡ್ ಪುರ ಮತ್ತು ದಲ್ತಂಗಂಜ್ ಹಾಗೂ ರಾಜ್ಯದ ಮತ್ತಿತರ ಭಾಗಗಳಲ್ಲಿ ನೀರಿನ ಸಮಸ್ಯೆಯೂ ತೀವ್ರವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT