ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಬಿರು ಬೇಸಿಗೆ; ರಾಂಚಿಯಲ್ಲಿ ಶಾಲೆಗಳನ್ನು ಅವಧಿಗೂ ಮುಂಚಿತವಾಗಿ ಮುಚ್ಚಲು ಸೂಚನೆ

ಬೇಸಿಗೆಯ ತಾಪ ವಿಪರೀತವಾಗುತ್ತಿರುವುದರಿಂದ ರಾಂಚಿಯಲ್ಲಿ ಶಾಲೆಗಳನ್ನು ಬೆಳಗ್ಗೆ ೧೧:೩೦ ರೊಳಗೆ ಮುಚ್ಚುವಂತೆ ಸೂಚಿಸಲಾಗಿದೆ ಎಂದು ಮಂಗಳವಾರ ಅಧಿಕಾರಿಯೊಬ್ಬರು

ರಾಂಚಿ: ಬೇಸಿಗೆಯ ತಾಪ ವಿಪರೀತವಾಗುತ್ತಿರುವುದರಿಂದ ರಾಂಚಿಯಲ್ಲಿ ಶಾಲೆಗಳನ್ನು ಬೆಳಗ್ಗೆ ೧೧:೩೦ ರೊಳಗೆ ಮುಚ್ಚುವಂತೆ ಸೂಚಿಸಲಾಗಿದೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಹೊಸ ಸಮಯದ ನಿಯಮ ಬುಧವಾರದಿಂದ ಜಾರಿಯಲ್ಲಿರಲಿದೆ ಎಂದು ಕೂಡ ಧಿಕಾರಿ ತಿಳಿಸಿದ್ದಾರೆ.

೮ನೆ ತರಗತಿಯವರೆಗೆ ಶಾಲೆಗಳನ್ನು ಬೆಳಗ್ಗೆ ೧೦:೩೦ ರೊಳಗೆ ಮುಗಿಸಬೇಕು ಮತ್ತು ೯ನೇ ತರಗತಿಂದ ೧೨ನೇ ತರಗತಿಯವರೆಗೆ ಬೆಳಗ್ಗೆ ೧೧:೩೦ಕ್ಕೆ ತರಗತಿಗಳನ್ನು ಮುಗಿಸಬೇಕು ಎಂದು ಅವರು ತಿಳಿಸಿದ್ದಾರೆ.

ಜಾರ್ಖಂಡ ರಾಜ್ಯದ ಸ್ಥಾಪನೆಗೂ ಮುಂಚಿತವಾಗಿ ಬಿಹಾರದ ಬೇಸಿಗೆ ರಾಜಧಾನಿಯಾಗಿದ್ದ ರಾಂಚಿ ಈ ವರ್ಷ ಏಪ್ರಿಲ್ ೧ ರಿಂದ ೪೦ ಡಿಗ್ರಿಗಿಂತಲೂ ಹೆಚ್ಚಿನ ತಾಪಮಾನದಿಂದ ಬಳಲುತ್ತಿದೆ.

ಸೋಮವಾರ ಸೂರ್ಯನ ಶಾಖದಿಂದ ಬಳಲಿ ವಿದ್ಯಾರ್ಥಿನಿಯೊಬ್ಬಳು ಅಸು ನೀಗಿರುವ ವರದಿಯಾಗಿದೆ.

ಅತೀವ ತಾಪಮಾನದಿಂದ ಜಾರ್ಖಂಡದಲ್ಲಿ ಇಲ್ಲಿಯವರೆಗೂ ೧೫ ಜನ ಮೃತಪಟ್ಟಿದ್ದು, ಜೆಮ್ ಶೆಡ್ ಪುರ ಮತ್ತು ದಲ್ತಂಗಂಜ್ ನಲ್ಲಿ ಉಷ್ಣಾಂಶ ೪೫ ಡಿಗ್ರಿಗೂ ಹೆಚ್ಚಿದೆ.

ರಾಂಚಿ, ಜೆಮ್ ಶೆಡ್ ಪುರ ಮತ್ತು ದಲ್ತಂಗಂಜ್ ಹಾಗೂ ರಾಜ್ಯದ ಮತ್ತಿತರ ಭಾಗಗಳಲ್ಲಿ ನೀರಿನ ಸಮಸ್ಯೆಯೂ ತೀವ್ರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT